ಕರಾವಳಿ

ಕಾಸರಗೋಡು: ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

(ನ್ಯೂಸ್‌ ಕಡಬ) newskadaba.com,  ಆ.20:  ಕಾಸರಗೋಡಿನ ಎಂ.ಜಿ. ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ತಳಂಗರ ಬಾಂಗೋಡ್ ನ ಹನೀಫ್ (55) ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಹನೀಫ್ ಅವರ ಕಾಲಿನ ಮೇಲೆ ಲಾರಿ ಹರಿದು ಗಂಭೀರ ಗಾಯಗೊಂಡಿದ್ದರು.ಸ್ಥಳೀಯರು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ […]

ಕಾಸರಗೋಡು: ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಕಲೇಶಪುರ–ಸುಬ್ರಹ್ಮಣ್ಯ ರೋಡ್‌ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ

(ನ್ಯೂಸ್‌ ಕಡಬ) newskadaba.com,  ಆ.19ತಾಂತ್ರಿಕವಾಗಿ ಸವಾಲಿನಿಂದ ಕೂಡಿದ ಪಶ್ಚಿಮ ಘಟ್ಟದ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಅಧಿಕಾರಿಗಳು ಇದರ ಕಾರ್ಯಾಚರಣೆ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು. ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕ (GM) ಪಿ. ಅನಂತ್ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಅವರು ಸ್ಥಳದಲ್ಲಿದ್ದು, ರೈಲ್ವೇ ಮೂಲಸೌಕರ್ಯದ ಸಿದ್ಧತೆಯನ್ನು ಅವಲೋಕಿಸಿದರು.’ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ

ಸಕಲೇಶಪುರ–ಸುಬ್ರಹ್ಮಣ್ಯ ರೋಡ್‌ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರಕಾರಿ ಬಸ್ ಟಿಕೆಟ್ ದರ ಏರಿಕೆ ಸುಳಿವು ನೀಡಿದ ಸಚಿವ ಬೈರತಿ ಸುರೇಶ್

(ನ್ಯೂಸ್‌ ಕಡಬ) newskadaba.com,  ಆ.19 ಬೆಂಗಳೂರು: ಡೀಸೆಲ್‌ ಬೆಲೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರಕಾರಿ ಬಸ್‌ ಪ್ರಯಾಣ ದರ ಪರಿಷ್ಕರಣೆಯಾಗುವ ಸ್ಪಷ್ಟ ಸುಳಿವನ್ನು ಸಾರಿಗೆ ಸಚಿವ ಬೈರತಿ ಸುರೇಶ್‌ ನೀಡಿದ್ದಾರೆ. ಟಿಕೆಟ್‌ ದರ ಪರಿಷ್ಕರಣೆ ಕುರಿತು ಪರಿಶೀಲಿಸಲು ಅತುಲ್‌ ಕುಮಾರ್‌ ತಿವಾರಿ ನೇತೃತ್ವದ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ಸಮಿತಿಯು ನಾಲ್ಕೂ ಸಾರಿಗೆ ನಿಗಮಗಳು ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಶೀಘ್ರದಲ್ಲೇ ವರದಿ ನೀಡಲಿದೆ. ವರದಿ

ಸರಕಾರಿ ಬಸ್ ಟಿಕೆಟ್ ದರ ಏರಿಕೆ ಸುಳಿವು ನೀಡಿದ ಸಚಿವ ಬೈರತಿ ಸುರೇಶ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನ-ಬೆಳ್ಳಿ ಪ್ರಿಯರಿಗೆ ಶುಭಸುದ್ದಿ ಇಂದು ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ!

(ನ್ಯೂಸ್‌ ಕಡಬ) newskadaba.com,  ಆ.19:  22 ಕ್ಯಾರಟ್ ಚಿನ್ನಕ್ಕೆ1 ಗ್ರಾಂಗೆ ₹85 ಇಳಿಕೆಯಾಗಿ ₹14,205 ರಷ್ಟಿದೆ…8 ಗ್ರಾಂ: ₹1,13,640, 10 ಗ್ರಾಂ: ₹1,42,050, 100 ಗ್ರಾಂ: ₹14,20,500… 24 ಕ್ಯಾರಟ್ ಚಿನ್ನ: 1 ಗ್ರಾಂಗೆ ₹92 ಇಳಿಕೆಯಾಗಿ ₹15,497 ರಷ್ಟಿದೆ. 8 ಗ್ರಾಂ: ₹1,23,976, 10 ಗ್ರಾಂ: ₹1,54,970, 100 ಗ್ರಾಂ: ₹15,49,700… ಬೆಳ್ಳಿ ದರಕ್ಕೆ 1 ಗ್ರಾಂಗೆ ₹245 ಹಾಗೂ 10 ಗ್ರಾಂ ಬೆಳ್ಳಿಗೆ ₹2,450 ,1 ಕೆಜಿ: ₹2,45,000

ಚಿನ್ನ-ಬೆಳ್ಳಿ ಪ್ರಿಯರಿಗೆ ಶುಭಸುದ್ದಿ ಇಂದು ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಾಗತಿಕ ‘ಶಾಂಘೈ ರ್ಯಾಂಕಿಂಗ್’ನಲ್ಲಿ ಸಾಧನೆ ಮೆರೆದ ಮಾಹೆ: ವಿಶ್ವದ ಟಾಪ್ ಯೂನಿವರ್ಸಿಟಿಗಳ ಪಟ್ಟಿಗೆ ಸೇರ್ಪಡೆ

(ನ್ಯೂಸ್‌ ಕಡಬ) newskadaba.com,  ಆ.19: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ……..ಶಾಂಘೈ ರ್‍ಯಾಂಕಿಂಗ್ ಕನ್ಸಲ್ಟೆನ್ಸಿಯ 2026ರ ‘ಅಕಾಡೆಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ (ARWU) ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿಕೆಯಾಗಿದೆ. ARWU ಟ್ರ್ಯಾಕರ್ ವಿಶ್ಲೇಷಣೆಯಂತೆ ಮಾಹೆ ಜಾಗತಿಕವಾಗಿ 779ನೇ ಸ್ಥಾನದಲ್ಲಿದ್ದು, ಭಾರತದಲ್ಲಿ 7ನೇ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.ಕಳೆದ ಬಾರಿಯ (801-900 ಶ್ರೇಣಿ) ಸಾಧನೆಗೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3

ಜಾಗತಿಕ ‘ಶಾಂಘೈ ರ್ಯಾಂಕಿಂಗ್’ನಲ್ಲಿ ಸಾಧನೆ ಮೆರೆದ ಮಾಹೆ: ವಿಶ್ವದ ಟಾಪ್ ಯೂನಿವರ್ಸಿಟಿಗಳ ಪಟ್ಟಿಗೆ ಸೇರ್ಪಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಪಾಧಿತೆ ಕೊನೆಗೂ ಬಂಧನ: ಬೆರಳಚ್ಚು ಪರೀಕ್ಷೆಯಿಂದ ಬಯಲಾಯ್ತು ನೈಜ ಗುರುತು!

(ನ್ಯೂಸ್‌ ಕಡಬ) newskadaba.com,  ಆ.19: ನ್ಯಾಯಾಲಯದ LPC ವಾರೆಂಟ್‌ನಿಂದ ತಪ್ಪಿಸಿಕೊಂಡು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆ. 18, 2026ರಂದು ಬಂಧಿಸಿದ್ದಾರೆ. 2011ರಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ‘ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ’ ಅಡಿಯಲ್ಲಿ ಕೇಸ್ ದಾಖಲಾಗಿತ್ತು (SPLIT CC ನಂ. 02/2014, LPC ನಂ. 10/2019).ಆರೋಪಿತೆಯು ಆರಂಭದಲ್ಲಿ ತನ್ನ ಹೆಸರು ಆಯಿಷಾ (36), ಪತಿ ಹಸನಬ್ಬ, ಗುರುಪುರ ವಿಳಾಸವೆಂದು ಸುಳ್ಳು ಮಾಹಿತಿ ನೀಡಿದ್ದಳು. ತನಿಖೆಯ

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಪಾಧಿತೆ ಕೊನೆಗೂ ಬಂಧನ: ಬೆರಳಚ್ಚು ಪರೀಕ್ಷೆಯಿಂದ ಬಯಲಾಯ್ತು ನೈಜ ಗುರುತು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಪ್ರೀಂ ಕೋರ್ಟ್ ಆದೇಶ: ಭಾರತದಲ್ಲಿ ‘ಗಲ್ಲಿಗೇರಿಸುವ’ ಶಿಕ್ಷಾ ಪದ್ಧತಿ ಮುಂದುವರಿಕೆ

(ನ್ಯೂಸ್‌ ಕಡಬ) newskadaba.com,  ಆ.19: ಭಾರತದಲ್ಲಿ ಮರಣದಂಡನೆ ಶಿಕ್ಷೆಗೆ ಪ್ರಸ್ತುತ ಜಾರಿಯಲ್ಲಿರುವ ‘ಗಲ್ಲಿಗೇರಿಸುವ’ ಪದ್ಧತಿಯು ಸಂವಿಧಾನಬದ್ಧವಾಗಿದ್ದು, ಅದನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.ಗಲ್ಲಿಗೇರಿಸುವ ಬದಲಿಗೆ ಮಾರಣಾಂತಿಕ ಇಂಜೆಕ್ಷನ್ ಅಥವಾ ಶೂಟಿಂಗ್‌ನಂತಹ ಕಡಿಮೆ ನೋವಿನ ಪರ್ಯಾಯ ವಿಧಾನಗಳನ್ನು ಬಳಸಬೇಕೆಂದು ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಜಾಗೊಳಿಸಿದೆ. ಗಲ್ಲಿಗೇರಿಸುವಿಕೆ ಕ್ರೂರವಾಗಿದ್ದು, ವ್ಯಕ್ತಿಯ ಸಾವು ಖಚಿತವಾಗಲು 40 ನಿಮಿಷ ಬೇಕಾಗುತ್ತದೆ. ಆದರೆ ಇಂಜೆಕ್ಷನ್ ಅಥವಾ ಶೂಟಿಂಗ್

ಸುಪ್ರೀಂ ಕೋರ್ಟ್ ಆದೇಶ: ಭಾರತದಲ್ಲಿ ‘ಗಲ್ಲಿಗೇರಿಸುವ’ ಶಿಕ್ಷಾ ಪದ್ಧತಿ ಮುಂದುವರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ICYM ನಿಂದ ಯುವಜನರಿಗಾಗಿ ‘ಸ್ಕಿಲ್ ಫಿಯೆಸ್ಟಾ 2026’ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್

(ನ್ಯೂಸ್‌ ಕಡಬ) newskadaba.com,  ಆ.19: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ICYM) ಮಂಗಳೂರು ಧರ್ಮಪ್ರಾಂತ್ಯದ ಸೆಂಟ್ರಲ್ ಕೌನ್ಸಿಲ್ ವತಿಯಿಂದ ಯುವಜನರಿಗಾಗಿ “ಸ್ಕಿಲ್ ಫಿಯೆಸ್ಟಾ 2026″ ಎಂಬ ವಿಶೇ‍ಷ ಒಂದು ದಿನದ ಕೌಶಲ್ಯ ಅಭಿವೃದ್ಧಿ ಮಾಸ್ಟರ್‌ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದು ಮಂಗಳೂರು ಧರ್ಮಪ್ರಾಂತ್ಯದ 1st PUC ನಿಂದ 35 ವರ್ಷದವರೆಗಿನ ಕ್ಯಾಥೋಲಿಕ್ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ. ಐಸಿವೈಎಂ ಸದಸ್ಯರಾಗಿರಲಿ ಅಥವಾ ಇಲ್ಲದಿರಲಿ, ಎಲ್ಲರೂ ಭಾಗವಹಿಸಬಹುದು. ಈ ಕಾರ್ಯಕ್ರಮವು 2026 ಆಗಸ್ಟ್ 23, ಭಾನುವಾರ ಬೆಳಿಗ್ಗೆ 8:30 ಕ್ಕೆ

ಮಂಗಳೂರು: ICYM ನಿಂದ ಯುವಜನರಿಗಾಗಿ ‘ಸ್ಕಿಲ್ ಫಿಯೆಸ್ಟಾ 2026’ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೆ:ಶ್ರೀ ದೇವಳದಲ್ಲಿ ಸುಬ್ರಹ್ಮಣ್ಯದಲ್ಲಿ ಶ್ರದ್ಧಾ ಭಕ್ತಿಯ ನಾಗರ ಪಂಚಮಿ

(ನ್ಯೂಸ್‌ ಕಡಬ) newskadaba.com,ಆ.18 ಕಡಬ /ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವಶಿಷ್ಠ ಸಂಪ್ರದಾಯದAತೆ ಆಚರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ ವಿವಿಧ ವೈದಿಕ ವಿದಿವಿಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.

ಕುಕ್ಕೆ:ಶ್ರೀ ದೇವಳದಲ್ಲಿ ಸುಬ್ರಹ್ಮಣ್ಯದಲ್ಲಿ ಶ್ರದ್ಧಾ ಭಕ್ತಿಯ ನಾಗರ ಪಂಚಮಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ಮಕ್ಕಳ ಪೌಷ್ಟಿಕ ಆಹಾರಕ್ಕೆ ಸರ್ಕಾರ ಒತ್ತು ಬಿಸಿಯೂಟ ಮೊಟ್ಟೆ ಸಬ್ಸಿಡಿ ಹೆಚ್ಚಳಕ್ಕೆ ಸರ್ಕಾರ ಪರಿಶೀಲನೆ: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ

(ನ್ಯೂಸ್‌ ಕಡಬ) newskadaba.com,ಆ.18;ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೀಡಲಾಗುವ ಮೊಟ್ಟೆಗಳ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಎಂಎಲ್‌ಸಿ ರಾಮೋಜಿಗೌಡ ಅವರ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ಮಾಹಿತಿ ನೀಡಿದ್ದಾರೆ. ಸರ್ಕಾರ ಪ್ರಸ್ತುತ ಪ್ರತಿ ಮೊಟ್ಟೆಗೆ ₹6 ನೀಡುತ್ತಿದ್ದು, ಶಾಲಾ ಮಟ್ಟ ತಲುಪುವಷ್ಟರಲ್ಲಿ ₹5 ಮಾತ್ರ ದೊರೆಯುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ ₹8ಕ್ಕಿಂತ ಹೆಚ್ಚಿರುವುದರಿಂದ

ಶಾಲಾ ಮಕ್ಕಳ ಪೌಷ್ಟಿಕ ಆಹಾರಕ್ಕೆ ಸರ್ಕಾರ ಒತ್ತು ಬಿಸಿಯೂಟ ಮೊಟ್ಟೆ ಸಬ್ಸಿಡಿ ಹೆಚ್ಚಳಕ್ಕೆ ಸರ್ಕಾರ ಪರಿಶೀಲನೆ: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top