ಸಮುದ್ರದ ಮೂಲಕ ಮಂಗಳೂರಿಗೆ ಬರುತ್ತಿದ್ದವರಿಗೆ ತಟ್ಟಿತು ಚಂಡಮಾರುತದ ಶಾಕ್ ➤ ಕರಾವಳಿ ಕಾವಲು ಪಡೆಯ ಕಾರ್ಯಾಚರಣೆಯಿಂದ ಉಳಿಯಿತು ಹಲವು ಜೀವ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.24. ಮುಂಬೈನಿಂದ ಮಂಗಳೂರು ಬಂದರು ಕಡೆಗೆ ಬರುತ್ತಿದ್ದ ಬಾರ್ಜ್ ಒಂದು ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಘಟನೆ ಗುರುವಾರ ಸಾಯಂಕಾಲ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಬೇಲೇಕೇರಿ ಎಂಬಲ್ಲಿ ಅರಬ್ಬೀ ಸಮುದ್ರದಲ್ಲಿ ಹವಾಮಾನ ವೈಪರೀತ್ಯಕ್ಕೆ ಸಿಲುಕಿದ ಸಾಯಿ ಕಲಶ ಹೆಸರಿನ ಬಾರ್ಜ್ ನ್ನು ಕರಾವಳಿ ಕಾವಲು ಪಡೆಯವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಾರ್ಜ್ ನಲ್ಲಿದ್ದ 9 ಮಂದಿ ನಾವಿಕರು ಸುರಕ್ಷಿತರಾಗಿದ್ದು, ಸದ್ಯ ಬೇಲೇಕೇರಿ ಬಂದರಿನಲ್ಲಿ ನಿಲ್ಲಿಸಲಾಗಿದೆ.

Also Read  ಹತ್ರಾಸ್‍ನಲ್ಲಿ ನಿಲ್ಲದ ದುರುಳರ ವಿಕೃತಿ ➤ ಅತ್ಯಾಚಾರಕ್ಕೊಳಕ್ಕಾಗಿ 6 ವರ್ಷದ ಬಾಲಕಿ ಮೃತ್ಯು.!

error: Content is protected !!
Scroll to Top