ಕರಾವಳಿ

ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು. 15. ಸುನ್ನೀ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ಪ್ರತಿವರ್ಷವೂ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಕಲಾ ಸ್ಪರ್ಧಾ ಸಂಗಮಗಳನ್ನು ದೇಶದಾದ್ಯಂತ ನಡೆಸುತ್ತಿದ್ದು, ಅದರ ಕಡಬ ಸೆಕ್ಟರ್ ಮಟ್ಟದ ಕಾರ್ಯಕ್ರಮವು ಇದೇ ಬರುವ ಜುಲೈ 19ನೇ ತಾರೀಖಿನಂದು ಕಡಬ ಅಡ್ಡಗದ್ದೆಯಲ್ಲಿರುವ ಸುನ್ನೀ ಸೆಂಟರ್ ಅಂಗಣದಲ್ಲಿ ನಡೆಯಲಿದೆ. ನಾಡಿನ ಭರವಸೆಯಾಗಿ ಬೆಳೆದು ಬರುತ್ತಿರುವ ವಿಧ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಹಾಗೂ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸಮೂಹದಲ್ಲಿ ಗುರುತಿಸಲು ಬೇಕಾಗಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿ ಸಂಘಟನೆಯಾಗಿದೆ ಎಸ್ಸೆಸ್ಸೆಫ್. ಕಳೆದ […]

ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ Read More »

ಕರಾವಳಿ

ಆಡಳಿತಕ್ಕೆ ಚುರುಕು ಮುಟ್ಟಿಸಲು ಹೊಸ ಜವಾಬ್ದಾರಿ- ದಕ್ಷಿಣ ಕನ್ನಡಕ್ಕೆ ರಾಮ್ ಪ್ರಸಾತ್, ಉಡುಪಿಗೆ ರೋಹಿಣಿ ಸಿಂಧೂರಿ ನೇಮಕ!

(ನ್ಯೂಸ್ ಕಡಬ) newskadaba.com ಜು. 15. ಅಭಿವೃದ್ಧಿ ಕಾರ್ಯಗಳು, ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಶೀಘ್ರ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರೋಹಿಣಿ ಸಿಂಧೂರಿ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಅದೇ ರೀತಿ ಬೆಂಗಳೂರು ನಗರಕ್ಕೆ ರಿತ್ತಿಕ್

ಆಡಳಿತಕ್ಕೆ ಚುರುಕು ಮುಟ್ಟಿಸಲು ಹೊಸ ಜವಾಬ್ದಾರಿ- ದಕ್ಷಿಣ ಕನ್ನಡಕ್ಕೆ ರಾಮ್ ಪ್ರಸಾತ್, ಉಡುಪಿಗೆ ರೋಹಿಣಿ ಸಿಂಧೂರಿ ನೇಮಕ! Read More »

ಕರಾವಳಿ, ಕರ್ನಾಟಕ

ನಕಲಿ ನೋಟಿಸ್ ನಂಬಿ ಎಪಿಕೆ ಆಪ್ ಡೌನ್ ಲೋಡ್ ಕಾರ್ಕಳದ ವ್ಯಕ್ತಿಯ 6.83 ಲಕ್ಷ ಸೈಬರ್ ಖದೀಮರ ಪಾಲು!

(ನ್ಯೂಸ್ ಕಡಬ) newskadaba.com ಜು. 15. ಮೊಬೈಲ್‌ ಗೆ ಬಂದ ಸಂಚಾರ ನಿಯಮ ಉಲ್ಲಂಘನೆಯ ನಕಲಿ ನೋಟಿಸ್ ಹಾಗೂ ‘mParivahan.apk’ ಎಂಬ ಲಿಂಕ್ ನಂಬಿ ಆಪ್ ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹6,83,599 ಹಣ ಕಳೆದುಕೊಂಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರದಿಯ ಪ್ರಕಾರ, ಅಜೆಕಾರು ನಿವಾಸಿ ರತ್ನಾಕರ ಅಮೀನ್ ಎಂಬವರ ವಾಟ್ಸಾಪ್‌’ಗೆ ಜುಲೈ 5 ರಂದು ‘ಪರಿವಾಹನ್’ ಹೆಸರಿನ ಖಾತೆಯಿಂದ ಸಂದೇಶ ಬಂದಿತ್ತು. ಅದರಲ್ಲಿ

ನಕಲಿ ನೋಟಿಸ್ ನಂಬಿ ಎಪಿಕೆ ಆಪ್ ಡೌನ್ ಲೋಡ್ ಕಾರ್ಕಳದ ವ್ಯಕ್ತಿಯ 6.83 ಲಕ್ಷ ಸೈಬರ್ ಖದೀಮರ ಪಾಲು! Read More »

ಕರಾವಳಿ, ಕ್ರೈಮ್ ನ್ಯೂಸ್

ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್

(ನ್ಯೂಸ್ ಕಡಬ) newskadaba.com ಜು. 15. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮುಲ್ಕಿ ತಾಲೂಕು ಪಂಚಾಯತ್ ಮತ್ತು ಐಕಳ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಐಕಳ ಗ್ರಾಮ ಪಂಚಾಯಿತಿಗೆ ಒಳಗೊಂಡಿರುವ ಏಳಂಜೆ, ಉಳೆಪಾಡಿ ಮತ್ತು ಐಕಳ ಹಳ್ಳಿಗಳನ್ನು ತಂಬಾಕು ಮುಕ್ತ ಹಳ್ಳಿಗಳೆಂದು ಘೋಷಿಸಲಾಯಿತು. ಮುಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಂ ಎನ್ ಗುರುದತ್ ಅವರು  “ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್” ಎಂಬ

ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್ Read More »

ಕರಾವಳಿ

ಜುಲೈ 28ರಂದು ಕೈತೋಟ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜು. 15. ಸಿರಿ ತೋಟಗಾರಿಕೆ ಸಂಘ (ರಿ) (ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ), ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣ, ಬೆಂದೂರು, ಮಂಗಳೂರು ಇದರ ವತಿಯಿಂದ ಕೈತೋಟ ತರಬೇತಿ ಕಾರ್ಯಕ್ರಮವನ್ನು ಜುಲೈ 28 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಬೆಂದೂರು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಪಾಟಿಂಗ್, ರೀಪಾಟಿಂಗ್, ಕಸಿ ಕಟ್ಟುವುದು (ಗ್ರಾಪ್ಟಿಂಗ್, ಬಡ್ಡಿಂಗ್, ಲೇಯರಿಂಗ್), ಸಾವಯವ ಗೊಬ್ಬರ ತಯಾರಿ, ತಾರಸಿ ಕೃಷಿಯ

ಜುಲೈ 28ರಂದು ಕೈತೋಟ ತರಬೇತಿ ಕಾರ್ಯಕ್ರಮ Read More »

ಕರಾವಳಿ

ಎಸ್.ಸಿ/ಎಸ್.ಟಿ ಸ್ಟಾರ್ಟ್ ಅಪ್ ಗಳಿಗೆ ಅನುದಾನ

(ನ್ಯೂಸ್ ಕಡಬ) newskadaba.com ಜು. 15. ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ((E ,IT & BT), ಕರ್ನಾಟಕ ಸರ್ಕಾರವು ಪರಿಶಿಷ್ಟಜಾತಿ (SC) ಹಾಗೂ ಪರಿಶಿಷ್ಟಪಂಗಡಗಳು (ST) ಉದ್ಯಮಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ““ELEVATE ಉನ್ನತಿ 2026” ಎಂಬ ಅನುದಾನ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮದಡಿ ಆಯ್ಕೆಯಾದ ಸ್ಟಾರ್ಟ್‍ ಅಪ್‍ಗಳಿಗೆ ಗರಿಷ್ಠ ರೂ. 50 ಲಕ್ಷಗಳವರೆಗೆ ಅನುದಾನ ನೀಡಲಾಗುತ್ತದೆ. ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ ಸೈಟ್ https://eitbt.karnataka.gov.in ಭೇಟಿ ನೀಡಬಹುದು.

ಎಸ್.ಸಿ/ಎಸ್.ಟಿ ಸ್ಟಾರ್ಟ್ ಅಪ್ ಗಳಿಗೆ ಅನುದಾನ Read More »

ಕರಾವಳಿ

ಎಸ್.ಐ.ಆರ್: 2,53,198 ಫಾರ್ಮ್ ಡಿಜಿಟೈಸ್

(ನ್ಯೂಸ್ ಕಡಬ) newskadaba.com ಜು. 15. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 13ರ ವರೆಗೆ 17,80,447 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 2,53,198 ಫಾರ್ಮ್‍ಗಳನ್ನು  ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ: ಬೆಳ್ತಂಗಡಿ-29792, ಮೂಡಬಿದ್ರೆ-28468, ಮಂಗಳೂರು ನಗರ ಉತ್ತರ-27412, ಮಂಗಳೂರು ನಗರ ದಕ್ಷಿಣ-34217, ಮಂಗಳೂರು-43539, ಬಂಟ್ವಾಳ-27943, ಪುತ್ತೂರು-24796, ಸುಳ್ಯ-37031.

ಎಸ್.ಐ.ಆರ್: 2,53,198 ಫಾರ್ಮ್ ಡಿಜಿಟೈಸ್ Read More »

ಕರಾವಳಿ, ಕರ್ನಾಟಕ

ಮಂಗಳೂರು ನಗರ/ ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 15. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ  ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ನಗರ) ವ್ಯಾಪ್ತಿಯ 7 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಹಾಗೂ 32 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.   ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ 4 ಅಂಗನವಾಡಿ ಕಾರ್ಯಕರ್ತೆ ಹಾಗೂ 39 ಅಂಗನವಾಡಿ

ಮಂಗಳೂರು ನಗರ/ ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಜೆಸಿಐ ಕಡಬ ಕದಂಬದ ‘ನಮ್ಮ ಕದಂಬ–ನಮ್ಮ ಕುಟುಂಬ’ಕಾರ್ಯಕ್ರಮ ಯಶಸ್ವಿ

(ನ್ಯೂಸ್ ಕಡಬ) newskadaba.com ಕಡಬ, ಜು. 15. ಜೆಸಿಐ ಕಡಬ ಕದಂಬ ವತಿಯಿಂದ ಆಯೋಜಿಸಲಾದ ‘ನಮ್ಮ ಕದಂಬ–ನಮ್ಮ ಕುಟುಂಬ’ ಕಾರ್ಯಕ್ರಮ, ವಲಯ ಉಪಾಧ್ಯಕ್ಷರ (ZVP) ದ್ವಿತೀಯ ಅಧಿಕೃತ ಭೇಟಿ ಹಾಗೂ ಆದಾಯ ತೆರಿಗೆ (ITR) ಜಾಗೃತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.   ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ವಲಯ ಉಪಾಧ್ಯಕ್ಷರು ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಜೆಸಿಐನ ಮುಂದಿನ ಕಾರ್ಯಯೋಜನೆಗಳ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಆದಾಯ

ಜೆಸಿಐ ಕಡಬ ಕದಂಬದ ‘ನಮ್ಮ ಕದಂಬ–ನಮ್ಮ ಕುಟುಂಬ’ಕಾರ್ಯಕ್ರಮ ಯಶಸ್ವಿ Read More »

ಕರಾವಳಿ

ಮಂಗಳೂರು ಜೈಲಿಗೆ ಹೈಟೆಕ್ ಕಾವಲು: ಮೊಬೈಲ್, ಗಾಂಜಾ ಎಸೆಯುವುದಕ್ಕೆ ಬ್ರೇಕ್ ಹಾಕಲು 12 ಅಡಿ ಎತ್ತರದ ತಂತಿ ಬೇಲಿ!

(ನ್ಯೂಸ್‌ ಕಡಬ) newskadaba.com,   ಜು.14 : ಮಂಗಳೂರಿನ ಕೊಡ್ಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಹಾಲಿ ಇರುವ 15 ಅಡಿ ಎತ್ತರದ ಆವರಣ ಗೋಡೆಯ ಮೇಲೆ ಹೆಚ್ಚುವರಿಯಾಗಿ 12 ಅಡಿ ಎತ್ತರದ ತಂತಿ ಬೇಲಿ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಕಾರಾಗೃಹ ಇಲಾಖೆಯ ₹50 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ (PWD) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.ಹೊರಗಿನ ರಸ್ತೆಯಿಂದ ಜೈಲಿನೊಳಗೆ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಲ್ಲು ಕಟ್ಟಿ ಮೊಬೈಲ್ ಹಾಗೂ ಗಾಂಜಾ ಎಸೆಯುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಯಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು ಜೈಲಿಗೆ ಹೈಟೆಕ್ ಕಾವಲು: ಮೊಬೈಲ್, ಗಾಂಜಾ ಎಸೆಯುವುದಕ್ಕೆ ಬ್ರೇಕ್ ಹಾಕಲು 12 ಅಡಿ ಎತ್ತರದ ತಂತಿ ಬೇಲಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top