ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣ ➤ ಆರೋಪಿಗಳಿಬ್ಬರು ಬಂಧನ



(ನ್ಯೂಸ್ ಕಡಬ) newskadaba.com ಕಾಸರಗೋಡು, . 02. ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬಂದ್ಯೋಡು ಸಮೀಪದ ಅಡ್ಕ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು  ಬಂದ್ಯೋಡು ವೀರನಗರದ ಲತೀಫ್ (30) ಮತ್ತು ಬಂದ್ಯೋಡಿನ ಸಹಾದ್ (28) ಎಂದು ಗುರುತಿಸಲಾಗಿದೆ.





 

 

ಲತೀಫ್ ಎಂಬವ ಕೊಲೆ ಆರೋಪಿಯಾಗಿದ್ದು, ಉಪ್ಪಳ ಸೋಂಕಾಲಿನ ಅಲ್ತಾಫ್ ಎಂಬುವವನನ್ನು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಕರ್ನಾಟಕದಲ್ಲಿ ಕೊಲೆಗೈದ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ. ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹದಿಮೂರು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.






 

 

error: Content is protected !!
Scroll to Top