ರಸ್ತೆ ದಾಟುವಾಗ ಆಟೋರಿಕ್ಷಾ ಢಿಕ್ಕಿ ►ಬಂಟ್ವಾಳದ ಉದ್ಯಮಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ರಸ್ತೆ‌ ದಾಟುತ್ತಿದ್ದ ಸಂದರ್ಭದಲ್ಲಿ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಬಂಟ್ವಾಳದ ಉದ್ಯಮಿಯೋರ್ವರು ಮೃತಪಟ್ಟ ಘಟನೆ ಮಂಗಳೂರಿನ ಆರ್ಟಿಓ ಕಛೇರಿಯ ಸಮೀಪದಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಉದ್ಯಮಿಯನ್ನು ಸಾಮಾಜಿಕ, ಧಾರ್ಮಿಕ ಮುಂದಾಳು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ಮಾವಂತೂರು ದೇವಪ್ಪ ಶೆಟ್ಟಿ(70) ಎಂದು ಗುರುತಿಸಲಾಗಿದೆ. ಬಂಟ್ವಾಳ ಲಯನ್ಸ್ ಕ್ಲಬ್‌ನ ಪೂರ್ವಾಧ್ಯಕ್ಷರಾಗಿದ್ದ ಇವರು ಪ್ರಸ್ತುತ ಲಯನ್ಸ್ ಕ್ಲಬ್‌ನ ಪ್ರಾಂತ್ಯ ಸಂಯೋಜಕರಾಗಿದ್ದರು.

Scroll to Top