ಇನ್ನು ಮುಂದೆ ಶಾಲೆಯಲ್ಲಿ ಭಗವದ್ಗೀತೆ ಬೋಧಿಸಲು ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರಕಾರ..!!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 21. ಮುಂದಿನ ದಿನಗಳಲ್ಲಿ ಶಾಲಾ ಪಠ್ಯಗಳಲ್ಲೂ ಭಗವದ್ಗೀತೆ ಬೋಧಿಸುವ ಸಾಧ್ಯತೆಯಿದ್ದು, ಇದಕ್ಕೆ ಮುನ್ಸೂಚನೆ ಎಂಬಂತೆ ಭಗವದ್ಗೀತೆಯನ್ನು ರಾಜ್ಯ ಪಠ್ಯಕ್ರಮದಲ್ಲಿಯೂ ಅಳವಡಿಸಬಹುದು. ಈ ಕುರಿತು ರಾಜ್ಯ ಸರ್ಕಾರವೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ತಿಳಿಸಿದೆ.

ಈಗಾಗಲೇ ಸಿಬಿಎಸ್‌ಇ 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಅಧ್ಯಾಯವನ್ನು ಕಲಿಸಲಾಗುತ್ತಿದ್ದು, ಹೀಗಾಗಿ ಭಗವದ್ಗೀತೆ ಕಲಿಸಲು ರಾಜ್ಯ ಸರ್ಕಾರಗಳು ಬಯಸಿದರೆ ಭಗವದ್ಗೀತೆ ಕಲಿಸಬಹುದು ಎಂದು ಹೇಳಿದೆ.

 

 

error: Content is protected !!

Join the Group

Join WhatsApp Group