ದಾಂಪತ್ಯ ಜೀವನ ಹಾಳಾಗಿ ಹೋಗೋಕೆ ಇದುವೇ ಕಾರಣ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಚಾಣಕ್ಯನ ನೀತಿಯು ಪ್ರಸ್ತುತ ವ್ಯಕ್ತಿಯ ಜೀವನಗಳಿಗೆ ಬಹಳ ಹತ್ತಿರವಾದದ್ದು, ಈ ಒಂದು ನೀತಿಯಲ್ಲಿ ವ್ಯಕ್ತಿಯ ಜೀವನವು ಯಾವ ರೀತಿಯಾಗಿ ಇರುತ್ತದೆ, ಯಾವ ರೀತಿಯಾಗಿ ವ್ಯಕ್ತಿಯು ಇರಬೇಕು ಅವರ ಯಶಸ್ಸಿಗೆ ಕಾರಣಗಳು ಏನು ಮತ್ತು ಸೋಲಿಗೆ ಕಾರಣಗಳು ಏನು ಅಷ್ಟೇ ಅಲ್ಲದೆ ಪ್ರತಿಯೊಂದು ಸಂಬಂಧದ ಬಗ್ಗೆಯೂ ಕೂಡ ವಿಶೇಷವಾದ ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಗಂಡ ಮತ್ತು ಹೆಂಡತಿಯ ಸಂಬಂಧದ ಬಗ್ಗೆ ವಿಶೇಷವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ, ಯಾವ ಕಾರಣಗಳಿಂದ ಸಂಬಂಧ ಹಾಳಾಗುತ್ತದೆ ಯಾವ ಒಂದು ಅಂಶಗಳು ಉತ್ತಮ ದಾಂಪತ್ಯಕ್ಕೆ ನೆರವಾಗುತ್ತದೆ ಎಂಬುವುದರ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ, ಅದೇ ರೀತಿಯಾಗಿ ದಂಪತಿಗಳ ನಡುವೆ ಇಂತಹ ಅಂಶಗಳಲ್ಲಿ ಕೊರತೆಗಳು ಇದ್ದರೆ ಆ ಒಂದು ದಾಂಪತ್ಯ ಜೀವನ ದೀರ್ಘಕಾಲದವರೆಗೆ ಉಳಿಯುವುದಿಲ್ಲ ಎಂದು ಚಾಣಕ್ಯನು ಅಭಿಪ್ರಾಯಪಟ್ಟಿದ್ದಾರೆ, ಹಾಗಾದರೆ ಯಾವ ಅಂಶಗಳ ಕೊರತೆಯಿಂದ ದಾಂಪತ್ಯ ಜೀವನ ದೀರ್ಘಕಾಲದವರೆಗೆ ಉಳಿಯುವುದಿಲ್ಲ ಎಂದು ನೋಡೋಣ. ಮೊದಲನೇದಾಗಿ ಚಾಣಕ್ಯನ ಪ್ರಕಾರ ದಂಪತಿಗಳ ನಡುವೆ ಪ್ರೀತಿಯ ಕೊರತೆ ಎನ್ನುವುದು ಎಂದಿಗೂ ಬರಬಾರದು, ಸಾಮಾನ್ಯವಾಗಿ ಎಲ್ಲರೂ ಹೇಳುವುದೇ ಮದುವೆಯ ಆರಂಭದಲ್ಲಿ ಪ್ರೀತಿ ಚೆನ್ನಾಗಿತ್ತು ಆದರೆ ದಿನ ಕಳೆದಂತೆ ಪ್ರೀತಿಯು ಕಡಿಮೆಯಾಗುತ್ತಿದೆ ಎಂದು, ಈ ಕಾರಣದಿಂದಾಗಿಯೇ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ

Also Read  ನೂಜಿಬಾಳ್ತಿಲ: ಎನ್ಎಸ್ಎಸ್ ಶಿಬಿರ ►ಶಿಬಿರಾಗ್ನಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಹಾಗಾಗಿ ಎಷ್ಟೇ ವರ್ಷಗಳು ಕಳೆದರೂ ಕೂಡ ನಿಮ್ಮ ಮೊದಲಿನ ಪ್ರೀತಿಯನ್ನು ನೀವು ಕಾಪಾಡಿಕೊಂಡು ಬಂದಿದ್ದೆ ಆದರೆ ದೀರ್ಘಕಾಲದ ಯಶಸ್ವಿ ದಾಂಪತ್ಯ ಜೀವನಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಹಾಗಾಗಿ ಪ್ರತಿಯೊಂದು ಸಂಬಂಧದಲ್ಲು ಪ್ರೀತಿ ಬಹಳ ಮುಖ್ಯ.
ಇನ್ನು ಎರಡನೆಯದಾಗಿ ದಂಪತಿಗಳ ಮಧ್ಯೆ ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದು ವಿಷಯಗಳನ್ನು ಮುಚ್ಚಿಡುವುದು ಮಾಡಬಾರದು, ಯಾವ ದಂಪತಿಗಳ ನಡುವಿನ ಮಾತುಕತೆ ಸುಳ್ಳಿನಿಂದ ನಡೆಯುತ್ತಿರುತ್ತದೆ ಅಥವಾ ವಿಚಾರಗಳನ್ನು ಮುಚ್ಚು ಇಡುತ್ತಾರೋ ಅಂತಹ ದಂಪತಿಗಳು ದೀರ್ಘ ಸಮಯದವರೆಗೆ ಒಟ್ಟಿಗೆ ಇರುವುದಿಲ್ಲ, ಯಾಕೆಂದರೆ ಸತ್ಯ ಒಂದಲ್ಲ ಒಂದು ರೀತಿಯಲ್ಲಿ ಬಯಲಾಗುತ್ತದೆ, ಇದು ನಿಮ್ಮ ದಾಂಪತ್ಯ ಜೀವನದ ಅಂತ್ಯಕ್ಕೂ ಕೂಡ ಕಾರಣವಾಗಬಹುದು, ಹಾಗಾಗಿ ಎಂತಹ ವಿಷಯವೇ ಇರಲಿ ನಿಮ್ಮ ಸಂಗಾತಿಯೊಡನೆ ನೀವು ಮುಕ್ತವಾಗಿ ನಿಜವಾದ ಮಾತುಗಳನ್ನು ಆಡುವುದು ಬಹಳ ಮುಖ್ಯವಾದದ್ದು. ಇನ್ನು ಚಾಣಕ್ಯನ ಪ್ರಕಾರ ಗಂಡ ಹೆಂಡತಿಯ ನಡುವೆ ಸಮರ್ಪಣೆಯ ಭಾವನೆ ಬಹಳ ಮುಖ್ಯವಾದದ್ದು ಒಬ್ಬರಿಗೊಬ್ಬರು ಸಮರ್ಪಣೆಯನ್ನು ಮಾಡಿಕೊಂಡು ಪ್ರೀತಿ ವಿಶ್ವಾಸದಿಂದ ಇರುವ ದಂಪತಿಗಳು ಬೇರೆಯವರಿಗೆ ಆದರ್ಶ ದಂಪತಿಗಳಾಗಿ ಪ್ರತಿಬಿಂಬಿಸುತ್ತಾರೆ, ಯಾವ ದಂಪತಿಗಳಲ್ಲಿ ಸಮರ್ಪಣೆ ಭಾವನೆ ಇರುತ್ತದೆಯೋ ಅಲ್ಲಿ ನಾನು ನನ್ನದು ಎನ್ನುವ ಅಹಂಕಾರ ಬರುವುದಿಲ್ಲ, ಒಂದು ವೇಳೆ ಸಮರ್ಪಣೆಯ ಭಾವನೆ ಇಲ್ಲದೆ ಹೋದರೆ ಅಲ್ಲಿ ನಾನು ನನ್ನದು ಎಂಬ ಅಹಂಕಾರದಲಿ ದಾಂಪತ್ಯ ಜೀವನ ಹಾಳಾಗುತ್ತದೆ, ಹಾಗಾಗಿ ಸಮರ್ಪಣೆಯ ಭಾವನೆ ಬಹಳ ಮುಖ್ಯವಾದದ್ದು. ಇನ್ನು ಅತಿಮುಖ್ಯವಾಗಿ ಒಬ್ಬರನ್ನೊಬ್ಬರು ಗೌರವಿಸುವಂತಹ ಮನೋಭಾವನೆ ಬಹಳ ಮುಖ್ಯವಾದದ್ದು, ಗಂಡ ಹೆಂಡತಿಗೆ ಆಗಲಿ ಅಥವಾ ಹೆಂಡತಿ ಗಂಡನಿಗೆ ಆಗಲಿ ಗೌರವವನ್ನು ನೀಡುವುದನ್ನು ಕಲಿಯಬೇಕು, ಯಾರೊಬ್ಬರೂ ಹೆಚ್ಚಲ್ಲ ಯಾರೊಬ್ಬರು ಕಡಿಮೆಯಲ್ಲ ಇಬ್ಬರೂ ಕೂಡ ಸಮಾನರಾದವರು ಎಂಬ ಭಾವನೆ ಇರಬೇಕು, ಇಬ್ಬರ ಭಾವನೆಗಳಿಗೆ ಕೂಡ ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು ಆಗಮಾತ್ರ ಬಾಂಧವ್ಯ ಚೆನ್ನಾಗಿರುತ್ತದೆ ಇಲ್ಲದೆ ಹೋದರೆ ಮಾತುಕತೆಗಳು ಹೆಚ್ಚಾಗಿ ವಾದ-ವಿವಾದಗಳು ನಡೆಯುತ್ತವೆ, ಇದರಿಂದ ಸಂಬಂಧಳು ಹಾಳಾಗುತ್ತದೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಮುಖ್ಯಅಂಶಗಳು ಬಗ್ಗೆ ಏನಾದರೂ ದಂಪತಿಗಳ ನಡುವೆ ಕೊರತೆಗಳು ಇದ್ದರೆ ಆಗ ದೀರ್ಘಕಾಲದವರೆಗೆ ಸುಖವಾದ ದಾಂಪತ್ಯ ಜೀವನವನ್ನು ಅನುಭವಿಸಲು ಆಗುವುದಿಲ್ಲ, ಹಾಗಾಗಿ ಉತ್ತಮ ಗುಣ ಸ್ವಭಾವವನ್ನು ಅನುಸರಿಸುವುದು ಒಳ್ಳೆಯದು.

Also Read  ಸುಬ್ರಹ್ಮಣ್ಯ: ವಿಷ ಸೇವಿಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top