ಕರಾವಳಿ

ಇಂದಿನಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

(ನ್ಯೂಸ್‌ ಕಡಬ) newskadaba.com, ಜೂ.30: ಭಾರತದ ಚುನಾವಣಾ ಆಯೋಗವು ರಾಜ್ಯಾದ್ಯಂತ ಇಂದಿನಿಂದ ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಗಾಗಲೇ ಶೇ. 91.61 ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದ್ದು, ಉಳಿದ ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಒಟ್ಟು 5.55 ಕೋಟಿ ಮತದಾರರ ಪೈಕಿ ಅಸಲಿ ಮತ್ತು ನಕಲಿ ಮತದಾರರನ್ನು ಗುರುತಿಸಿ, ಅನರ್ಹ ಹಾಗೂ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.ಮತದಾರರ ಪಟ್ಟಿಯಲ್ಲಿ ಹೆಸರು […]

ಇಂದಿನಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಆಸ್ಪತ್ರೆ ವೈದ್ಯರ ಕೆಲಸಕ್ಕೆ ಅಡ್ಡಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ದೂರು

(ನ್ಯೂಸ್‌ ಕಡಬ) newskadaba.com, ಜೂ.29:  ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ತೆರಳುತ್ತಿದ್ದ ಕರ್ತವ್ಯ ನಿರತ ವೈದ್ಯರ ಕೆಲಸಕ್ಕೆ ಅಡ್ಡಿಪಡಿಸಿ, ಸುಳ್ಳು ಆರೋಪ ಹೊರಿಸಿದವರ ವಿರುದ್ಧ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಡಿಸೆಂಬರ್ 10 ರಂದು ಪುಂಜಾಲಕಟ್ಟೆಯಿಂದ ಕರೆತಂದ 29 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗೆ ಪುಂಜಾಲಕಟ್ಟೆ ಪೊಲೀಸರು ಮಧ್ಯಾಹ್ನದ ಬಳಿಕ ಬಂದು ಪ್ರಕ್ರಿಯೆಗಳನ್ನು ಮುಗಿಸಿದ್ದರು. ಸಂಜೆ ವೇಳೆ ಕರ್ತವ್ಯದಲ್ಲಿದ್ದ ಡಾ. ಶ್ವೇತಾ ಅವರು ಮರಣೋತ್ತರ ಪರೀಕ್ಷೆಗೆ ತೆರಳುವಾಗ, ಮೃತರ ಕಡೆಯವರು “ವೈದ್ಯರು

ಪುತ್ತೂರು ಆಸ್ಪತ್ರೆ ವೈದ್ಯರ ಕೆಲಸಕ್ಕೆ ಅಡ್ಡಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ದೂರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಬಿ.ಸಿ. ರೋಡ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ಕಾರು ಚಾಲಕಿ ನಡುವೆ ವಾಗ್ವಾದ; ಪರಸ್ಪರ ದೂರು ದಾಖಲು

(ನ್ಯೂಸ್‌ ಕಡಬ) newskadaba.com, ಬಂಟ್ವಾಳ:  ಬೈಪಾಸ್ ರಸ್ತೆ ಹಾಗೂ ಬಿ.ಸಿ. ರೋಡ್ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ಕಾರು ಚಾಲಕಿ ನಡುವೆ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿದೂರು ದಾಖಲಾಗಿದೆ. ಕಡೂರಿನಿಂದ ಉಜಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಮಹಿಳೆಯೊಬ್ಬರು ತಮ್ಮ ಕಾರನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.ಬಸ್ ತನ್ನ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿ, ಮಹಿಳೆಯು ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬಸ್ ಚಾಲಕ

ಬಂಟ್ವಾಳ: ಬಿ.ಸಿ. ರೋಡ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ಕಾರು ಚಾಲಕಿ ನಡುವೆ ವಾಗ್ವಾದ; ಪರಸ್ಪರ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುಂಡ್ಯ: ಕಾರು ಮತ್ತು ಟ್ಯಾಂಕರ್ ನಡುವೆ ಢಿಕ್ಕಿ- ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ಜೂ. 29. ಕಾರು ಹಾಗೂ ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸಕಲೇಶಪುರ ನಿವಾಸಿಗಳಾದ ಸಂಜಯ್ (34), ಲಲಿತಾ (45), ಮೋನಪ್ಪ (56), ಪ್ರೇಮಾ (34) ಹಾಗೂ ಸುರೇಶ್ (39) ಎಂದು ಗುರುತಿಸಲಾಗಿದೆ. ನೆಲ್ಯಾಡಿಯಿಂದ ಸಕಲೇಶಪುರದತ್ತ ತೆರಳುತ್ತಿದ್ದ ಕಾರು, ಗುಂಡ್ಯ ಸಮೀಪದ ಬರ್ಚಿನಹಳ್ಳ ತಲುಪುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ

ಗುಂಡ್ಯ: ಕಾರು ಮತ್ತು ಟ್ಯಾಂಕರ್ ನಡುವೆ ಢಿಕ್ಕಿ- ಐವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಚಿನ್ನದ ದರದಲ್ಲಿ ಭಾರಿ ಕುಸಿತ; ಗ್ರಾಹಕರಿಗೆ ನಿರಾಳ, ಇಂದಿನ ಬಂಗಾರ, ಬೆಳ್ಳಿ ಬೆಲೆ ಹೀಗಿದೆ…

(ನ್ಯೂಸ್‌ ಕಡಬ) newskadaba.com, : 24 ಕ್ಯಾರೆಟ್ ಶುದ್ಧ ಚಿನ್ನ: 1 ಗ್ರಾಂ: ₹93 ಇಳಿಕೆಯಾಗಿ, ಪ್ರಸ್ತುತ ದರ ₹14,302 ಆಗಿದೆ.10 ಗ್ರಾಂ: ₹930 ಕುಸಿತ ಕಂಡು, ಪ್ರಸ್ತುತ ದರ ₹1,43,020 ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ: 1 ಗ್ರಾಂ: ₹85 ಇಳಿಕೆಯಾಗಿ, ಪ್ರಸ್ತುತ ದರ ₹13,110 ದಾಖಲಾಗಿದೆ. 10 ಗ್ರಾಂ: ₹850 ಕುಸಿತದೊಂದಿಗೆ, ಪ್ರಸ್ತುತ ದರ ₹1,31,100 ಆಗಿದೆ. ಬೆಳ್ಳಿ ದರ (ಸ್ಥಿರ): ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೆ ತಟಸ್ಥವಾಗಿದ್ದು, ಪ್ರತಿ

ಚಿನ್ನದ ದರದಲ್ಲಿ ಭಾರಿ ಕುಸಿತ; ಗ್ರಾಹಕರಿಗೆ ನಿರಾಳ, ಇಂದಿನ ಬಂಗಾರ, ಬೆಳ್ಳಿ ಬೆಲೆ ಹೀಗಿದೆ… Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಗದ ಉಚಿತ ಪಠ್ಯಪುಸ್ತಕ: ಸರ್ಕಾರದ ನಿರ್ಲಕ್ಷ್ಯಕ್ಕೆ ಹೆಚ್ಚಿದ ಆಕ್ರೋಶ

(ನ್ಯೂಸ್‌ ಕಡಬ) newskadaba.com, : ರಾಜ್ಯ ಸರ್ಕಾರ ಮೇ ಅಂತ್ಯದೊಳಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುವುದಾಗಿ ಘೋಷಿಸಿದ್ದರೂ, ಕರ್ನಾಟಕದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ಇನ್ನೂ ಪುಸ್ತಕಗಳು ಲಭ್ಯವಾಗಿಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ವಾರಗಳು ಕಳೆದರೂ ಪುಸ್ತಕ ಸಿಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಸದ್ಯ 1 ರಿಂದ 10ನೇ ತರಗತಿಯವರೆಗೆ ಮಾತ್ರ ಉಚಿತ ಪುಸ್ತಕ ವಿತರಿಸಿದ್ದು, ಪಿಯುಸಿ ವಿಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶ್ರೀಮಂತ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಗದ ಉಚಿತ ಪಠ್ಯಪುಸ್ತಕ: ಸರ್ಕಾರದ ನಿರ್ಲಕ್ಷ್ಯಕ್ಕೆ ಹೆಚ್ಚಿದ ಆಕ್ರೋಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗಗನ್ ತಂತ್ರಜ್ಞಾನ ಬಳಸಿ ಇಂಡಿಗೊ ವಿಮಾನ ಯಶಸ್ವಿ ಲ್ಯಾಂಡಿಂಗ್ ಭಾರತೀಯ ನಾಗರಿಕ ವಿಮಾನಯಾನ ರಂಗದಲ್ಲಿ ಹೊಸ ಇತಿಹಾಸ!

(ನ್ಯೂಸ್‌ ಕಡಬ) newskadaba.com, : ಭಾರತೀಯ ನಾಗರಿಕ ವಿಮಾನಯಾನ ರಂಗದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ನೆಲದ ಮೇಲಿನ ಸಾಂಪ್ರದಾಯಿಕ ರೇಡಿಯೋ ಕಿರಣಗಳ ಸಹಾಯವಿಲ್ಲದೆ, ಸಂಪೂರ್ಣವಾಗಿ ಸ್ವದೇಶಿ ಉಪಗ್ರಹ ಆಧಾರಿತ ‘ಗಗನ್’ತಂತ್ರಜ್ಞಾನವನ್ನು ಬಳಸಿ ಇಂಡಿಗೊ ಸಂಸ್ಥೆಯ ಬೃಹತ್ ಏರ್‌ಬಸ್ ಎ320 ವಿಮಾನವು ಉದಯಪುರದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ಸಾಧನೆ ಮಾಡಿದ ದೇಶದ ಮೊದಲ ವಾಣಿಜ್ಯ ಪ್ಯಾಸೆಂಜರ್ ಜೆಟ್ ವಿಮಾನ ಇದಾಗಿದೆ. ಇದನ್ನು ಇಸ್ರೋ (ISRO) ಮತ್ತು ಎಎಐ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಸ್ವತಂತ್ರ ನ್ಯಾವಿಗೇಷನ್ ವ್ಯವಸ್ಥೆಯಲ್ಲ. ಬದಲಿಗೆ, ಜಿಪಿಎಸ್ ಸಿಗ್ನಲ್‌ಗಳ

ಗಗನ್ ತಂತ್ರಜ್ಞಾನ ಬಳಸಿ ಇಂಡಿಗೊ ವಿಮಾನ ಯಶಸ್ವಿ ಲ್ಯಾಂಡಿಂಗ್ ಭಾರತೀಯ ನಾಗರಿಕ ವಿಮಾನಯಾನ ರಂಗದಲ್ಲಿ ಹೊಸ ಇತಿಹಾಸ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೋಗಗಳ ಜೊತೆಗೆ ಬದುಕಲು ಕಲಿಯೋಣ- ಡಾ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 29. ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ (ರಿ) ಶೇಣಿನಾಟಿಕೇರಿ ಸೇವಾ ಟ್ರಸ್ಟ್ (ರಿ) ಶೇಣಿ ಇದರ ಆಶ್ರಯದಲ್ಲಿ ಕೆ ವಿ ಜಿ ಮೆಡಿಕಲ್ ಕಾಲೇಜು ಸುಳ್ಯ,ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಶ್ರೀ ರಾಮ ದೇವಾಲಯ ಚೊಕ್ಕಾಡಿ ಇವರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಶ್ರೀ ರಾಮ ದೇವಾಲಯದ ದೇಸೀ ಭವನದಲ್ಲಿ ಭಾನುವಾರದಂದು ನಡೆಯಿತು. ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು  ಸಾರ್ವಜನಿಕ

ರೋಗಗಳ ಜೊತೆಗೆ ಬದುಕಲು ಕಲಿಯೋಣ- ಡಾ ಚೂಂತಾರು Read More »

ಕರಾವಳಿ

ಉಚಿತ ಬಸ್ ಪಾಸ್ ಬೆನ್ನಲ್ಲೇ ಹಣ ಮರುಪಾವತಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ: ಸೇವಾಸಿಂಧು ಮೂಲಕ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com, : ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಬೆನ್ನಲ್ಲೇ, ಈಗಾಗಲೇ ಪಾವತಿಸಲಾಗಿರುವ ಬಸ್ ಪಾಸ್ ಶುಲ್ಕವನ್ನು ಮರುಪಾವತಿ ಮಾಡಲು ಅಧಿಕೃತ ಆದೇಶ ಹೊರಡಿಸಿದೆ. ಯೋಜನೆ: ಬಸ್ ಪಾಸ್ ಶುಲ್ಕ ಮರುಪಾವತಿ ,ಅರ್ಜಿ ಸಲ್ಲಿಕೆ ಆರಂಭ: ಜೂನ್ 29 ರಿಂದ. KSRTC, BMTC, NWKRTC ಮತ್ತು KKRTC ಜಂಟಿಯಾಗಿ ಹಣ ಮರುಪಾವತಿ ಮಾಡುತ್ತವೆ.ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.: ಸೇವಾಸಿಂಧು ಪೋರ್ಟಲ್‌ನಲ್ಲಿ ಒಟಿಪಿ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.

ಉಚಿತ ಬಸ್ ಪಾಸ್ ಬೆನ್ನಲ್ಲೇ ಹಣ ಮರುಪಾವತಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ: ಸೇವಾಸಿಂಧು ಮೂಲಕ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐಫೋನ್ ಪ್ರಿಯರಿಗೆ ಸುವರ್ಣಾವಕಾಶ: ಅತ್ಯಾಧುನಿಕ iPhone 17 Pro Max ಮೇಲೆ ಬಿಗ್ ಡಿಸ್ಕೌಂಟ್

(ನ್ಯೂಸ್‌ ಕಡಬ) newskadaba.com, : ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಸ್ಟೋರ್‌ನಲ್ಲಿ iPhone 17 Pro Max (256 GB) ಫೋನ್‌ ಮೇಲೆ ಭರ್ಜರಿ ರಿಯಾಯಿತಿ ಘೋಷಣೆಯಾಗಿದೆ. ಈ ಆಫರ್‌ನ ಪ್ರಮುಖ ವಿವರಗಳು ಇಲ್ಲಿವೆ: ಅಧಿಕೃತ ಲಾಂಚ್ ಬೆಲೆ ₹1,49,900 ಇದ್ದು, ಪ್ರಸ್ತುತ ₹1,42,490 ಕ್ಕೆ ಲಿಸ್ಟ್ ಮಾಡಲಾಗಿದೆ (₹7,410 ನೇರ ಉಳಿತಾಯ).SBI, ICICI ಅಥವಾ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ನಾನ್-ಇಎಂಐ (Non-EMI) ವಹಿವಾಟು ನಡೆಸಿದರೆ ₹3,000 ಹೆಚ್ಚುವರಿ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಎಲ್ಲಾ ಆಫರ್‌ಗಳ

ಐಫೋನ್ ಪ್ರಿಯರಿಗೆ ಸುವರ್ಣಾವಕಾಶ: ಅತ್ಯಾಧುನಿಕ iPhone 17 Pro Max ಮೇಲೆ ಬಿಗ್ ಡಿಸ್ಕೌಂಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top