ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ 50% ರಿಯಾಯಿತಿ ಯೋಜನೆಯಡಿ ₹92.43 ಲಕ್ಷ ಸಂಗ್ರಹ

(ನ್ಯೂಸ್‌ ಕಡಬ) newskadaba.com,  ಜು.13 : ರಾಜ್ಯ ಸರ್ಕಾರದ 50% ರಿಯಾಯಿತಿ ಯೋಜನೆಯಡಿ ಮಂಗಳೂರು ನಗರದಲ್ಲಿ ಬಾಕಿ ಇದ್ದ ಒಟ್ಟು 35,160 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 92.43 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಜೂನ್ 21 ರಿಂದ ಜುಲೈ 10 ರವರೆಗೆ ದೀರ್ಘಕಾಲದ ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿ ಮಂಗಳೂರು ಪೊಲೀಸ್ ಆಯುಕ್ತಾಲಯವು ವಿಶೇಷ ಅಭಿಯಾನ ನಡೆಸಿತ್ತು.ಇತ್ಯರ್ಥಗೊಂಡ ಒಟ್ಟು ಪ್ರಕರಣಗಳಲ್ಲಿ 18,792 ಎಐ (AI) […]

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ 50% ರಿಯಾಯಿತಿ ಯೋಜನೆಯಡಿ ₹92.43 ಲಕ್ಷ ಸಂಗ್ರಹ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಿರಿಯ ಪತ್ರಕರ್ತ, ಖ್ಯಾತ ರಂಗಕರ್ಮಿ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ನಿಧನ

(ನ್ಯೂಸ್‌ ಕಡಬ) newskadaba.com,  ಜು.13 ಮಂಗಳೂರು: ಕರಾವಳಿಯ ಖ್ಯಾತ ರಂಗಕರ್ಮಿ, ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು (65) ಅವರು ಸೋಮವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ‘ರಂಗ ಸುದರ್ಶನ ಸಸಿಹಿತ್ಲು’ ನಾಟಕ ತಂಡದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅವರು, ಹಲವು ನಾಟಕಗಳನ್ನು ನಿರ್ದೇಶಿಸಿದ್ದರು.’ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿ, ‘ಮುಂಗಾರು’ ಹಾಗೂ ‘ಹೊಸ ದಿಗಂತ’ ಸೇರಿದಂತೆ ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಸಸಿಹಿತ್ಲು ಶ್ರೀ ಸರಂತಾಯ ಗರೋಡಿ ಉಳ್ಳಾಯ

ಹಿರಿಯ ಪತ್ರಕರ್ತ, ಖ್ಯಾತ ರಂಗಕರ್ಮಿ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಗ್ಗದಿಂದ ಎಟಿಎಂ ಯಂತ್ರ ಎಳೆದೊಯ್ದ ಖದೀಮರು ದರೋಡೆ ವಿಡಿಯೋ ವೈರಲ್!!

(ನ್ಯೂಸ್ ಕಡಬ) newskadaba.com ಜು. 12. ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರವನ್ನೇ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿ ಹಣ ದೋಚಿರುವ ಸಿನಿಮೀಯ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜುಲೈ 11ರ ಶನಿವಾರದಂದು ನಡುರಾ ತ್ರಿ ಸುಮಾರು 2 ಗಂಟೆಗೆ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಐದಕ್ಕೂ ಹೆಚ್ಚು ಮಂದಿ ದರೋಡೆಕೋರರು, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಹಾಗೂ ಇನ್ನೊಂದು ತುದಿಯನ್ನು ಕಾರಿಗೆ ಕಟ್ಟಿ, ಕಾರನ್ನು ವೇಗವಾಗಿ

ಹಗ್ಗದಿಂದ ಎಟಿಎಂ ಯಂತ್ರ ಎಳೆದೊಯ್ದ ಖದೀಮರು ದರೋಡೆ ವಿಡಿಯೋ ವೈರಲ್!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

11 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ- ಓರ್ವ ನಾಪತ್ತೆ

(ನ್ಯೂಸ್ ಕಡಬ) newskadaba.com ಜು. 12. ಇಂದು ಮುಂಜಾನೆ ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಜಿಎಫ್‌ಎಸ್ ಗ್ಯಾಲಕ್ಸಿ ಮೇಲೆ ಇರಾನ್ ನಡೆಸಿದ್ದು, ಈ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.   ಹಡಗಿನಲ್ಲಿ 11 ಭಾರತೀಯ ನಾವಿಕರಿದ್ದರು. ಅವರಲ್ಲಿ ಇಲ್ಲಿಯವರೆಗೆ 10 ಜನರನ್ನು ರಕ್ಷಿಸಲಾಗಿದೆ. ಆದರೆ 1 ಭಾರತೀಯ ಪ್ರಜೆ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ

11 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ- ಓರ್ವ ನಾಪತ್ತೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಚಿನ್ನದಂಗಡಿಯಲ್ಲಿ ವಾಟರ್ ಬಾಟಲಿ ಬದಲು ಆಸಿಡ್ ನೀಡಿದ ಸಹಾಯಕ- ಶಿಕ್ಷಕಿ ಗಂಭೀರ!!

(ನ್ಯೂಸ್ ಕಡಬ) newskadaba.com ಜು. 12. ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದೆ. ಶಿಕ್ಷಕಿಯೊಬ್ಬರು ತಮ್ಮ ತಾಯಿಯೊಂದಿಗೆ ಅರ್ಜುನ್ ನಗರದ ಆಭರಣ ಅಂಗಡಿಯೊಂದಕ್ಕೆ ಚಿನ್ನ ಖರೀದಿಸಲು ಬಂದಿದ್ದ ವೇಳೆ ಅವರು ಕುಡಿಯಲು ನೀರು ಕೇಳಿದಾಗ, ಅಂಗಡಿಯ ಮಾಲೀಕರು ಪಕ್ಕದ ಬೇಕರಿಯಿಂದ ನೀರಿನ ಬಾಟಲಿ ತರುವಂತೆ ತಮ್ಮ ಸಹಾಯಕನಿಗೆ ಸೂಚಿಸಿದ್ದಾರೆ.

ಚಿನ್ನದಂಗಡಿಯಲ್ಲಿ ವಾಟರ್ ಬಾಟಲಿ ಬದಲು ಆಸಿಡ್ ನೀಡಿದ ಸಹಾಯಕ- ಶಿಕ್ಷಕಿ ಗಂಭೀರ!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಮಂಗಳೂರಿನಲ್ಲಿ ಒಎನ್ಜಿಸಿಯಿಂದ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ

(ನ್ಯೂಸ್ ಕಡಬ) newskadaba.com ಜು. 12. ಇರಾನ್–ಅಮೆರಿಕ ಸಂಘರ್ಷ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತ ತನ್ನ ಇಂಧನ ಭದ್ರತೆಯನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಮಂಗಳೂರಿನಲ್ಲಿ 1.75 ದಶಲಕ್ಷ ಮೆಟ್ರಿಕ್ ಟನ್ (MMT) ಸಾಮರ್ಥ್ಯದ ನೂತನ ತುರ್ತು ತೈಲ ಸಂಗ್ರಹಾಗಾರ (SPR) ಸ್ಥಾಪಿಸಲು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ಸಂಸ್ಥೆಗೆ ತಾತ್ವಿಕ ಅನುಮೋದನೆ ದೊರೆತಿದೆ. ಭಾರತದಲ್ಲಿ ಇದುವರೆಗೆ ಇಂತಹ ತೈಲ

ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಮಂಗಳೂರಿನಲ್ಲಿ ಒಎನ್ಜಿಸಿಯಿಂದ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಆನ್ ಲೈನ್ ಹಣ ಹೂಡಿಕೆ ಹೆಸರಲ್ಲಿ ವಂಚನೆ ವೃದ್ಧನಿಗೆ 10.15 ಲಕ್ಷ ರೂ. ನಾಮ!

(ನ್ಯೂಸ್ ಕಡಬ) newskadaba.com ಜು. 12. ವಾಟ್ಸ್‌ ಆ್ಯಪ್ ಮೂಲಕ ಬಂದ ಸಂದೇಶವನ್ನು ನಂಬಿ ಆನ್‌ ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದ 68 ವರ್ಷದ ವೃದ್ಧರೊಬ್ಬರು ಬರೋಬ್ಬರಿ 10,15,000 ರೂ. ಕಳೆದುಕೊಂಡು ವಂಚನೆಗೊಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಂಗಳೂರು ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವೃದ್ಧರಿಗೆ ಜೂನ್ 25 ರಂದು ವಾಟ್ಸ್‌ಆ್ಯಪ್ ಮೂಲಕ ಸಂದೇಶವೊಂದು ಬಂದಿದ್ದು, ಅದನ್ನು ನಂಬಿದ ಅವರು, ಅಪರಿಚಿತ ವ್ಯಕ್ತಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜೂನ್

ಆನ್ ಲೈನ್ ಹಣ ಹೂಡಿಕೆ ಹೆಸರಲ್ಲಿ ವಂಚನೆ ವೃದ್ಧನಿಗೆ 10.15 ಲಕ್ಷ ರೂ. ನಾಮ! Read More »

ಕರಾವಳಿ, ಕ್ರೈಮ್ ನ್ಯೂಸ್

ವೇಷ ಮರೆಸಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕಿತೇ ಶಾಕ್? ಕಂಡಕ್ಟರ್‌ಗೆ ತಟ್ಟಿದ ಸಚಿವರ ಬಿಸಿ!!

(ನ್ಯೂಸ್ ಕಡಬ) newskadaba.com ಜು. 12. ಬೆಂಗಳೂರಿನ ಬಿಎಂಟಿಸಿ ಬಸ್ ಸೇವೆಗಳಲ್ಲಿನ ಲೋಪದೋಷಗಳನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ವೇಷ ಮರೆಸಿಕೊಂಡು ಪ್ರಯಾಣಿಸಿ, ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ​ವರದಿಯ ಪ್ರಕಾರ, ಶನಿವಾರದಂದು ಸಂಜೆ 7 ರಿಂದ 9.10ರ ನಡುವೆ, ಸಚಿವರು ಮಾಸ್ಕ್ ಧರಿಸಿ ಗುರುತು ಸಿಗದಂತೆ ಜಯಮಹಲ್ ಮತ್ತು ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್‍ಗಳಲ್ಲಿ ಪ್ರಯಾಣಿಸಿದ್ದರು. ​ಈ ಸಂದರ್ಭ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ವರ್ತಿಸುತ್ತಿರುವ ನಿರ್ಲಕ್ಷ್ಯದ ಧೋರಣೆಯನ್ನು ಸಚಿವರು

ವೇಷ ಮರೆಸಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕಿತೇ ಶಾಕ್? ಕಂಡಕ್ಟರ್‌ಗೆ ತಟ್ಟಿದ ಸಚಿವರ ಬಿಸಿ!! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

4,500 ಇ-ಬಸ್ ಯೋಜನೆ ವಿಳಂಬ ‘ಕೈ’ ಸರ್ಕಾರದ ವಿರುದ್ಧ ಮುಗಿಬಿದ್ದ ಜೆಡಿಎಸ್

(ನ್ಯೂಸ್ ಕಡಬ) newskadaba.com ಜು. 12. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ (BMTC) ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಇ–ಡ್ರೈವ್’ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ ಗಳು ಹಾಗೂ ರೂ. 1,505 ಕೋಟಿ ಸಹಾಯಧನ ಮಂಜೂರಾಗಿದ್ದರೂ, ರಾಜ್ಯ ಸಚಿವ ಸಂಪುಟದಿಂದ ಇನ್ನೂ ಅನುಮೋದನೆ ಸಿಗದಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ಕುರಿತು ಜೆಡಿಎಸ್ ತನ್ನ ಅಧಿಕೃತ ‘ಎಕ್ಸ್‘ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಜೆಡಿಎಸ್ ಆರೋಪಗಳು: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.

4,500 ಇ-ಬಸ್ ಯೋಜನೆ ವಿಳಂಬ ‘ಕೈ’ ಸರ್ಕಾರದ ವಿರುದ್ಧ ಮುಗಿಬಿದ್ದ ಜೆಡಿಎಸ್ Read More »

ಕರ್ನಾಟಕ

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಗಾನಕೋಗಿಲೆ ಎಸ್. ಜಾನಕಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಜು. 12. ಭಾರತೀಯ ಚಿತ್ರರಂಗದ ಸ್ವರಸುಧೆ, ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ನಿಧನರಾಗಿದ್ದು, ಇಡೀ ಸಂಗೀತ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ. ಸುಮಾರು ಏಳು ದಶಕಗಳ ಕಾಲ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದ ಜಾನಕಿ ಅವರ ಅಗಲಿಕೆಗೆ ದೇಶಾದ್ಯಂತ ಕಂಬನಿ ಮಿಡಿಯಲಾಗುತ್ತಿದೆ. ಏಳು ದಶಕಗಳ ಅಮರ ಪಯಣ 1950ರ ದಶಕದ ಅಂತ್ಯದಲ್ಲಿ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಎಸ್. ಜಾನಕಿ ಅವರು ಕನ್ನಡ,

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಗಾನಕೋಗಿಲೆ ಎಸ್. ಜಾನಕಿ ಇನ್ನಿಲ್ಲ Read More »

ಕರ್ನಾಟಕ
Scroll to Top