(ನ್ಯೂಸ್ ಕಡಬ) newskadaba.com ಜೂ. 20. ಅಂಗಡಿ ಮಾಲೀಕ ವಿಕಲಚೇತನ ತಂದೆಗೆ ಸ್ವತಃ ಮಗನೇ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಛತ್ತೀಸ್ ಗಢದ ಬಲೋಡಾಬಜಾರ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಹಲ್ಲೆಗೊಳಗಾದವರು ನರೇಂದ್ರ ಸಿಂಗ್ ಚಾವ್ಲಾ. ಆರೋಪಿ ಅವರ ಹಿರಿಯ ಮಗ ಅಮರ್ಜೀತ್ ಎಂದು ಗುರುತಿಸಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಮಗ ಅಮರ್ಜೀತ್ ಬೈಕಿನಲ್ಲಿ ಬಂದು ಅಂಗಡಿಗೆ ನುಗ್ಗಿ ತನ್ನ ವಿಕಲಚೇತನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.









