➤ ಭಾರತ್ ಜೋಡೋ ಯಾತ್ರೆ ➤ ಕಾಂಗ್ರೆಸ್ ಹಿರಿಯ ನಾಯಕ ಸಂತೋಖ್ ಸಿಂಗ್ ಚೌಧರಿ ಹೃದಯಾಘಾತದಿಂದ ನಿಧನ..!

(ನ್ಯೂಸ್ ಕಡಬ) newskadaba.com, ಚಂಡೀಗಢ ,ಜ. 14.  ಪಂಜಾಬ್ ಹಿರಿಯ ಕಾಂಗ್ರೆಸ್ ನಾಯಕ ಸಂತೋಖ್ ಸಿಂಗ್ ಚೌಧರಿ ನಿಧನರಾಗಿದ್ದಾರೆ. ಚೌಧರಿ ಶನಿವಾರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು.

ತಕ್ಷಣವೇ ಅವರನ್ನು ವಿರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಉಳಿಸಲಾಗಲಿಲ್ಲ. ಚೌಧರಿ ಸಾವಿನ ನಂತರ ಭಾರತ್ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ದೊಡ್ಡ ನಾಯಕರು ವಿರ್ಕ್ ಆಸ್ಪತ್ರೆಗೆ ತಲುಪಿದ್ದಾರೆ. ಪ್ರಯಾಣದ ವೇಳೆ ಚೌಧರಿ ಇದ್ದಕ್ಕಿದ್ದಂತೆ ಗಾಬರಿಯಿಂದ ನೆಲದ ಮೇಲೆ ಕುಸಿದು ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

Also Read  2024ರ ಜ. 01ಕ್ಕೆ ಅಯೋಧ್ಯ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್...! ➤ ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

error: Content is protected !!
Scroll to Top