ಕರಾವಳಿ

ನಿಖಿಲ್ ಶೆಟ್ಟಿಗೆ ಬೆಳ್ಳಿ ಪದಕ: ಗಾಮಾ ಏಷ್ಯನ್ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಫೈಟರ್‌ ಸಾಧನೆ

(ನ್ಯೂಸ್‌ ಕಡಬ) newskadaba.com,  ಆ.04:  ಮಂಗಳೂರು: ಮಲೇಷ್ಯಾದಲ್ಲಿ ನಡೆದ ಗಾಮಾ ಏಷ್ಯನ್ ಚಾಂಪಿಯನ್‌ಶಿಪ್–2026ರಲ್ಲಿ ಮಂಗಳೂರಿನ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಫೈಟರ್ ನಿಖಿಲ್ ಶೆಟ್ಟಿ 74.9 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ. ಏಷ್ಯಾದ ಪ್ರಬಲ ಹವ್ಯಾಸಿ ಸ್ಪರ್ಧಾಳುಗಳನ್ನು ಎದುರಿಸಿ ಫೈನಲ್ ಪ್ರವೇಶಿಸಿದ್ದ ನಿಖಿಲ್, ಕೋಚ್ ಕೌಶಿಕ್ ಬೋಳೂರು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಕಶರ್ಪ್ ಫಿಟ್ನೆಸ್ ಮತ್ತು ದಿ ಡೆನ್’‌ನಲ್ಲಿ ಅಭ್ಯಾಸ ನಡೆಸುತ್ತಿರುವ ಅವರು ಅಲ್ಲಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ […]

ನಿಖಿಲ್ ಶೆಟ್ಟಿಗೆ ಬೆಳ್ಳಿ ಪದಕ: ಗಾಮಾ ಏಷ್ಯನ್ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಫೈಟರ್‌ ಸಾಧನೆ Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಫುಕೆಟ್ – ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ತೀವ್ರ ಟರ್ಬುಲೆನ್ಸ್: ಪ್ರಯಾಣಿಕರು, ಸಿಬ್ಬಂದಿ ಸೇರಿ 12 ಜನರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಆ.04:  ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್‌ಗೆ (ಪ್ರಕ್ಷುಬ್ಧತೆ) ಸಿಲುಕಿದ ಪರಿಣಾಮ ದಿಢೀರ್ 300 ಅಡಿ ಕುಸಿದು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದು, ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ. AI2379 ವಿಮಾನವು ಬೆಳಿಗ್ಗೆ 8:25ಕ್ಕೆ ಫುಕೆಟ್‌ನಿಂದ ಹೊರಟಿದ್ದು, ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಹಾರಾಟದ ವೇಳೆ ವಿಮಾನವು ಏಕಾಏಕಿ ಸುಮಾರು 300 ಅಡಿ

ಫುಕೆಟ್ – ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ತೀವ್ರ ಟರ್ಬುಲೆನ್ಸ್: ಪ್ರಯಾಣಿಕರು, ಸಿಬ್ಬಂದಿ ಸೇರಿ 12 ಜನರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2030 ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಅಧಿಕೃತ ಆತಿಥ್ಯ!

(ನ್ಯೂಸ್‌ ಕಡಬ) newskadaba.com,  ಆ.04:  2030ರ ಶತಮಾನೋತ್ಸವ  ಕಾಮನ್‌ವೆಲ್ತ್ ಕೂಟಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ.   ನೀರಜ್ ಚೋಪ್ರಾ, ಪಿ.ಟಿ. ಉಷಾ ಮತ್ತು ಹರ್ಷ್ ಸಂಘವಿ ಅವರಿಗೆ ಸ್ಕಾಟ್‌ಲ್ಯಾಂಡ್ ಅಧಿಕಾರಿಗಳಿಂದ ಅಧಿಕೃತ ಬ್ಯಾಟನ್ ಹಾಗೂ ಧ್ವಜ ಹಸ್ತಾಂತರ. ಶಂಕರ್ ಮಹಾದೇವನ್ ಅವರ ದೇಶಭಕ್ತಿ ಗೀತೆಗಳು, ಮನುಷಿ ಚಿಲ್ಲರ್ ನೃತ್ಯ ಪ್ರದರ್ಶನ ಹಾಗೂ ಭಾರತ-ಸ್ಕಾಟ್‌ಲ್ಯಾಂಡ್ ಕಲಾವಿದರ ‘ಜುಗಲ್ಬಂದಿ’ ಪ್ರೇಕ್ಷಕರ ಮನಸೆಳೆಯಿತು.ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ 4ನೇ ಸ್ಥಾನ ಪಡೆದು

2030 ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಅಧಿಕೃತ ಆತಿಥ್ಯ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಹೆದ್ದಾರಿ 66ರ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ: ಬೂದಿಯಾಯ್ತು ತೆಕ್ಕಟ್ಟೆಯ ದಿನಸಿ ಅಂಗಡಿ!

(ನ್ಯೂಸ್‌ ಕಡಬ) newskadaba.com,  ಆ.04: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ದಿನಸಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆಯ ಶ್ರೀ ಬ್ರಹ್ಮಸ್ಥಾನ ಸಮೀಪದ ಗುರು ಬ್ರಹ್ಮ ಜನರಲ್ ಸ್ಟೋರ್ ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.ಮಂಗಳವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ಅಂಗಡಿ ಮುಚ್ಚಿ ಮನೆಗೆ ತೆರಳಿದ ಬಳಿಕ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ಅಂಗಡಿಗೆ ವ್ಯಾಪಿಸಿದೆ. ಅಗ್ನಿ

ರಾಷ್ಟ್ರೀಯ ಹೆದ್ದಾರಿ 66ರ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ: ಬೂದಿಯಾಯ್ತು ತೆಕ್ಕಟ್ಟೆಯ ದಿನಸಿ ಅಂಗಡಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ: ಹಸಿರು ಮಾರ್ಗಕ್ಕೆ ಶೀಘ್ರವೇ 3 ಹೊಸ ರೈಲು ಸೇರ್ಪಡೆ!

(ನ್ಯೂಸ್‌ ಕಡಬ) newskadaba.com,  ಆ.04: ಬೆಂಗಳೂರು ಮೆಟ್ರೋದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಹಸಿರು ಮಾರ್ಗಕ್ಕೆ ಈ ತಿಂಗಳಾಂತ್ಯದೊಳಗೆ (ಆಗಸ್ಟ್) 3 ಹೊಸ ರೈಲುಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ. ರೈಲುಗಳು ಅಗತ್ಯ ಆಂತರಿಕ ಸುರಕ್ಷತಾ ಮೌಲ್ಯಮಾಪನ ಪ್ರಮಾಣಪತ್ರ ಪಡೆದಿವೆ. ಮೆಟ್ರೋ ರೈಲ್ವೆ ಸುರಕ್ಷತಾ ಪರಿಶೀಲನೆ ಹಾಗೂ ವಾಣಿಜ್ಯ ಸಂಚಾರಕ್ಕೆ ಅಂತಿಮ ಅನುಮೋದನೆ ದೊರೆತ ತಕ್ಷಣ ಸೇವೆಗೆ ಮುಕ್ತವಾಗಲಿವೆ.ಚೀನಾದ CRRC ಸಂಸ್ಥೆಯು 21 ರೈಲುಗಳನ್ನು ಪೂರೈಸುತ್ತಿದ್ದು, ಪ್ರೊಟೊಟೈಪ್ ರೈಲು ಚೀನಾದಲ್ಲಿ ತಯಾರಾಗಿದೆ. ಉಳಿದ ರೈಲುಗಳನ್ನು ಕೋಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್

ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ: ಹಸಿರು ಮಾರ್ಗಕ್ಕೆ ಶೀಘ್ರವೇ 3 ಹೊಸ ರೈಲು ಸೇರ್ಪಡೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಲ್ಲಾಮಟ್ಟದ “ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ”

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ಮೈ ಭಾರತ್ ದಕ್ಷಿಣ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್), ಮಂಗಳೂರು ವಿಶ್ವವಿದ್ಯಾನಿಲಯ, ಯೂತ್ ರೆಡ್ ಕ್ರಾಸ್ ಹಾಗೂ ಶ್ರೀ ರಾಮಕೃಷ್ಣ ಕಾಲೇಜು, ಮಂಗಳೂರು ಸಂಯುಕ್ತ ಆಶ್ರಯದಲ್ಲಿ “ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ” (ಮಾದಕ ದ್ರವ್ಯ ಮುಕ್ತ ಯುವಕರಿಂದ ವಿಕಸಿತ ಭಾರತ) ಎಂಬ ವಿಷಯದಡಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ನಗರದ

ಜಿಲ್ಲಾಮಟ್ಟದ “ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ” Read More »

ಕರಾವಳಿ

ಅಡಿಕೆ ಸಸಿ ಮಾರಾಟಕ್ಕೆ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಡೀಲು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಸಸಿ ರೂ.25 ಇಲಾಖಾ ದರದಂತೆ ಮಾರಾಟಕ್ಕೆ ಲಭ್ಯವಿರುತ್ತದೆ. ಗಿಡಗಳನ್ನು ಕ್ಷೇತ್ರವನ್ನು  (ದೂ.ಸಂ: 9972057821) ಸಂಪರ್ಕಿಸಿ ಪಡೆಯಬಹುದು ಎಂದು  ರಾಜ್ಯವಲಯ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ ಸಸಿ ಮಾರಾಟಕ್ಕೆ ಲಭ್ಯ Read More »

ಕರಾವಳಿ

ಆಗಸ್ಟ್ 11ರಂದು ಅಣಬೆ ಕೃಷಿ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ಸಿರಿ ತೋಟಗಾರಿಕೆ ಸಂಘ (ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ), ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣ ಬೆಂದೂರು, ಮಂಗಳೂರು ಇದರ ವತಿಯಿಂದ, ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡರ ಜನ್ಮದಿನಾಚರಣೆ ಸಪ್ತಾಹದ ಅಂಗವಾಗಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮವನ್ನು ಆಗಸ್ಟ್  11 ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಬೆಂದೂರು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ರೂ. 100 ಶುಲ್ಕ ಪಾವತಿಸಿ ಆಗಸ್ಟ್

ಆಗಸ್ಟ್ 11ರಂದು ಅಣಬೆ ಕೃಷಿ ತರಬೇತಿ Read More »

ಕರಾವಳಿ

ಪೆರಿಯಶಾಂತಿ- ಗುಡ್ಡ ಕುಸಿತ ರಸ್ತೆಗೆ ಮರ ಉರುಳಿಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಆ. 03. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಡಬ ತಾಲೂಕಿನ ಪೆರಿಯಶಾಂತಿ ಸಮೀಪ ಭಾನುವಾರದಂದು ಗುಡ್ಡ ಕುಸಿದು, ಅದರೊಂದಿಗೆ ದೊಡ್ಡ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗುಡ್ಡ ಕುಸಿತದಿಂದ ಮಣ್ಣು ಹಾಗೂ ಮರ ರಸ್ತೆ ಮಧ್ಯೆ ಬಿದ್ದ ಕಾರಣ ಎರಡೂ ದಿಕ್ಕಿನ ವಾಹನಗಳು ಕೆಲ ಸಮಯ ಸಂಚರಿಸಲು ಸಾಧ್ಯವಾಗದೆ ಚಾಲಕರು ಪರದಾಡುವಂತಾಯಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ಹೆದ್ದಾರಿ

ಪೆರಿಯಶಾಂತಿ- ಗುಡ್ಡ ಕುಸಿತ ರಸ್ತೆಗೆ ಮರ ಉರುಳಿಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ದುಶ್ಚಟಗಳ ನಿರ್ಮೂಲನೆಗೆ ಮಹಾಂತ ಶಿವಯೋಗಿಗಳ ಸೇವೆ ಅವಿಸ್ಮರಣೀಯ- ಎಎಸ್ಪಿ ಡ್ರಗ್ಸ್ ಚಟುವಟಿಕೆ ಮಾಹಿತಿ ನೀಡಲು ವಿದ್ಯಾರ್ಥಿಗಳಿಗೆ ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ಜನರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಲು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ   ಡಾ.ಮಹಾಂತ ಶಿವಯೋಗಿಗಳು ನೀಡಿದ ಕೊಡುಗೆ ಅವಿಸ್ಮರಣೀಯ. ಅವರು ಸಮಾಜದ ಯುವ ಪೀಳಿಗೆಯನ್ನು ದುಶ್ಚಟಗಳಿಂದ ರಕ್ಷಿಸುವ ಕಡೆಗೆ ಚಿತ್ತ ಹರಿಸಿ ದುಶ್ಚಟಗಳ ಬಗ್ಗೆ ಸತತ ಜಾಗೃತಿ, ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಸುಧಾರಣೆಗೆ ಪಣತೊಟ್ಟ ಮಹಾನ್ ಚೇತನ  ಎಂದು ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು. ಅವರು ನಗರದ ಕೆನರಾ

ದುಶ್ಚಟಗಳ ನಿರ್ಮೂಲನೆಗೆ ಮಹಾಂತ ಶಿವಯೋಗಿಗಳ ಸೇವೆ ಅವಿಸ್ಮರಣೀಯ- ಎಎಸ್ಪಿ ಡ್ರಗ್ಸ್ ಚಟುವಟಿಕೆ ಮಾಹಿತಿ ನೀಡಲು ವಿದ್ಯಾರ್ಥಿಗಳಿಗೆ ಕರೆ Read More »

ಕರಾವಳಿ
Scroll to Top