ಮೆಸ್ಕಾಂ ಎಂಜಿನಿಯರ್ ಹಾಗೂ ಸಿಬ್ಬಂದಿ ನಡುವೆ ಗಲಾಟೆ ಹಲ್ಲೆ -ಪರಸ್ಪರ ಮಾತುಕತೆಯಲ್ಲಿ ಪ್ರಕರಣ ಇತ್ಯರ್ಥ



(ನ್ಯೂಸ್‌ ಕಡಬ) newskadaba.com,  ಆ .05:  ಸುಳ್ಯದ ಮೆಸ್ಕಾಂ ನಿಯಂತ್ರಣ ಕೊಠಡಿಯಲ್ಲಿ ಭಾನುವಾರ, ಮೆಸ್ಕಾಂ ಉದ್ಯೋಗಿ ಮತ್ತು ಸಹಾಯಕ ಎಂಜಿನಿಯರ್ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ವಿವಾದವನ್ನು ಪರಸ್ಪರ ಮಾತುಕತೆಯ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.







ಸುಳ್ಯದ ನಿವಾಸಿ ರಾಘವ ಶೆಟ್ಟಿ ಎಂಬ ದೂರುದಾರ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆರೋಪಿ ಸುಳ್ಯ ಮೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸುಪ್ರೀತ್ ಸ್ಥಳಕ್ಕೆ ಆಗಮಿಸಿದ್ದಾನೆ. ದೂರಿನ ಪ್ರಕಾರ, ಸುಪ್ರೀತ್ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು, ದೂರುದಾರರ ಮೊಬೈಲ್ ಕಿತ್ತು ನೆಲಕ್ಕೆ ಬಡಿದು ಪುಡಿ ಮಾಡಿದ್ದಾನೆ.






ಸಹಾಯಕ ಎಂಜಿನಿಯರ್ ಶೆಟ್ಟಿ ಅವರನ್ನು ಅಸಭ್ಯ ಭಾಷೆ ಬಳಸಿ ನಿಂದಿಸಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ನಾನ್-ಕಾಗ್ನಿಜೇಬಲ್ ರಿಪೋರ್ಟ್ ದಾಖಲಿಸಲಾಗಿದೆ. ಪೊಲೀಸರು ಎರಡೂ ಕಡೆಯವರನ್ನು ವಿಚಾರಣೆಗೆ ಠಾಣೆಗೆ ಕರೆಸಿ ದೂರುದಾರರು ಮತ್ತು ಆರೋಪಿಗಳು ರಾಜಿ ಮಾಡಿಕೊಂಡು ಪರಸ್ಪರ ಮಾತುಕತೆ ಮೂಲಕ ವಿಷಯವನ್ನು ಇತ್ಯರ್ಥಪಡಿಸಿದರು.

error: Content is protected !!
Scroll to Top