(ನ್ಯೂಸ್ ಕಡಬ) newskadaba.com ಜೂ. 20. ಗುಜರಾತಿನ ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಏರ್ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ, ವಿಮಾನದಲ್ಲಿ ನಿಯಮಿತ ತಪಾಸಣೆಗಳನ್ನು ಮಾಡಲಾಗುತ್ತಿತ್ತು ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ. ಈ ಕುರಿತು ಕೇಂದ್ರ ವಾಯುಯಾನ ಸಚಿವಾಲಯ ನಿರ್ಧಾರ ಮಾಡಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ದುರಂತಕ್ಕೀಡಾದ ಏರ್ ಇಂಡಿಯಾದ ಕೊನೆಯ ತಪಾಸಣೆ 2023 ರ ಜೂನ್ನಲ್ಲಿ ನಡೆದಿತ್ತು. ಮುಂದಿನ ತಪಾಸಣೆ ಡಿಸೆಂಬರ್ ತಿಂಗಳಿನಲ್ಲಿ ಆಗಬೇಕಿತ್ತು. ಬಲಭಾಗದ ಎಂಜಿನ್ನ ದುರಸ್ತಿ ಕಾರ್ಯ ಮಾರ್ಚ್ನಲ್ಲಿ ನಡೆಸಲಾಗಿತ್ತು. ಎಪ್ರಿಲ್ನಲ್ಲಿ ಎಡಭಾಗದ ಎಂಜಿನ್ ಅನ್ನು ಪರಿಶೀಲನೆ ಮಾಡಲಾಗಿತ್ತು. ಲಂಡನ್ಗೆ ಹಾರಾಟ ನಡೆಸುವವರೆಗೂ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಎಂದು ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಏರ್ಇಂಡಿಯಾ ಈಗಾಗಲೇ ತನ್ನ ವೈಡ್ ಬಾಡಿ ವಿಮಾನಗಳನ್ನು ಬಳಸುವ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಶೇ.15 ರಷ್ಟು ಕಡಿತ ಮಾಡಲಾಗಿದೆ.










