ರೇಬಿಸ್ ಲಸಿಕೆಗೆ ತೆರಳಿದ ವ್ಯಕ್ತಿಗೆ ಕೋವಿಡ್ ಲಸಿಕೆ ಹಾಕಿದ ಸಿಬ್ಬಂದಿಗಳು..!

(ನ್ಯೂಸ್ ಕಡಬ) newskadaba.com ಜಾರ್ಖಂಡ್, ನ. 02. ನಾಯಿ ಕಚ್ಚಿದೆಯೆಂದು ರೇಬಿಸ್​ ಲಸಿಕೆ​ ಪಡೆಯಲು ಆಸ್ಪತ್ರೆಗೆ ತೆರಳಿದ ವ್ಯಕ್ತಿಯೋರ್ವನಿಗೆ ಆಸ್ಪತ್ರೆಯ ಸಿಬ್ಬಂದಿಗಳು ಕೋವಿಡ್ ವ್ಯಾಕ್ಸಿನ್ ಕೊಟ್ಟು ಕಳುಹಿಸಿದ ಘಟನೆ ಜಾರ್ಖಂಡ್ ನ ಪಲಾಮು ಜಿಲ್ಲೆಯ ಆರೋಗ್ಯ ಕೇಂದ್ರವೊಂದರಲ್ಲಿ ನಡೆದಿದೆ.

ರಾಜು ಸಿಂಗ್ ಎಂಬ ವ್ಯಕ್ತಿಗೆ ನಾಯಿ ಕಚ್ಚಿದ್ದ ಹಿನ್ನೆಲೆ ಆಂಟಿ ರೇಬಿಸ್ ಲಸಿಕೆಗಾಗಿ ಪಲಾಮು ಜಿಲ್ಲೆಯ ಪಟಾನ್ ಬ್ಲಾಕ್ ಹೆಡ್ಕ್ವಾರ್ಟರ್ಸ್ ಹೆಲ್ತ್ ಸೆಂಟರ್‌ಗೆ ಬಂದಿದ್ದು, ಅಲ್ಲಿನ ಆರೋಗ್ಯ ಕಾರ್ಯಕರ್ತರು, ರೇಬಿಸ್ ಲಸಿಕೆ ಬದಲು ಕೊರೊನಾ ಲಸಿಕೆ ಹಾಕಿದ್ದಾರೆ.

Also Read  ಮಣಿಪುರ ಹಿಂಸಾಚಾರದ ಕರಾಳ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

error: Content is protected !!
Scroll to Top