ವಿಹಾರಕ್ಕೆ ಬಂದು ಜಲಸಮಾಧಿಯಾದ ಕಾಲೇಜು ವಿದ್ಯಾರ್ಥಿಗಳು: ಕೊಟ್ಟಾಯಂ ಮೂಲದ ಇಬ್ಬರು ಯುವಕರ ಶವ ಪತ್ತೆ

(ನ್ಯೂಸ್‌ ಕಡಬ) newskadaba.com,  ಜೂ.17: ಬೇಕಲ ಪಳ್ಳಿಕೆರೆಯ ರೆಡ್ ಮೂನ್ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿದಾಗ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೃತದೇಹಗಳು ಸೋಮವಾರ ಮಧ್ಯಾಹ್ನ ಚಿತ್ತಾರಿ ನದಿಯಲ್ಲಿ ಪತ್ತೆಯಾಗಿವೆ. ಮೃತರನ್ನು ಕೊಟ್ಟಾಯಂ ಜಿಲ್ಲೆಯ ಚಂಗನಾಶೇರಿ ನಿವಾಸಿಗಳಾದ ಅಂಕಿತ್ (20) ಮತ್ತು ಅಪ್ಪು ಟಿ. ಅಬ್ರಹಾಂ (20) ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ ಈ ಇಬ್ಬರು ಯುವಕರು ತಮ್ಮ ಸ್ನೇಹಿತರೊಡನೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಸಮುದ್ರದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ […]

ವಿಹಾರಕ್ಕೆ ಬಂದು ಜಲಸಮಾಧಿಯಾದ ಕಾಲೇಜು ವಿದ್ಯಾರ್ಥಿಗಳು: ಕೊಟ್ಟಾಯಂ ಮೂಲದ ಇಬ್ಬರು ಯುವಕರ ಶವ ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡೆಬಿಟ್ ಕಾರ್ಡ್ ಮೂಲಕ ₹2.12 ಲಕ್ಷ ಲೂಟಿ: ಆಸ್ಪತ್ರೆ ಬಿಲ್ ಕಟ್ಟಿದ ಬೆನ್ನಲ್ಲೇ ಗ್ರಾಹಕನಿಗೆ ಶಾಕ್!

(ನ್ಯೂಸ್‌ ಕಡಬ) newskadaba.com,  ಜೂ.17: ಆಸ್ಪತ್ರೆಯ ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿದ್ದ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಖದೀಮರು ಜೂನ್ 5 ರಿಂದ 8ರ ನಡುವಿನ ಅವಧಿಯಲ್ಲಿ ₹2.12 ಲಕ್ಷ ಹಣವನ್ನು ವಂಚನೆಯಿಂದ ಲೂಟಿ ಮಾಡಿದ್ದಾರೆ. ಸಂತ್ರಸ್ತರು ಜೂನ್ 3ರಂದು ಆಸ್ಪತ್ರೆಯ ಬಿಲ್ ಪಾವತಿಗೆ ಡೆಬಿಟ್ ಕಾರ್ಡ್ ಬಳಸಿದ ಬಳಿಕ ಯಾವುದೇ ವ್ಯವಹಾರ ನಡೆಸಿರಲಿಲ್ಲ.ಜೂನ್ 8ರಂದು ಹಣ ಕಡಿತವಾಗಿರುವ ಎಸ್‌ಎಂಎಸ್ ಬಂದಾಗ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್

ಡೆಬಿಟ್ ಕಾರ್ಡ್ ಮೂಲಕ ₹2.12 ಲಕ್ಷ ಲೂಟಿ: ಆಸ್ಪತ್ರೆ ಬಿಲ್ ಕಟ್ಟಿದ ಬೆನ್ನಲ್ಲೇ ಗ್ರಾಹಕನಿಗೆ ಶಾಕ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಂಜನಗೂಡು: ಜೆಸಿಬಿ ಬ್ಲೇಡ್‌ಗೆ ಸಿಲುಕಿ ಕವಚ ಜರ್ಜರಿತವಾಗಿದ್ದ ಆಮೆಗೆ ಮರುಜೀವ; ಕಪಿಲಾ ನದಿಗೆ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಜೂ.17: ನಂಜನಗೂಡು ಸಮೀಪದ ಜಮೀನಿನಲ್ಲಿ ಜೆಸಿಬಿ ಕಾಮಗಾರಿ ವೇಳೆ ಮಣ್ಣಿನಲ್ಲಿದ್ದ ಆಮೆಯೊಂದು ಯಂತ್ರದ ಬ್ಲೇಡ್‌ಗೆ ಸಿಲುಕಿ, ಅದರ ಕವಚ (Shell) ಸಂಪೂರ್ಣ ಜರ್ಜರಿತವಾಗಿತ್ತು. ಬದುಕುವುದು ಅಸಾಧ್ಯ ಎನ್ನುತ್ತಿದ್ದ ಸಂದರ್ಭದಲ್ಲಿ ಪ್ರಾಣಿ ರಕ್ಷಕ ಚಂದ್ರಶೇಖರ್ ಅವರು ಆಮೆಯನ್ನು ವಶಕ್ಕೆ ಪಡೆದು, ಗಾಯವನ್ನು ಸ್ವಚ್ಛಗೊಳಿಸಿ ನಿರಂತರ ವೈದ್ಯಕೀಯ ಆರೈಕೆ ನೀಡಿದರು.ಚಿಕಿತ್ಸೆಯ ಬಳಿಕ ಆಮೆ ಸಂಪೂರ್ಣ ಗುಣಮುಖವಾಗಿದ್ದು, ಚಂದ್ರಶೇಖರ್ ಅವರು ಅದನ್ನು ಅದರ ನೈಸರ್ಗಿಕ ವಾಸಸ್ಥಳವಾದ ಕಪಿಲಾ ನದಿಗೆ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ನಡುವೆ

ನಂಜನಗೂಡು: ಜೆಸಿಬಿ ಬ್ಲೇಡ್‌ಗೆ ಸಿಲುಕಿ ಕವಚ ಜರ್ಜರಿತವಾಗಿದ್ದ ಆಮೆಗೆ ಮರುಜೀವ; ಕಪಿಲಾ ನದಿಗೆ ಬಿಡುಗಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿಕ್ಷಕರಿಗೆ ಎಐ ಹಾಜರಾತಿ ಬಿಸಿ: ಜುಲೈ 1ರಿಂದ ವಿದ್ಯಾರ್ಥಿಗಳಿಗೂ ಫೇಸ್ ರಿಕಗ್ನಿಷನ್ ಕಡ್ಡಾಯ!

(ನ್ಯೂಸ್‌ ಕಡಬ) newskadaba.com,  ಜೂ.17: ಜೂನ್ 1ರಿಂದ ಜಾರಿಯಾದ ಎಐ ಫೇಸ್-ಲೊಕೇಶನ್ ಹಾಜರಾತಿ ವ್ಯವಸ್ಥೆಯಿಂದಾಗಿ ಬಳ್ಳಾರಿಯ ಶೇ. 95ರಷ್ಟು ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಬರುತ್ತಿದ್ದಾರೆ. ತಡವಾಗಿ ಬರುವ ಸಿಬ್ಬಂದಿಗೆ ಆ ದಿನ ‘ಆಕಸ್ಮಿಕ ರಜೆ’ ಎಂದು ಪರಿಗಣಿಸಲಾಗುತ್ತಿರುವುದರಿಂದ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆ.ಈ ಹಿಂದೆ ನೆಪ ಹೇಳಿ ಶಾಲೆಯಿಂದ ಹೊರಗುಳಿಯುತ್ತಿದ್ದ ಶೇ. 15ರಷ್ಟು ಶಿಕ್ಷಕರ ಪ್ರವೃತ್ತಿಗೆ ಹಾಗೂ ಕಚೇರಿ ಕೆಲಸದ ಹೆಸರಲ್ಲಿ ಅಲೆದಾಡುತ್ತಿದ್ದವರಿಗೆ ಹೊಸ ನಿಯಮದಿಂದ ಕಡಿವಾಣ ಬಿದ್ದಿದೆ. ಶಿಕ್ಷಕರ ಬೆನ್ನಲ್ಲೇ, ಜುಲೈ 1ರಿಂದ ಜಿಲ್ಲೆಯ

ಶಿಕ್ಷಕರಿಗೆ ಎಐ ಹಾಜರಾತಿ ಬಿಸಿ: ಜುಲೈ 1ರಿಂದ ವಿದ್ಯಾರ್ಥಿಗಳಿಗೂ ಫೇಸ್ ರಿಕಗ್ನಿಷನ್ ಕಡ್ಡಾಯ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ಕಿರೀಟ ಗೆದ್ದ ಮಂಗಳೂರು ಮೂಲದ ಉದ್ಯಮಿ ಯಶೋಧಾ ರಾಜೇಶ್

(ನ್ಯೂಸ್‌ ಕಡಬ) newskadaba.com,  ಜೂ.17: ಥೈಲ್ಯಾಂಡ್‌ನ ಹುವಾ ಹಿನ್‌ನಲ್ಲಿ ನಡೆದ ಜಾಗತಿಕ ಸ್ಪರ್ಧೆಯಲ್ಲಿ 22 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ “ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026″ ಪ್ರಶಸ್ತಿ ಗೆದ್ದ ಮಂಗಳೂರಿನ ಯಶೋಧಾ ರಾಜೇಶ್. ಪ್ರತಿಭಾ ಸುತ್ತಿನಲ್ಲಿ ಅವರು ಪ್ರದರ್ಶಿಸಿದ ಭಾರತೀಯ ಸಂಸ್ಕೃತಿ ಬಿಂಬಿಸುವ “ಅರ್ಧನಾರೀಶ್ವರ” ನೃತ್ಯ ರೂಪಕ ಮತ್ತು ಕರ್ನಾಟಕದ ಶಿಲಾಬಾಲಿಕೆಯರಿಂದ ಪ್ರೇರಿತವಾದ ವೇಷಭೂಷಣ ಜಾಗತಿಕ ಗಮನ ಸೆಳೆಯಿತು.ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಸೌಂದರ್ಯದ ಜೊತೆಗೆ ವಿಶೇಷ ಮಕ್ಕಳ ಆಶ್ರಮಕ್ಕೆ ಭೇಟಿ ಹಾಗೂ ಸಮುದ್ರ

ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ಕಿರೀಟ ಗೆದ್ದ ಮಂಗಳೂರು ಮೂಲದ ಉದ್ಯಮಿ ಯಶೋಧಾ ರಾಜೇಶ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಮ್ ಮುಗಿಸಿ ಬಂದ ಬೆನ್ನಲ್ಲೇ ದುರಂತ: ಯುವ ಸಾಧಕ, ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಅಕಾಲಿಕ ಮರಣ

(ನ್ಯೂಸ್‌ ಕಡಬ) newskadaba.com,  ಜೂ.17: ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ ದಾವಣಗೆರೆಯ ಪ್ರತಿಭಾನ್ವಿತ ಯುವಕ ಸುಶೀಲ್ ಕುಮಾರ್ (26) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಸುಮಾರು 8:30ರ ವೇಳೆಗೆ ಜಿಮ್ ಮುಗಿಸಿ ಮನೆಗೆ ಮರಳಿದ್ದ ಸುಶೀಲ್, ತಲೆಸುತ್ತು ಬರುತ್ತಿದೆ ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋ ಬಿಪಿ  ಉಂಟಾಗಿ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಜಿಮ್ ಮುಗಿಸಿ ಬಂದ ಬೆನ್ನಲ್ಲೇ ದುರಂತ: ಯುವ ಸಾಧಕ, ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಅಕಾಲಿಕ ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಜ್ಪೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮಳಲಿ ಸಂಕೇಶದಲ್ಲಿ 127 ಲೋಡ್ ಅಕ್ರಮ ಮರಳು ವಶ, ಇಬ್ಬರ ವಿರುದ್ಧ ಕೇಸ್

(ನ್ಯೂಸ್‌ ಕಡಬ) newskadaba.com,  ಜೂ.17: ಮಂಗಳೂರು ಸಮೀಪದ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಫಲ್ಗುಣಿ ನದಿಯಿಂದ ಪರವಾನಗಿ ಇಲ್ಲದೆ, ಸರ್ಕಾರಕ್ಕೆ ರಾಯಲ್ಟಿ ಪಾವತಿಸದೆ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದ್ದ ಬೃಹತ್ ಜಾಲವನ್ನು ಬಜ್ಪೆ ಪೊಲೀಸರು ಪತ್ತೆಹಚ್ಚಿದ್ದಾರೆ. ವಿಶ್ವಾಸಾರ್ಹ ಮಾಹಿತಿ ಮೇರೆಗೆ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಸಾರ್ವಜನಿಕರ ಸಮ್ಮುಖದಲ್ಲಿ ವಿವಿಧೆಡೆ ದಾಳಿ ನಡೆಸಿದೆ. ಕಾರ್ಯಾಚರಣೆ ವೇಳೆ ಫಲ್ಗುಣಿ ನದಿ ರಸ್ತೆ, ಬನತ್ತಡಿ ರಸ್ತೆ, ಗುಡ್ಡದ ಪ್ರದೇಶ ಹಾಗೂ ಸೀತಾರಾಮ ಭಜನಾ ಮಂದಿರದ

ಬಜ್ಪೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮಳಲಿ ಸಂಕೇಶದಲ್ಲಿ 127 ಲೋಡ್ ಅಕ್ರಮ ಮರಳು ವಶ, ಇಬ್ಬರ ವಿರುದ್ಧ ಕೇಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಿಯಾಯಿತಿ ದರದಲ್ಲಿ ಸಮಗ್ರ ಹೆಲ್ತ್ ಚೆಕ್‌ಅಪ್ ಪ್ಯಾಕೇಜ್ ಪ್ರಕಟಿಸಿದ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ

(ನ್ಯೂಸ್‌ ಕಡಬ) newskadaba.com,  ಜೂ.16 ಮಂಗಳೂರು: ಇಲ್ಲಿನ ಪ್ರಸಿದ್ಧ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಆರೋಗ್ಯ ರಕ್ಷಣೆ ಹಾಗೂ ರೋಗಗಳ ಮುನ್ನೆಚ್ಚರಿಕೆಗಾಗಿ ‘ಆರೋಗ್ಯವನ್ನು ರಕ್ಷಿಸೋಣ ಪ್ರಯಾಣವನ್ನು ಮುಂದುವರಿಸೋಣ’ ಎಂಬ ವಿಶೇಷ ಫುಲ್‌ ಬಾಡಿ ಹೆಲ್ತ್‌ ಚೆಕ್‌ಅಪ್‌ ಪ್ಯಾಕೇಜ್ ಅನ್ನು ಪ್ರಕಟಿಸಿದೆ. ರೂ. 17,000 ಮೌಲ್ಯದ ಈ ಸಮಗ್ರ ಪ್ಯಾಕೇಜ್ ಜುಲೈ 1 ರಿಂದ ಆಗಸ್ಟ್ 31 ರವರೆಗೆ ಕೇವಲ ರೂ. 7,999 ರ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿರಲಿದೆ. ಈ ಪ್ಯಾಕೇಜ್‌ನಲ್ಲಿ ಕಲರ್ ಡಾಪ್ಲರ್ ECHO,

ರಿಯಾಯಿತಿ ದರದಲ್ಲಿ ಸಮಗ್ರ ಹೆಲ್ತ್ ಚೆಕ್‌ಅಪ್ ಪ್ಯಾಕೇಜ್ ಪ್ರಕಟಿಸಿದ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ? ಆತಂಕದ ಬೆನ್ನಲ್ಲೇ ಬಯಲಾಯ್ತು ಅಸಲಿ ಸತ್ಯ!

(ನ್ಯೂಸ್‌ ಕಡಬ) newskadaba.com,  ಜೂ.16 ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಕಸ ವಿಂಗಡಣೆ ಮಾಡುವಾಗ ಬರೋಬ್ಬರಿ 59 ತೋಟಾಗಳು ಪತ್ತೆಯಾಗಿದ್ದು, ಪೌರಕಾರ್ಮಿಕರು ಹಾಗೂ ಪೊಲೀಸರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದರ ಹಿಂದಿರುವ ಅಸಲಿ ಸತ್ಯ ಬಯಲಾಗಿದೆ. ಕಸದ ರಾಶಿಯಲ್ಲಿ ಏಕಕಾಲಕ್ಕೆ 59 ಗುಂಡುಗಳು ಸಿಕ್ಕಿದ್ದರಿಂದ ಗಾಬರಿಗೊಂಡ ಪೌರಕಾರ್ಮಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಉದ್ಯಮಭಾಗ ಪೊಲೀಸರು ಗುಂಡುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದರು.ವಿಜಯಪುರ ಮೂಲದ ಮಾಜಿ ಸೈನಿಕನೊಬ್ಬ

ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ? ಆತಂಕದ ಬೆನ್ನಲ್ಲೇ ಬಯಲಾಯ್ತು ಅಸಲಿ ಸತ್ಯ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊನೆ ಕ್ಷಣದಲ್ಲಿ ಬಯಲಾಯ್ತು ಆಸ್ಪತ್ರೆಯ ಎಡವಟ್ಟು! ಅಂತ್ಯಸಂಸ್ಕಾರಕ್ಕೆ ತಂದಿದ್ದ ಶವ ನೋಡಿ ಕುಟುಂಬಸ್ಥರು ಶಾಕ್!

(ನ್ಯೂಸ್‌ ಕಡಬ) newskadaba.com,  ಜೂ.16 ಅಸ್ಸಾಂನ ಪ್ರತಿಷ್ಠಿತ ‘ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ ಸಿಬ್ಬಂದಿಯ ಗಂಭೀರ ನಿರ್ಲಕ್ಷ್ಯದಿಂದಾಗಿ ಎರಡು ಮೃತದೇಹಗಳು ಅದಲು-ಬದಲಾದ ಘಟನೆ ವರದಿಯಾಗಿದೆ. ಈ ಎಡವಟ್ಟು ಮೃತರ ಕುಟುಂಬಸ್ಥರಿಗೆ ತೀವ್ರ ಆಘಾತ ಹಾಗೂ ಮಾನಸಿಕ ಸಂಕಷ್ಟವನ್ನು ತಂದೊಡ್ಡಿದೆ. ಸೋನಾರಿ ಮೂಲದ ಮನೋಜ್ ಬೌರಿ ಅವರು ಜೂನ್ 7ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಮೃತಪಟ್ಟಿದ್ದರು.ಮರಣೋತ್ತರ ಪರೀಕ್ಷೆಯ ಬಳಿಕ ಆಸ್ಪತ್ರೆ ನೀಡಿದ ಶವವನ್ನು ಪಡೆದು ಮನೆಗೆ ಕೊಂಡೊಯ್ದ ಕುಟುಂಬಸ್ಥರು,

ಕೊನೆ ಕ್ಷಣದಲ್ಲಿ ಬಯಲಾಯ್ತು ಆಸ್ಪತ್ರೆಯ ಎಡವಟ್ಟು! ಅಂತ್ಯಸಂಸ್ಕಾರಕ್ಕೆ ತಂದಿದ್ದ ಶವ ನೋಡಿ ಕುಟುಂಬಸ್ಥರು ಶಾಕ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top