ರಾಷ್ಟ್ರೀಯ ನ್ಯೂಸ್

ಮೂವರು ಪೊಲೀಸ್ ಸಿಬ್ಬಂದಿಯ ಹತ್ಯೆಗೈದ ನಕ್ಸಲರು

(ನ್ಯೂಸ್ ಕಡಬ)newskadaba.com  ಛತ್ತೀಸ್ ಗಢ, ಫೆ.25. ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್‌ಐ) ಸೇರಿದಂತೆ ಮೂವರು ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ಹತರಾಗಿರುವ ಘಟನೆ ಛತ್ತೀಸ್‌ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಎಎಸ್ಐ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬರ್ ಕುಂಜಮ್ ಜೋಗಾ ಮತ್ತು ವಂಜಮ್ ಭೀಮಾ ಎಂದು ಗುರುತಿಸಲಾಗಿದೆ.  

ಮೂವರು ಪೊಲೀಸ್ ಸಿಬ್ಬಂದಿಯ ಹತ್ಯೆಗೈದ ನಕ್ಸಲರು Read More »

ರಾಷ್ಟ್ರೀಯ ನ್ಯೂಸ್

ಜೋಯಾಲುಕ್ಕಾಸ್‌ ಮೇಲೆ ಇ.ಡಿ ದಾಳಿ, ₹305 ಕೋಟಿ ಮೌಲ್ಯದ ಆಸ್ತಿ ಜಪ್ತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಜೋಯಾಲುಕ್ಕಾಸ್‌ಗೆ ಸೇರಿದ 305.84 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ. ಜನಪ್ರಿಯ ಆಭರಣ ತಯಾರಿಕಾ ಮತ್ತು ಮಾರಾಟ ಸಂಸ್ಥೆಯ ಐದು ಆವರಣಗಳ ಮೇಲೆ ಇ.ಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಆಭರಣ ಸರಪಳಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇ.ಡಿ ಆರೋಪಿಸಿದೆ.

ಜೋಯಾಲುಕ್ಕಾಸ್‌ ಮೇಲೆ ಇ.ಡಿ ದಾಳಿ, ₹305 ಕೋಟಿ ಮೌಲ್ಯದ ಆಸ್ತಿ ಜಪ್ತಿ Read More »

ರಾಷ್ಟ್ರೀಯ ನ್ಯೂಸ್

ಆಂಧ್ರದ ರಾಜ್ಯಪಾಲರಾಗಿ ನಿವೃತ್ತ ನ್ಯಾ.ಅಬ್ದುಲ್‌ ನಜೀರ್‌ ಪ್ರಮಾಣ ವಚನ ಸ್ವೀಕಾರ

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.25. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದವರಾದ ಅಬ್ದುಲ್‌ ನಜೀರ್‌ ಅವರು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ನ್ಯಾ.ನಜೀರ್‌ ಅವರಿಗೆ ರಾಜ ಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದಾರೆ.  

ಆಂಧ್ರದ ರಾಜ್ಯಪಾಲರಾಗಿ ನಿವೃತ್ತ ನ್ಯಾ.ಅಬ್ದುಲ್‌ ನಜೀರ್‌ ಪ್ರಮಾಣ ವಚನ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ಯುವಕನೋರ್ವ ನಿಂದ ಸೇನೆಯ ಅಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ…!

(ನ್ಯೂಸ್ ಕಡಬ)newskadaba.com ಉತ್ತರಾಖಂಡ, ಫೆ.25. ಒಂದು ಗಾಯನದ ಅಪ್ ಮೂಲಕ ಸ್ನೇಹ ಬೇಳಸಿರುವ ಮುಸಲ್ಮಾನ ಯುವಕನು ಓರ್ವ ಸೇನಾಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಮುಸಲ್ಮಾನ ಯುವಕನು ಸೇನಾಧಿಕಾರಿಯ ಪತ್ನಿಯ ಜೊತೆ ಅಶ್ಲೀಲ ಸಂವಾದ ನಡೆಸಿದ್ದು, ಅಪ್ರಾಪ್ತ ಹುಡುಗಿಯ ಜೊತೆ ಅನೈಸರ್ಗಿಕ ಶಾರೀರಿಕ ಸಂಬಂಧ ಇಟ್ಟುಕೊಂಡಿರುವ ಆರೋಪವಿದೆ. ಇಷ್ಟೇ ಅಲ್ಲ, ಆರೋಪಿಯು ಸೇನಾಧಿಕಾರಿಯ ಹುಡುಗಿಗೆ ಮತಾಂತರ ಆಗಲು ಅನಿವಾರ್ಯಗೊಳಸಿದ್ದಾನೆ.

ಯುವಕನೋರ್ವ ನಿಂದ ಸೇನೆಯ ಅಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ…! Read More »

ರಾಷ್ಟ್ರೀಯ ನ್ಯೂಸ್

ಪ್ರತಿಷ್ಠಿತ ಟೆಲಿಕಾಂ ಕಂಪನಿ ‘ಎರಿಕ್ಸನ್’ ಉದ್ಯೋಗಿಗಳಿಗೆ ಬಿಗ್ ಶಾಕ್…! ➤ 8500 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಟೆಲಿಕಾಂ ಹಾರ್ಡ್ವೇರ್ ತಯಾರಕ ಎರಿಕ್ಸನ್ ನೌಕರರ ವಜಾಕ್ಕೆ ಮುಂದಾಗಿದ್ದು, ಕಂಪನಿಯು ತನ್ನ ವೆಚ್ಚವನ್ನ ಕಡಿತಗೊಳಿಸಲು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ನೌಕರರಿಗೆ ಮೆಮೊ ನೀಡಿದೆ. ಎರಿಕ್ಸನ್ ಸ್ವೀಡನ್’ ನಲ್ಲಿ 1400 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿತು. ಆದ್ರೆ, ಕೆಲವು ದಿನಗಳ ನಂತ್ರ ಕಂಪನಿಯು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲು ನಿರ್ಧರಿಸಿದೆ.

ಪ್ರತಿಷ್ಠಿತ ಟೆಲಿಕಾಂ ಕಂಪನಿ ‘ಎರಿಕ್ಸನ್’ ಉದ್ಯೋಗಿಗಳಿಗೆ ಬಿಗ್ ಶಾಕ್…! ➤ 8500 ನೌಕರರು ವಜಾ Read More »

ರಾಷ್ಟ್ರೀಯ ನ್ಯೂಸ್

ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತ್ಯು…!

(ನ್ಯೂಸ್ ಕಡಬ)newskadaba.com ಗುಜರಾತ್, ಫೆ.25. ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತಪಟ್ಟ ಘಟನೆ ಗುಜರಾತ್ ನ ಭಾವನಗರದ ಸುಭಾಷ್‌ನಗರ ಪ್ರದೇಶದಲ್ಲಿ ನಡೆದಿದೆ. ಭರವಾಡ ಕುಟುಂಬದ ಜಿನಾಭಾಯಿ ಭಾಕಾಭಾಯಿ ರಾಥೋಡ್ ಎಂಬವರ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನ ವಿವಾಹ ನಿಗದಿಯಾಗಿತ್ತು. ಮದುವೆಯ ವೇಳೆ ಜಿನಾಭಾಯಿ ಅವರ ಮಗಳು ಹೇತಾಳ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ತಕ್ಷಣವೇ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ತಪಾಸಣೆ ನಡೆಸಿದ ವೈದ್ಯರು ಯುವತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.  

ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತ್ಯು…! Read More »

ರಾಷ್ಟ್ರೀಯ ನ್ಯೂಸ್

ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ…!

(ನ್ಯೂಸ್ ಕಡಬ)newskadaba.com ಲಾಸ್ ಏಂಜಲೀಸ್, ಫೆ.25. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿರುವ ʼಆರ್‌ ಆರ್‌ ಆರ್‌ʼ ಇತ್ತೀಚೆಗಷ್ಟೇ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ ‘ಆರ್‌ ಆರ್‌ ಆರ್‌’ ಸಿನಿಮಾ ನಾಮಿನೇಟ್‌ ಆಗಿದೆ. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಅಮೆರಿಕಾದಲ್ಲೇ ಬೀಡು ಬಿಟ್ಟಿರುವ ʼಆರ್‌ ಆರ್‌ ಆರ್‌ʼ ತಂಡ ಹಾಲಿವುಡ್‌ ಕ್ರಿಟಿಕ್ಸ್ ಅಸೋಸಿಯೇಷನ್ ಕೊಡಮಾಡುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. 6ನೇ ವರ್ಷದ ಕ್ರಿಟಿಕ್ಸ್ ಅಸೋಸಿಯೇಷನ್ ನ ಹೆಚ್‌ ಸಿಎ ಫಿಲ್ಮ್ ಅವಾರ್ಡ್‌ ನ್ನು

ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ…! Read More »

ರಾಷ್ಟ್ರೀಯ ನ್ಯೂಸ್

ಗ್ರಾಹಕರೇ ಗಮನಿಸಿ…!    ➤  ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಫೆಬ್ರವರಿಯಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸಿದೆ. ಮಾರ್ಚ್ ನಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ಜನರು ಅನೇಕ ಹೊಸ ಬದಲಾವಣೆಗಳನ್ನು ನೋಡಬಹುದು ಎನ್ನಲಾಗಿದೆ. ಬ್ಯಾಂಕುಗಳು ಸಾಲವನ್ನು ದುಬಾರಿಯಾಗಿಸಬಹುದು. ಹೊಸ ವೈಶಿಷ್ಟ್ಯಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿಯೂ ನೋಡಬಹುದು. ರೈಲಿನ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಬಹುದು. ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತವೆ.  

ಗ್ರಾಹಕರೇ ಗಮನಿಸಿ…!    ➤  ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು Read More »

ರಾಷ್ಟ್ರೀಯ ನ್ಯೂಸ್

ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ    ➤  ಈ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಕರೆನ್ಸಿ ನೋಟುಗಳ ಮೇಲೆ ಯಾವುದೇ ಬರಹಗಳು ಅಥವಾ ಗೀರುಗಳು ಇರಬಾರದು. ಹಣದ ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅದು ಅಮಾನ್ಯ. ಅವುಗಳ ಮೇಲೆ ಯಾವುದೇ ಬರಹಗಳು ಅಥವಾ ಹುಚ್ಚು ಗೀರುಗಳಿದ್ದರೆ ಅಂತಹ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ. ಈ ಕುರಿತು ಆರ್‌ಬಿಐ ನಿರ್ಧಾರ ಏನು ಮುಂತಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  

ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ    ➤  ಈ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ Read More »

ರಾಷ್ಟ್ರೀಯ ನ್ಯೂಸ್

ಮಂಡ್ಯ ಜಿಲ್ಲೆಯ ಶಿಂಷಾ ಸಹಕಾರ ಬ್ಯಾಂಕ್‌ಗೆ RBI ನಿರ್ಬಂಧ

(ನ್ಯೂಸ್ ಕಡಬ)newskadaba.com ಮುಂಬೈ, ಫೆ.25. ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್‌ ನಿಯಮಿತದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ಬಂಧ ಹೇರಿದೆ. ಬ್ಯಾಂಕ್‌ನ ಹಣಕಾಸು ಸ್ಥಿತಿ ಹದಗೆಡುತ್ತಿರುವ ಕಾರಣ ಆರ್‌ಬಿಐ ಈ ತೀರ್ಮಾನ ಕೈಗೊಂಡಿದೆ. ಆರ್‌ಬಿಐ ಅನುಮತಿ ಇಲ್ಲದೆ ಈ ಹೊಸದಾಗಿ ಸಾಲ ಕೊಡು ವಂತಿಲ್ಲ, ಹೊಸದಾಗಿ ಹೂಡಿಕೆ ಮಾಡುವಂತಿಲ್ಲ, ಹೊಸದಾಗಿ ಠೇವಣಿ ಸ್ವೀಕರಿಸುವಂತೆಯೂ ಇಲ್ಲ.  

ಮಂಡ್ಯ ಜಿಲ್ಲೆಯ ಶಿಂಷಾ ಸಹಕಾರ ಬ್ಯಾಂಕ್‌ಗೆ RBI ನಿರ್ಬಂಧ Read More »

ರಾಷ್ಟ್ರೀಯ ನ್ಯೂಸ್
Scroll to Top