ಕಾಸರಗೋಡು: ದೋಣಿ ಮಗುಚಿ ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ

(ನ್ಯೂಸ್‌ಕಡಬ) newskadaba.com ಕಾಸರಗೋಡು, ಆ 17, ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ದೋಣಿಯು ಸಮುದ್ರಕ್ಕೆ ಮಗುಚಿ ಬಿದ್ದುದ್ದರಿಂದ ನಾಪತ್ತೆಯಾಗಿದ್ದ ಬೆಸ್ತನ ಮೃತದೇಹವು ಸೋಮವಾರ ಪತ್ತೆಯಾಗಿದೆ.

ಮೃತರನ್ನು ಶಿರಿಯದ ಬಾಲಕೃಷ್ಣ (58) ಎಂದು ತಿಳಿದುಬಂದಿದೆ. ಶುಕ್ರವಾರದಂದು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಜೊತೆಯಲ್ಲಿದ್ದ ಇತರ ಐವರು ನೀರು ಪಾಲಾಗಿದ್ದರು. ಮೀನುಗಾರರಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಈ ನಡುವೆ ಇಂದು ಕುಂಬಳೆ ಕೊಯಿಪ್ಪಾಡಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.

 

error: Content is protected !!

Join the Group

Join WhatsApp Group