ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗಾಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು► ತೀವ್ರ ಅಸ್ವಸ್ಥ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com.ತಿರುವನಂತಪುರ,.15.ಅಯ್ಯಪ್ಪ ಭಕ್ತರ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಪ್ರವೇಶ ಮಾಡಿದ್ದ ಕನಕದುರ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಕಾರಣ ಸಂಬಂಧಿಕರೇ ಅವರ ಮೇಲೆ ಮಾಡಿದ ಹಲ್ಲೆ ಎಂದು ತಿಳಿದುಬಂದಿದೆ.ಜ.2ರಂದು ಶಬರಿಮಲೆಗೆ ಪ್ರವೇಶಿಸಿ ಕನಕದುರ್ಗ ದೇಶಾದ್ಯಂತ ಸುದ್ದಿಯಾಗಿದ್ದರು. ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದರು. ಹಲವು ಬೆಳವಣಿಗೆಯ ಹಿನ್ನಲೆಯಲ್ಲಿ ಕನಕದುರ್ಗಾ ಅವರ ಕುಟುಂಬ ‘ನಿನಗೂ ನಮಗೂ ಸಂಬಂಧವಿಲ್ಲ’ ಎಂದು ಆಕೆಯೊಂದಿಗಿನ ಸಂಬಂಧವನ್ನೇ ನಿರಾಕರಿಸಿತ್ತು.

ಇನ್ನೊಂದು ಮೂಲದ ಪ್ರಕಾರ ಕನಕದುರ್ಗ ಮೇಲೆ ಆಕೆಯ ಅತ್ತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಆಕೆಯ   ಅತ್ತೆ ಸಂಪ್ರದಾಯಸ್ಥ ಮಹಿಳೆ ಯಾಗಿದ್ದು ಅವಳು ಮಲೆ ಪ್ರವೇಶಿಸುವುದನ್ನು  ಆಕೆ ವಿರೋಧಿಸಿದ್ದಳು. ಮಲೆಗೆ ಹೋಗಿ ಮನೆಗೆ ಬರುವುದಕ್ಕೆ ಈಕೆ ತೀವ್ರವಾಗಿ ಖಂಡಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಳೆಂದುಕನಕದುರ್ಗ   ಮೇಲಿನ ಹಲ್ಲೆಯನ್ನು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿದೆ.ಭದ್ರತೆಯ ಕಾರಣಕ್ಕೆ ಹಾಗೂ ಅವರಿಗೆ ಜೀವಬೆದರಿಗೆ ಇದ್ದ ಹಿನ್ನಲೆಯಲ್ಲಿ ಕೆಲ ಕಾಲ ಅಜ್ಞಾತ ಸ್ಥಳದಲ್ಲಿದ್ದ ಅವರು ಸೋಮವಾರವಷ್ಟೇ ಮನೆಗೆ ವಾಪಸು ಬಂದಿದ್ದರು.   ಈ ವೇಳೆ ಸಂಬಂಧಿಕರೇ ಆಕೆಗೆ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಪರಿಣಾಮ ಕನಕದುರ್ಗಾ ತೀವ್ರ ಅಸ್ವಸ್ಥರಾಗಿದ್ದಾರೆ ಮಲಪುರಂ ಜಲ್ಲೆಯ ಪೆರಿಂಥಲಮನ್ನಾ ಪಟ್ಟಣದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

 

error: Content is protected !!

Join the Group

Join WhatsApp Group