ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ       ➤  ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ.25. ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ. ಎಲ್ಲಾ ಹಂತಗಳಲ್ಲಿ ಹೊಣೆಗಾರಿಕೆಯನ್ನು ಸರಿಪಡಿಸುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಹೊರಿಸಿರುವವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿ, ಭಾರತವು ನಿಜವಾಗಿಯೂ ತಾನು ಶ್ರಮಿಸುತ್ತಿರುವುದು ಸಾಧ್ಯವಾಗಬೇಕಾದರೆ ಅದರ ಮೂಲ ಮೌಲ್ಯಗಳು ಮತ್ತು ಸ್ವಭಾವಕ್ಕೆ ಹಿಂತಿರುಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ       ➤  ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಫೆ.25. ಮೊಹಾನಿಯಾ ಸುರಂಗದ ಬಳಿ ಟ್ರಕ್ ವೊಂದು ನಿಂತಿದ್ದ ಬಸ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ, 14 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗೃಹ ಸಚಿವ ಅಮಿತ್ ಶಾ ಅವರ ರ್ಯಾೊಲಿಗೆ ತೆರಳಿದ್ದ ಬಸ್ ನ್ನು ಚಾಲಕರು ಸುರಂಗ ಮಾರ್ಗದ ಬಳಿ ನಿಲ್ಲಿಸಿದ್ದಾರೆ. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಬಸ್ ಗಳಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಒಂದು ಬಸ್ ಪಲ್ಟಿಯಾಗಿದ್ದು, ಉಳಿದ

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ರಿವಾಲ್ವರ್ ತೋರಿಸಿ ಲಾರಿ ಕಿಡ್ನಾಪ್‌ !

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.25. ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಕರ್ನಾಟಕ ಕೇರಳ ಗಡಿಯ ಮೀಯ ಪದವಿನಲ್ಲಿ ನಡೆದಿದ್ದು, ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಮಂಜೇಶ್ವರ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25), ಸೋಂಕಾಲಿನ ಹೈದರ್ ಅಲಿ (22), ಪೈವಳಿಕೆ ಕಳಾಯಿಯ ಸಯಾಫ್ (22), ಮೀಯಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು. ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ

ಕಾಸರಗೋಡು: ರಿವಾಲ್ವರ್ ತೋರಿಸಿ ಲಾರಿ ಕಿಡ್ನಾಪ್‌ ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದ ‘ಕೊಂಬನ್ ಟ್ರಾವೆಲ್ಸ್’ ಆಟ ಇನ್ಮುಂದೆ ಕರ್ನಾಟಕದಲ್ಲಿ ಶುರು

(ನ್ಯೂಸ್ ಕಡಬ) newskadaba.com ಕೇರಳ, ಫೆ.25. ಬಸ್ ಕ್ಷೇತ್ರದಲ್ಲಿ ಯುವ ಜನತೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ಕೇರಳದ ‘ಕೊಂಬನ್’ ಟ್ರಾವೆಲ್ಸ್ ಇನ್ಮುಂದೆ ಕರ್ನಾಟಕದಲ್ಲಿ ತನ್ನ ಸೇವೆಯನ್ನು ಮುಂದುವರಿಸಲಿದ್ದು, ಇದು ಕರ್ನಾಟಕದ ಬಸ್ ಪ್ರೇಮಿಗಳಲ್ಲಿ ಸಂತಸವನ್ನು ಉಂಟುಮಾಡಿದೆ. ಬಸ್ಸಿನ ಮೂಲ ದರಕ್ಕಿಂತಲೂ ಹೆಚ್ಚಿನ ಹಣ ವ್ಯಯಿಸಿ ಸೌಂಡ್ಸ್ & ಲೈಟಿಂಗ್ಸ್ ನೊಂದಿಗೆ ತನ್ನದೇ ವಿಶಿಷ್ಟ ಶೈಲಿಯ ಪೈಂಟಿಂಗ್ ಮೂಲಕ ಯುವ ಜನತೆಯಲ್ಲಿ ಬಸ್ ಬಗ್ಗೆ ಹೊಸ ಕಲ್ಪನೆಯನ್ನು ಮೂಡಿಸಿದ್ದ ಕೊಂಬನ್ ಟ್ರಾವೆಲ್ಸ್ ಹುಟ್ಟಿಕೊಂಡಿರುವುದೇ ಒಂದು ರೋಚಕ ಕಥೆ. ಆನೆಯನ್ನು ಖರೀದಿಸಲೆಂದು

ಕೇರಳದ ‘ಕೊಂಬನ್ ಟ್ರಾವೆಲ್ಸ್’ ಆಟ ಇನ್ಮುಂದೆ ಕರ್ನಾಟಕದಲ್ಲಿ ಶುರು Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮೆಟಾದಲ್ಲಿ ಸಾವಿರಾರು ಸಿಬ್ಬಂದಿಗೆ ಗೇಟ್‌ಪಾಸ್ !!   

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಫೆ.24. ಆರ್ಥಿಕ ಅನಿಶ್ಚಿತತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾಗತಿಕ ಕಂಪೆನಿಗಳು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ್ದು, ಇದೀಗ ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ಕೂಡ ಇದೇ ಹಾದಿಗೆ ಮರಳಿದೆ. ಮೆಟಾ ನಿರ್ಧಾರದಿಂದ ಸಾವಿರಾರು ಉದ್ಯೋಗಗಳ ಕಡಿತವಾಗಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಉದ್ಯೋಗ ಕಡಿತದ ಬಗ್ಗೆ ಪ್ರತಿಕ್ರಿಯೆ ನೀಡಲು ಮೆಟಾ ನಿರಾಕರಿಸಿದೆ.

ಮೆಟಾದಲ್ಲಿ ಸಾವಿರಾರು ಸಿಬ್ಬಂದಿಗೆ ಗೇಟ್‌ಪಾಸ್ !!    Read More »

ರಾಷ್ಟ್ರೀಯ ನ್ಯೂಸ್

ಮಿಸ್ಡ್ ಕಾಲ್‌ನಿಂದ ಸಿಕ್ಕಿಬಿದ್ದ 11 ವರ್ಷದ ಬಾಲಕಿಯ ಕೊಲೆಗಾರ !!      

(ನ್ಯೂಸ್ ಕಡಬ)newskadaba.com   ಹೊಸದಿಲ್ಲಿ, ಫೆ.24. ರಾಜಧಾನಿ ದಿಲ್ಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದ್ದ 11 ವರ್ಷದ ಬಾಲಕಿಯ ಆಘಾತಕಾರಿ ಕೊಲೆ ಪ್ರಕರಣ, ಮಿಸ್ಡ್ ಕಾಲ್‌ ಒಂದರಿಂದ ಬಗೆಹರಿದಿದೆ. ಬಾಲಕಿ ನಾಪತ್ತೆಯಾದ ದಿನವೇ ಆಕೆಯ ತಾಯಿಯ ಮೊಬೈಲ್ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು. ಅಪಹರಣಗೊಂಡು ಹತ್ಯೆಯಾದ ಬಾಲಕಿಯು, ಆ ದಿನ ಬೆಳಿಗ್ಗೆ ಶಾಲೆಗೆಂದು ಹೊರಟವಳು ನಾಪತ್ತೆಯಾಗಿದ್ದಳು. ಅದೇ ದಿನ ಬೆಳಿಗ್ಗೆ 11.50ರ ಸುಮಾರಿಗೆ ಆಕೆಯ ತಾಯಿಗೆ ಮಿಸ್ಡ್ ಕಾಲ್ ಬಂದಿತ್ತು. ಅದಕ್ಕೆ ಅವರು ಮರಳಿ ಕರೆ ಮಾಡಿದಾಗ,

ಮಿಸ್ಡ್ ಕಾಲ್‌ನಿಂದ ಸಿಕ್ಕಿಬಿದ್ದ 11 ವರ್ಷದ ಬಾಲಕಿಯ ಕೊಲೆಗಾರ !!       Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಪೇದೆ ಮೃತ್ಯು!!     

(ನ್ಯೂಸ್ ಕಡಬ)newskadaba.com  ಹೈದರಾಬಾದ್, ಫೆ.24. ಬೋಯಿನಪಲ್ಲಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ವಿಶಾಲ್ ಜಿಮ್ ನಲ್ಲಿ ವ್ಯಾಯಾಮ‌ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವಿಶಾಲ್ ಜಿಮ್‌ ನಲ್ಲಿ ಬಹಳ ಹೊತ್ತು ಪುಷ್-ಅಪ್ಸ್ ಮಾಡಿದ್ದಾರೆ.ಇದರಿಂದಾಗಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.  

ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಪೇದೆ ಮೃತ್ಯು!!      Read More »

ರಾಷ್ಟ್ರೀಯ ನ್ಯೂಸ್

ಮತ್ತೊಂದು ಉನ್ನತ ಹುದ್ದೆಯಲ್ಲಿ ಭಾರತೀಯ !!     ➤  ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ

(ನ್ಯೂಸ್ ಕಡಬ)newskadaba.com  ಅಮೆರಿಕಾ, ಫೆ.24. ಸೂಪರ್ ಪವರ್ ರಾಷ್ಟ್ರ ಅಮೆರಿಕದಲ್ಲಿ ಭಾರತೀಯ ಮೂಲದವರಿಗೆ ಪ್ರಮುಖ ಸ್ಥಾನಗಳು ಸಿಗುತ್ತಿವೆ. ಭಾರತೀಯರ ಶಕ್ತಿ ಸಾಮರ್ಥ್ಯಕ್ಕೆ ಅಮೆರಿಕ ಸರ್ಕಾರ ಸೂಕ್ತ ಮನ್ನಣೆ ನೀಡುತ್ತಿದೆ. ಭಾರತೀಯ ಮೂಲದ ಅನೇಕ ಜನರು ಈಗಾಗಲೇ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಅಜಯ್ ಬಂಗಾ ಅವರನ್ನು ಅಮೆರಿಕ ಇದೀಗ ವಿಶ್ವ ಬ್ಯಾಂಕ್ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿದೆ. ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾ ಅವರ ಹೆಸರನ್ನು ಸೂಚಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಘೋಷಿಸಿದ್ದಾರೆ.  

ಮತ್ತೊಂದು ಉನ್ನತ ಹುದ್ದೆಯಲ್ಲಿ ಭಾರತೀಯ !!     ➤  ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ Read More »

ರಾಷ್ಟ್ರೀಯ ನ್ಯೂಸ್

ಊಟ ಮಾಡುತ್ತಿರುವಾಗಲೇ ಕುಸಿದುಬಿದ್ದು ನಿಧನರಾದ ಐಎಎಸ್​ ಅಧಿಕಾರಿ !

(ನ್ಯೂಸ್ ಕಡಬ)newskadaba.com  ಮಹಾರಾಷ್ಟ್ರ, ಫೆ.24. ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ 57 ವರ್ಷದ ಐಎಎಸ್ ಅಧಿಕಾರಿ ದಕ್ಷಿಣ ಮುಂಬೈನ ಹೋಟೆಲ್‌ನಲ್ಲಿ ಊಟ ಮಾಡುವಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ಬುಧವಾರ ರಾತ್ರಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಪ್ರಶಾಂತ್ ದತ್ತಾತ್ರೇಯ ನವಘರೆ ಕಾಲಾ ಘೋಡಾ ನೆರೆಹೊರೆಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.  

ಊಟ ಮಾಡುತ್ತಿರುವಾಗಲೇ ಕುಸಿದುಬಿದ್ದು ನಿಧನರಾದ ಐಎಎಸ್​ ಅಧಿಕಾರಿ ! Read More »

ರಾಷ್ಟ್ರೀಯ ನ್ಯೂಸ್

3 ನಿಮಿಷದಲ್ಲಿ 184 ಸೆಲ್ಫಿ    ➤  ನಟ ಅಕ್ಷಯ್‌ ಕುಮಾರ್‌ ವಿಶ್ವ ದಾಖಲೆ..!

(ನ್ಯೂಸ್ ಕಡಬ)newskadaba.com  ಮುಂಬೈ, ಫೆ.24. ಮೂರು ನಿಮಿಷದಲ್ಲಿ 184 ಸೆಲ್ಫಿ ತೆಗೆದು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಅವರು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಕ್ಷಯ್‌ ಕುಮಾರ್‌ ಅವರ ಮುಂದಿನ ಹಾಸ್ಯ ಸಿನೆಮಾ ‘ಸೆಲ್ಫಿ’ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಅವರು ಅಭಿಮಾನಿಗಳೊಂದಿಗೆ ಸತತವಾಗಿ ಸೆಲ್ಫಿ ಪಡೆದುಕೊಂಡಿದ್ದು, ಈ ವೇಳೆ ಮೂರೇ ನಿಮಿಷದಲ್ಲಿ 184 ಸೆಲ್ಫಿಗಳಿಗೆ ಪೋಸ್‌ ನೀಡಿದ್ದು, ಮಾತ್ರವಲ್ಲ ಅದರ ವೀಡಿಯೋ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  

3 ನಿಮಿಷದಲ್ಲಿ 184 ಸೆಲ್ಫಿ    ➤  ನಟ ಅಕ್ಷಯ್‌ ಕುಮಾರ್‌ ವಿಶ್ವ ದಾಖಲೆ..! Read More »

ರಾಷ್ಟ್ರೀಯ ನ್ಯೂಸ್
Scroll to Top