ಮೊದಲ ಪ್ರಯತ್ನದಲ್ಲೇ IAS  ಅಧಿಕಾರಿಯಾದ ಸೌರಭ್ ಸ್ವಾಮಿ

(ನ್ಯೂಸ್ ಕಡಬ) newskadaba.com ಹರಿಯಾಣ, ಅ. 15.  ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸೌರಭ್ ಸ್ವಾಮಿಯ ಸ್ಪೂರ್ತಿದಾಯಕವಾಗಿದೆ. ಕುಟುಂಬದ ಮುಖ್ಯಸ್ಥರು ರೋಹ್ಟಕ್ ಚೌಕ್ ನಲ್ಲಿ ಸಿಹಿತಿಂಡಿಗಳು ಮತ್ತು ಕುಲ್ಫಿಗಳನ್ನು ಮಾರಾಟ ಮಾಡುತ್ತಿದ್ದರು. 1989ರ ಡಿಸೆಂಬರ್ 1ರಂದು ಸೌರಭ್ ಸ್ವಾಮಿ ಜನಿಸಿದ್ದಾರೆ.

ಸೌರಭ್ ಸ್ವಾಮಿ ಚಾರ್ಖಿ ದಾದ್ರಿಯಲ್ಲಿರುವ ಎಪಿಜೆ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ. ನಂತರ ದೆಹಲಿಗೆ ಬಂದು, ಇಲ್ಲಿ ಅವರು ಭಾರತೀಯ ವಿದ್ಯಾಪೀಠದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು. ಖಾಸಗಿ ಉದ್ಯೋಗದೊಂದಿಗೆ, ದೆಹಲಿಯಲ್ಲಿ ತರಬೇತಿ ಮತ್ತು ಸ್ವಯಂ-ಅಧ್ಯಯನದ ಮೂಲಕ ಅವರು 2014 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ UPSC ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದರಲ್ಲಿ 149ನೇ ರ್ಯಾಂಕ್ ಪಡೆದರು. ನಂತರ ಅವರು LBSNAA ಮಸ್ಸೂರಿಯಲ್ಲಿ ತರಬೇತಿ ಪಡೆದ ನಂತರ 2015 ರಲ್ಲಿ IAS ಅಧಿಕಾರಿಯಾದರು. ಪ್ರಸ್ತುತ ಶ್ರೀಗಂಗಾನಗರದಲ್ಲಿ ಜಿಲ್ಲಾಧಿಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಅವರು 2017 ರಲ್ಲಿ ರಾಜಸ್ಥಾನದ ಆರ್ಜೆಎಸ್ ಅನುಭೂತಿ ಸ್ವಾಮಿ ಅವರನ್ನು ವಿವಾಹವಾದರು.

 

error: Content is protected !!

Join the Group

Join WhatsApp Group