ಕರಾವಳಿ

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ► ಸಾಂತೋಮ್ ವಿದ್ಯಾನಿಕೇತನ ತಾಲೂಕು ಮಟ್ಟಕ್ಕೆಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ .19, ಸ.ಉ.ಹಿ.ಪ್ರಾ. ಶಾಲೆ ಜಂತಡ್ಕದಲ್ಲಿ ನಡೆದ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ ಶಾಲೆಯು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇವರಿಗೆ ದೈಹಿಕ ಶಿಕ್ಷಕಿ ಶ್ರೀಮತಿ ಜಿಶಾಥೋಮಸ್ ತರಬೇತಿ ನೀಡಿರುತ್ತಾರೆ.

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ► ಸಾಂತೋಮ್ ವಿದ್ಯಾನಿಕೇತನ ತಾಲೂಕು ಮಟ್ಟಕ್ಕೆಆಯ್ಕೆ Read More »

ಕರಾವಳಿ

ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ► ಅಸಹಾಯಕ ಕುಟುಂಬಗಳಿಗೆ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಕಡಬ, ಆ .19, ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ಟ್ರಸ್ಟ್‌ ವತಿಯಿಂದ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘಟನೆಯ ಆಶಯದಂತೆ ಸಮಾಜದ ಅಸಹಾಯಕ ಕುಟುಂಬಗಳ ಭೇಟಿ, ಸಾಂತ್ವನ, ಸಹಾಯಹಸ್ತ ಚಾಚಲಾಯಿತು. ನೂಜಿಬಾಳ್ತಿಲ ಬೆಥನಿ ವೃದ್ದಾಶ್ರಮಕ್ಕೆ ಭೇಟಿ ನೀಡಿ ಅಕ್ಕಿ, ಸಾಮಾಗ್ರಿಗಳನ್ನು ವಿತರಿಸಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ನಂತರ ಅನಾರೋಗ್ಯದಿಂದ ಬಳಲುತ್ತಿರುವ ನಿತ್ಯಾಧರ್ ಕೋಲ್ಡ್‌ ಸ್ಟೋರೇಜ್ ಮಾಲಕ ಪೀಟರ್ ಫರ್ನಾಂಡೀಸ್ ರವರ ಮನೆಗೆ ಹಾಗೂ ಅಪಘಾತದಿಂದ ಗಾಯಗೊಂಡ ಅಸಹಾಯಕರಾದ ಬಾಲಕೃಷ್ಣ ಪಟ್ನರವರ ಮನೆಗೆ ತೆರಳಿ

ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ► ಅಸಹಾಯಕ ಕುಟುಂಬಗಳಿಗೆ ಸಹಾಯಹಸ್ತ Read More »

ಕರಾವಳಿ

ಶರತ್ ಮಡಿವಾಳ ಕೊಲೆ ಪ್ರಕರಣ ► ಮತ್ತಿಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.19. ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಬಂಧಿತರನ್ನು ಸಕಲೇಶಪುರ ನಿವಾಸಿಗಳಾದ ಸುಹೈಲ್​ ಹಾಗೂ ಸಾದಿಕ್​ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡದ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.  ಜುಲೈ 4ರಂದು ಆರೆಸ್ಸೆಸ್ ಕಾರ್ಯಕರ್ತ ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳರ ಮೇಲೆ

ಶರತ್ ಮಡಿವಾಳ ಕೊಲೆ ಪ್ರಕರಣ ► ಮತ್ತಿಬ್ಬರು ಆರೋಪಿಗಳ ಬಂಧನ Read More »

ಕರಾವಳಿ

ಕಲ್ಲುಗುಡ್ಡೆ: ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ .19, ಇಲ್ಲಿನ ಕಲ್ಲುಗುಡ್ಡೆ ಸಮೀಪದ ನೂಜಿ ರೆಂಜಿಲಾಡಿ ಮಾರಪ್ಪೆ ನಿವಾಸಿ ಕುಂಞಣ್ಣ ಗೌಡ ಎಂಬವರ ಪುತ್ರ ಜಿನ್ನಪ್ಪ ಗೌಡ(47) ತನ್ನ ತೋಟದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ಶನಿವಾರಂದು ಕಂಡುಬಂದಿದೆ. ಪಕ್ಷವಾತ ಖಾಯಿಲೆಗೆ ತುತ್ತಾಗಿದ್ದ ಜಿನ್ನಪ್ಪ ಗೌಡರು ಗುಣಮುಖಗೊಂಡಿದ್ದು, ಶುಕ್ರವಾರದಂದು ಕಡಬ ಪೇಟೆಗೆ ಬಂದಿದ್ದರೆನ್ನಲಾಗಿದೆ. ಶುಕ್ರವಾರ ರಾತ್ರಿ ಮನೆಯಿಂದ ಹೊರಹೋಗಿದ್ದ ಅವರು ತನ್ನ ತೋಟದ ಕೆರೆಯ ಸಮೀಪ ಕುಸಿದುಬಿದ್ದಿದ್ದು, ರಾತ್ರಿಯಿಂದ ಮನೆಯವರೆಲ್ಲ ಹುಡುಕಾಡಿದ್ದಾರೆನ್ನಲಾಗಿದೆ. ಆದರೆ ಶನಿವಾರದಂದು ಮಧ್ಯಾಹ್ನ ತೋಟದಲ್ಲಿ ಕೆರೆಯ ಸಮೀಪ

ಕಲ್ಲುಗುಡ್ಡೆ: ಕುಸಿದು ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಪೊಲೀಸರಿಗೆ ಶರಣಾದ ಪತಿ!!

(ನ್ಯೂಸ್ ಕಡಬ) newskadaba.com ಮಂಗಳೂರು, ಆ .19, ಪತ್ನಿಯ ಶೀಲ ಶಂಕಿಸಿದ ಪತಿ ಮಹಾಶಯನೊಬ್ಬ ಆಕೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ಕೊಟ್ಟಾರ ಚೌಕಿಯ ಜೆ. ಬಿ. ಲೋಬೊ ರಸ್ತೆಯಲ್ಲಿ  ವಾಸವಿದ್ದ ಬ್ಲೋಸಮ್ ಲೋಬೋ (31) ಕೊಲೆಯಾದ ಮಹಿಳೆಯಾಗಿದ್ದು, ಗಂಡ ವಿಲಿಯಮ್ ಲೋಬೋ (35) ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬ್ಲೋಸಮ್ ಹಾಗೂ ಗಂಡ ವಿಲಿಯಂ ಲೋಬೊ ಮಧ್ಯೆ ಜಗಳ ಆರಂಭವಾಗಿದ್ದು, ಬಳಿಕ ಗಂಡ ಹೆಂಡತಿಯನ್ನು ಕೊಲೆ ಮಾಡಿ

ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಪೊಲೀಸರಿಗೆ ಶರಣಾದ ಪತಿ!! Read More »

ಕರಾವಳಿ

ವೃದ್ಧ ಮಹಿಳೆಯ ಮೇಲೆ ಹಂದಿಗಳ ದಾಳಿ

(ನ್ಯೂಸ್ ಕಡಬ) newskadaba.com ಆಂಧ್ರ ಪ್ರದೇಶ, ಆ .19, ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿ ವೃದ್ಧ ಮಹಿಳೆ ಮೇಲೆ ಹಂದಿಗಳು ದಾಳಿ ಮಾಡಿದ ದಾರುಣ ಘಟನೆ ನಡೆದಿದೆ. ರಸ್ತೆಯಲ್ಲಿ ವೃದ್ಧ ಮಹಿಳೆ ನಡೆದುಕೊಂಡು ಹೋಗುವಾಗ ಹಂದಿಗಳು ಆಕೆಯ ಮೇಲೆ ಏಕಾಏಕಿ ಎರಗಿವೆ. ಹಂದಿಗಳು ಆಕೆಯನ್ನು ರಸ್ತೆ ಮೇಲೆ ಕೆಡವಿ ಭಯಂಕರವಾಗಿ ದಾಳಿ ಮಾಡಿವೆ. ಇನ್ನು ವೃದ್ಧೆ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ್ದಾರೆ. ಸ್ಥಳೀಯರು ಬರುವಷ್ಟರಲ್ಲೇ ಹಂದಿಗಳ ದಾಳಿಯಲ್ಲಿ ಆಕೆ ಸಾಕಷ್ಟು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ

ವೃದ್ಧ ಮಹಿಳೆಯ ಮೇಲೆ ಹಂದಿಗಳ ದಾಳಿ Read More »

ಕರಾವಳಿ

ಕುಂಡಾಜೆ ಶಾಲೆಗೆ ರೂ,20ಸಾವಿರ ವೆಚ್ಚದಲ್ಲಿ ಸೋಲಾರ್ ದೀಪ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ .18, ರಾಮಕುಂಜ ಗ್ರಾಮದ ಕುಂಡಾಜೆ ಶಾಲೆಗೆ ಸೋಲಾರ್ ದೀಪದ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜನ ಶಿಕ್ಷಣ ಟ್ರಸ್ಟ್‌ ಮಂಗಳೂರು, ಸೆಲ್ಕೊಸೋಲಾರ್ ಪೌಂಡೇಶನ್ ಪುತ್ತೂರು, ಕೃಷಿ ಪತ್ತಿನ ಸಹಕಾರಿ ಸಂಘ ಆಲಂಕಾರು, ಒಡಿಯೂರು ಘಟಕ ಸಮಿತಿ ಕುಂಡಾಜೆ, ವಿದ್ಯಾರ್ಥಿ ಪೋಷಕರು, ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ದಾನಿಗಳ ನೆರವಿನಿಂದ ರೂ,20ಸಾವಿರ ವೆಚ್ಚದಲ್ಲಿ ಸೋಲಾರ್ ದೀಪವನ್ನು ಶಾಲೆಗೆ ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ, ರಾಮಕುಂಜ ಗ್ರಾ.ಪಂ.ಸದಸ್ಯರಾದ ಯತೀಶ್ ಬಾನಡ್ಕ, ರಾಮಕುಂಜ

ಕುಂಡಾಜೆ ಶಾಲೆಗೆ ರೂ,20ಸಾವಿರ ವೆಚ್ಚದಲ್ಲಿ ಸೋಲಾರ್ ದೀಪ ಹಸ್ತಾಂತರ Read More »

ಕರಾವಳಿ

ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ .18, ಸುಂಕದಕಟ್ಟೆ ಹಯಾತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾಗಿ ಮುಹಮ್ಮದ್ ರಾಫಿಹ್ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಿನಾನ್ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಆಜ್ಮಲ್, ಕೋಶಾಧಿಕಾರಿಯಾಗಿ ಮಹಮ್ಮದ್ ಶಫೀಕ್ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆಯು ಮತದಾನದ ಮೂಲಕ ಮದ್ರಸ ಸಭಾಂಗಣದಲ್ಲಿ ನಡೆಯಿತು. ಚುನಾವಣಾ ವೀಕ್ಷಕರಾಗಿ ಅನ್ಸಾರುಲ್ ಇಸ್ಲಾಂ ಯಂಗ್ಮೆನ್ಸ್‌ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಜಲೀಲ್, ಯುವ ಮುಂದಾಳು ಅಬ್ದುಲ್ ಅಝೀಝ್ ಸಹಕರಿಸಿದರು. ಖತಿಬರಾದ ಮಹಮ್ಮದ್ ಹನೀಫ್ ಫೈಝಿ,

ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ Read More »

ಕರಾವಳಿ

ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ಮರ…!

(ನ್ಯೂಸ್ ಕಡಬ) newskadaba.com ಕಡಬ, ಆ.18, ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಎಂಬಲ್ಲಿ ಅಪಾಯಕಾರಿ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಅನಾಹುತವನ್ನು ಆಹ್ವಾನಿಸುತ್ತಿದೆ. ರಾಜ್ಯ ರಸ್ತೆಯಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಿರುಗುವಲ್ಲಿ ಧರೆಯ ಅಂಚಿನಲ್ಲಿ ರಸ್ತೆಗೆ ಬಾಗಿ ನಿಂತಿದೆ. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಯಾತ್ರಾರ್ಥಿಗಳ ವಾಹನಗಳಲ್ಲದೆ, ಶಾಲಾ  – ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಕಳೆದ ಮರ್ದಾಳ ಗ್ರಾಮ ಸಭೆಯಲ್ಲಿ ಈ ಮರ ತೆರವಿನ ಕುರಿತು ಗ್ರಾಮಸ್ಥರು

ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ಮರ…! Read More »

ಕರಾವಳಿ

ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ…!!!

(ನ್ಯೂಸ್ ಕಡಬ) newskadaba.com ಮುಂಬೈ, ಆ .18, ಮಗನ ದೌರ್ಜನ್ಯದಿಂದ ಬೇಸತ್ತ ತಾಯಿಯೊಬ್ಬಳು ಸೊಸೆಯನ್ನು ಕಾಪಾಡುವ ಸಲುವಾಗಿ ತನ್ನ ಸ್ವಂತ ಮಗನನ್ನೇ ಉಸಿರುಗಟ್ಟಿ ಸಾಯಿಸಿದ ಘಟನೆ ನಗರದ ಮಂಖುರ್ಡ್ ಪ್ರದೇಶದಿಂದ ವರದಿಯಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗನನ್ನು ಕೊಂದು ಮಹಿಳೆ ಅನ್ವರಿ ಇದ್ರೀಸಿ ಆತನ ಕಳೇಬರದೊಂದಿಗೆ ಇಡೀ ರಾತ್ರಿ ಕಳೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಾಯಿಯ ಕೈಯಿಂದಲೇ ಕೊಲೆಗೀಡಾದ ನದೀಂ ನೈಮ್ (25) ತನ್ನ ಪತ್ನಿ, ತಾಯಿ, ಇಬ್ಬರು ಹಿರಿಯ ಸೋದರರು ಮತ್ತವರ ಪತ್ನಿಯಂದಿರ

ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ…!!! Read More »

ಕರಾವಳಿ
Scroll to Top