ಮಾನಸಿಕ ಖಿನ್ನತೆ- ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ. 01. ಹೊಳೆಗೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಗಂ ಡಂಪಿಂಗ್ ಯಾರ್ಡ್ ಬಳಿ ನಡೆದಿದೆ.


ಆತ್ಮಹತ್ಯೆಗೈದವರನ್ನು ಶಾರದಾ (57) ಎಂದು ಗುರುತಿಸಲಾಗಿದೆ. ಇವರು ಮಕ್ಕಳಿಲ್ಲ ಎಂಬ ಕಾರಣಕ್ಕೆ ಹಾಗೂ ಗಂಡ ಮೃತಪಟ್ಟ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ನಡುವೆ ಜ.30 ರಂದು ಹೊರಗೆ ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಜ. 31 ರಂದು ಶಾರದಾ ಅವರ ಮೃತದೇಹ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮರಕ್ಕೆ ಕಾರು ಢಿಕ್ಕಿ- ಐವರು ದುರ್ಮರಣ

error: Content is protected !!
Scroll to Top