ವಾಯುಭಾರ ಕುಸಿತ- ವಿಪರೀತ ಮಳೆ; ಚೆನ್ನೈ-ಬೆಂಗಳೂರು ನಡುವೆ ರೈಲು ಸಂಚಾರ ರದ್ದು

(ನ್ಯೂಸ್ ಕಡಬ) newskadaba.com ಅ.16. ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ.

ಕಳೆದ ಎರಡು ದಿನಗಳಿಂದ ಚೆನ್ನೈನಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಇಂದು ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿದೆ.

ರದ್ದಾದ ರೈಲುಗಳ ಪಟ್ಟಿ ಈ ಕೆಳಗಿನಂತಿದೆ:-
(ರೈಲು ಸಂಖ್ಯೆ)
ಚೆನ್ನೈ-ಬೆಂಗಳೂರು – 12657, ಚೆನ್ನೈ-ಬೆಂಗಳೂರು – 12607, 12608
ಚೆನ್ನೈ-ಮೈಸೂರು – 12609, ಮೈಸೂರು-ಚೆನ್ನೈ – 12610
ಚೆನ್ನೈ-ಬೆಂಗಳೂರು – 12027, ಬೆಂಗಳೂರು-ಚೆನ್ನೈ – 12028
ಮೈಸೂರು- ಬೆಂಗಳೂರು – 20623, ಬೆಂಗಳೂರು-ಮೈಸೂರು – 20624
ಮೈಸೂರು-ಚೆನ್ನೈ ಸೆಂಟ್ರಲ್‌ -16022

error: Content is protected !!

Join the Group

Join WhatsApp Group