ಕರ್ನಾಟಕ-ಆಂಧ್ರ ಗಡಿಯಲ್ಲಿ ಘೋರ ದುರಂತ ಎರಡು ಲಾರಿಗಳಲ್ಲಿ ಭೀಕರ ಬೆಂಕಿ, ಸ್ಥಳದಲ್ಲೇ ಲಾರಿ ಚಾಲಕ ಮೃತ್ಯು!
(ನ್ಯೂಸ್ ಕಡಬ) newskadaba.com, ಜೂ.10 : ರಸ್ತೆ ಬದಿ ನಿಂತಿದ್ದ ಸಿಮೆಂಟ್ ಟ್ಯಾಂಕರ್ಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ.ಲಾರಿಯ ಕ್ಯಾಬಿನ್ನಲ್ಲಿ ಸಿಲುಕಿಕೊಂಡ ಚಾಲಕ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಕರ್ನಾಟಕ-ಆಂಧ್ರ ಗಡಿಯ ಬಳ್ಳಾರಿ ಜಿಲ್ಲೆಯ ಸಮೀಪದ ಡಿ. ಹಿರೇಹಾಳ ಬಳಿ ಈ ಅವಘಡ ನಡೆದಿದೆ.ಸ್ಥಳಕ್ಕೆ ಧಾವಿಸಿದ ಆಂಧ್ರ ಹಾಗೂ ಕರ್ನಾಟಕದ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಬೆಂಕಿ ನಂದಿಸಿದ್ದಾರೆ.
ಕರ್ನಾಟಕ-ಆಂಧ್ರ ಗಡಿಯಲ್ಲಿ ಘೋರ ದುರಂತ ಎರಡು ಲಾರಿಗಳಲ್ಲಿ ಭೀಕರ ಬೆಂಕಿ, ಸ್ಥಳದಲ್ಲೇ ಲಾರಿ ಚಾಲಕ ಮೃತ್ಯು! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









