(ನ್ಯೂಸ್ ಕಡಬ) newskadaba.com, ಆ.24: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಸವಾಲಿನ ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೈಲು ಪುತ್ತೂರು ಮಾರ್ಗವಾಗಿ ಮಂಗಳೂರು ತಲುಪಿದೆ.
ಇಳಿಜಾರು ಹಾಗೂ ತಿರುವುಗಳಿಂದ ಕೂಡಿದ ಘಾಟ್ ಮಾರ್ಗದಲ್ಲಿ ರೈಲಿನ ಭದ್ರತೆ, ವೇಗ ಮತ್ತು ಹಳಿಯ ತಾಂತ್ರಿಕ ಅಂಶಗಳನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಅಧಿಕಾರಿಗಳ ಅಂತಿಮ ಮೌಲ್ಯಮಾಪನ ಹಾಗೂ ವರದಿ ಬಳಿಕ ಮಂಗಳೂರು–ಸಕಲೇಶಪುರ ನಡುವೆ ನಿಯಮಿತ ಸಂಚಾರ ದಿನಾಂಕ ಅಧಿಕೃತವಾಗಿ ಪ್ರಕಟವಾಗಲಿದೆ.
ಈ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ರೈಲಿಗೆ ನಿಲುಗಡೆ ನೀಡಬೇಕು ಎಂಬ ಸಾರ್ವಜನಿಕ ಬೇಡಿಕೆ ಹೆಚ್ಚಿದ್ದು, ತಾಂತ್ರಿಕ ಸೌಲಭ್ಯ ಆಧರಿಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.








