ಕರಾವಳಿ ಕ್ರೀಡೆ ಕಂಬಳಕ್ಕೆ ಗ್ರೀನ್ ಸಿಗ್ನಲ್ ► ಕಂಬಳ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.03. ಕಳೆದ ಕೆಲವು ವರ್ಷಗಳಿಂದ ಪ್ರಾಣಿದಯಾ ಸಂಘದವರ ಕೆಂಗಣ್ಣಿಗೆ ಗುರಿಯಾಗಿ ಕೋರ್ಟು ಮೆಟ್ಟಿಲು ಹತ್ತಿದ್ದ ಕರಾವಳಿಯ ಕ್ರೀಡೆಯಾದ ಕಂಬಳಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕಂಬಳ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಅಂತಿಮ ಮುದ್ರೆ ಹಾಕಿರುವುದರಿಂದಾಗಿ ಕಂಬಳವನ್ನು ಮುಂದುವರಿಸಲು ಅನುಮತಿ ಸಿಕ್ಕಂತಾಗಿದೆ. ಕಂಬಳವನ್ನು ಉಳಿಸಬೇಕೆಂಬ ಕೂಗು ಕರಾವಳಿಯಲ್ಲಿ ಜೋರಾಗಿತ್ತಾದರೂ, ರಾಜ್ಯದಲ್ಲೆಡೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ ಈ ಬಗ್ಗೆ ರಾಜ್ಯ ವಿಧಾನಮಂಡಲದಲ್ಲೂ ವಿಧೇಯಕವನ್ನು ಮಂಡಿಸಲಾಗಿತ್ತು. ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಪುತ್ತೂರು ಕೋಡಿಂಬಾಡಿಯ ರೈ ಎಸ್ಟೇಟಿನ ಮಾಲಕರಾದ ಅಶೋಕ್ ರೈಯವರು ಕಾನೂನು ಹೋರಾಟಕ್ಕಿಳಿದಿದ್ದರು. ಕೊನೆಗೂ ಕಂಬಳ ಉಳಿಸಿ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

Scroll to Top