ಹಾಡಹಗಲೇ ನಡುರಸ್ತೆಯಲ್ಲಿ ಬಿಜೆಪಿ ಮುಖಂಡನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!

(ನ್ಯೂಸ್ ಕಡಬ)Newskadaba.com ಚೆನ್ನೈ,ಏ.29 ತಮಿಳುನಾಡಿನ ಬಿಜೆಪಿ ಮುಖಂಡನೊಬ್ನನನ್ನು ನಡುರಸ್ತೆಯಲ್ಲೇ ಅಪರಿಚಿತ ಗ್ಯಾಂಗ್​ವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಂದಿದ್ದಾರೆ. ಈ ಘಟನೆ ಚೆನ್ನೈ ಹೊರವಲಯದ ಪೂನಮಲ್ಲೆ ಬಳಿಯ ನಸರತ್​ಪೇಟೈ ಬಳಿ ನಡೆದಿದೆ.ಕೊಲೆಯಾದವರನ್ನು ಪಿಪಿಜಿ ಶಂಕರ್ (46) ಪೆರಂಬದೂರಿನ ವರಪುರಂನವರು.

ಅವರು ವರಪುರಂ ಪಂಚಾಯತ್ ಕೌನ್ಸಿಲ್ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಎಸ್ಸಿ ಮತ್ತು ಎಸ್ಟಿ ವಿಭಾಗದ ರಾಜ್ಯ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಈತನ ಮೇಲೂ ಹಲವು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

 

Scroll to Top