ಮರವೂರು ಸೇತುವೆ ಪರಿಶೀಲನೆ ನಡೆಸಿದ ತಾಂತ್ರಿಕ ತಜ್ಞರ ಸಮಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೇತುವೆಗಳ ಪರಿಶೀಲನೆಗೆ ಬೆಂಗಳೂರಿನಿಂದ ಆಗಮಿಸಿರುವ ತಾಂತ್ರಿಕ ತಜ್ಞರ ಸಮಿತಿಯು ಮರವೂರು ಸೇತುವೆಯ ಪರಿಶೀಲನೆ ನಡೆಸಿದೆ.


ಮರವೂರಿನ ಹಳೆ ಸೇತುವೆಯ ಪಿಲ್ಲರ್‌ಗೆ ಹಾನಿಯಾಗಿರುವ ಹಿನ್ನೆಲೆ ಜೂನ್ 14ರಿಂದ ಈ ಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೃಹತ್‌ ಕ್ರೇನ್‌ ಮೂಲಕ ಸೇತುವೆಯ ಅಡಿಭಾಗಕ್ಕೆ ತೆರಳಿದ ತಾಂತ್ರಿಕ ತಜ್ಞರು ಮರವೂರು ಸೇತುವೆಯನ್ನು ಪರಿಶೀಲಿಸಿ, ಸೇತುವೆಯ ಪಿಲ್ಲರ್‌, ಗರ್ಡರ್‌ನ ಕಾಂಕ್ರೀಟ್‌ ಭಾಗಗಳನ್ನು ಸಂಗ್ರಹಿಸಿದ್ದಾರೆ. ಇದರ ಮೂಲಕ ಸೇತುವೆಯ ದೃಢತೆಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಯವರು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಅಥವಾ ಕಾಮಗಾರಿ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

Scroll to Top