ಕೇಂದ್ರ ಸಚಿವರ ಪ್ರವಾಸ

ಮ0ಗಳೂರು ಮೇ 26 ಕರ್ನಾಟಕ ವಾರ್ತೆ:- ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅವರು ಮೇ 28 ರಂದು 4.25 ಗಂಟೆಗೆ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿ, ಸಂಜೆ 6 ಗಂಟೆಗೆ ಅಡ್ಯಾರ್‍ನಲ್ಲಿ ಯಕ್ಷ ಧ್ರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು, ರಾತ್ರಿ 8.45 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

ಚಿತ್ರ ಶೀರ್ಷಿಕೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೆಂಕಟೇಶ್ ಅವರು ಸೇವಾ ನಿವೃತ್ತಿ ಬಗ್ಗೆ ವರ್ಗಾವಣೆ ಆಗಿ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಬೀಳ್ಕೊಡುಗೆ ಮಾಡಿದರು. ಉಪಕಾರ್ಯದರ್ಶಿ ಎನ್.ಆರ್ ಉಮೇಶ್ , ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಹೆಗ್ಡೆ, ಯೋಜನಾ ನಿರ್ದೇಶಕ ಲೋಕೇಶ್ ಮತ್ತಿತರರು ಇದ್ದರು.

error: Content is protected !!
Scroll to Top