ಕರಾವಳಿ

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್!

(ನ್ಯೂಸ್‌ ಕಡಬ) newskadaba.com,  ಜು.09  : ರಾಜ್ಯದ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಹಾಗೂ ಮರ ಉರುಳುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್‌ಗೆ ಜುಲೈ 10ರಿಂದ 12ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ತಲಕಾವೇರಿ ಹಾಗೂ ಭಾಗಮಂಡಲ […]

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ

(ನ್ಯೂಸ್‌ ಕಡಬ) newskadaba.com,  ಜು.09  ಕೇಂದ್ರ ಲೋಕಸೇವಾ ಆಯೋಗವು (UPSC) ವೈದ್ಯಾಧಿಕಾರಿ, ಡ್ರಗ್ ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡ್ರಗ್ ಇನ್‌ಸ್ಪೆಕ್ಟರ್ (186), ಅಸಿಸ್ಟೆಂಟ್ ಪ್ರೊಫೆಸರ್ (104), ಕಂಪನಿ ಪ್ರಾಸಿಕ್ಯೂಟರ್ (18), ಲೀಗಲ್ ಆಫೀಸರ್ (12), ವೈದ್ಯಾಧಿಕಾರಿ (3) ಹಾಗೂ ಇತರೆ ಆಡಳಿತಾತ್ಮಕ/ತಾಂತ್ರಿಕ ಹುದ್ದೆಗಳು. ಹುದ್ದೆಗಳಿಗೆ ಅನುಗುಣವಾಗಿ MBBS, B.Pharm, BE/B.Tech, LLB, ಅಥವಾ ಯಾವುದೇ ಮಾನ್ಯತೆ ಪಡೆದ

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ

(ನ್ಯೂಸ್‌ ಕಡಬ) newskadaba.com,  ಜು.09  ಪುತ್ತೂರು: ಪುತ್ತೂರು ಭೂ ನ್ಯಾಯಮಂಡಳಿ ಸದಸ್ಯ ಹಾಗೂ ಪ್ರಸಿದ್ಧ ಕಂಬಳ ವ್ಯಾಖ್ಯಾನಕಾರರಾದ ನಿರಂಜನ್ ರೈ ಮಠಂದಬೆಟ್ಟು (ಜುಲೈ 8) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರ (AC) ಕಚೇರಿಯಲ್ಲಿ ಎಸಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಭೂ ನ್ಯಾಯಮಂಡಳಿ ಸಭೆ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಭೆಯ ನಡುವೆ ನಿರಂಜನ್ ರೈ ಅವರು ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಇತರೆ

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ಎಲ್ಲಾ ಎಪಿಎಲ್ ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆ ವಿಸ್ತರಣೆ: ಸಚಿವ ಯು.ಟಿ.ಖಾದರ್

(ನ್ಯೂಸ್‌ ಕಡಬ) newskadaba.com,  ಜು.09  ಸುಳ್ಯ: ರಾಜ್ಯದ ಎಲ್ಲಾ ಎಪಿಎಲ್ (APL) ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಕಟಿಸಿದ್ದಾರೆ. “ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರವಿರುವಾಗ ಜಾತಿ, ಧರ್ಮ ಹಾಗೂ ಪಕ್ಷ ರಹಿತವಾಗಿ ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ನಿಜವಾದ ಸೇವೆ” ಎಂದು ಅವರು ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಸುಳ್ಯ ತಾಲೂಕು

ರಾಜ್ಯದ ಎಲ್ಲಾ ಎಪಿಎಲ್ ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆ ವಿಸ್ತರಣೆ: ಸಚಿವ ಯು.ಟಿ.ಖಾದರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ

(ನ್ಯೂಸ್‌ ಕಡಬ) newskadaba.com,  ಜು.09:  ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ರೆಡಿಯಂಟ್ ಸ್ಟಾರ್ ಹೋಟೆಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯೋಧರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕೊಯಿಲಾ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಜುಲೈ 3ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಜುಲೈ 8ರಂದು ಮಧ್ಯಾಹ್ನ ಕೊಯಿಲಾದಿಂದ ತಮ್ಮ ಬೈಕ್ (KA-21-K-7558) ನಲ್ಲಿ ಹೊರಟಿದ್ದಾಗ ಸಂಜೆ 3:40ರ

ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಯನಾಡು ಭೂಕುಸಿತ: ಮೂವರ ಮೃತ್ಯು ಇಂಜಿನಿಯರ್ ಸೇರಿ ಐವರು ನಾಪತ್ತೆ – ಬಿರುಸಿನ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com, ಜು.09: ಕೇರಳದ ಮೆಪ್ಪಾಡಿಯ ಕಲ್ಲಾಡಿ ಬಳಿ ಸುರಂಗ ರಸ್ತೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ಕೇರಳದ ಜಿಲ್ಲಾಧಿಕಾರಿ (ಡಿಸಿ) ಮೇಘಶ್ರೀ ತಿಳಿಸಿದ್ದಾರೆ. ಮಧ್ಯಪ್ರದೇಶದ ಜೆಸಿಬಿ ಆಪರೇಟರ್ ಚಂದ್ರಬಾನ್, ಬಿಹಾರದ ಬಿಕಾಶ್ ಕುಮಾರ್ ಮತ್ತು ಜಾರ್ಖಂಡ್‌ನ ಕಾರ್ಮಿಕ ಅನ್ಮೋಲ್ ಎಂದು ಗುರುತಿಸಲಾಗಿದೆ.ವಿವಿಧ ರಾಜ್ಯಗಳ ಮೂಲದ ಇಂಜಿನಿಯರ್ ಹಾಗೂ ಸರ್ವೇಯರ್ ಸೇರಿದಂತೆ ಒಟ್ಟು ಐವರು ನಾಪತ್ತೆಯಾಗಿದ್ದಾರೆ.ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನ 200ಕ್ಕೂ ಹೆಚ್ಚು ಸಿಬ್ಬಂದಿ ಬಿರುಸಿನ ಶೋಧ

ವಯನಾಡು ಭೂಕುಸಿತ: ಮೂವರ ಮೃತ್ಯು ಇಂಜಿನಿಯರ್ ಸೇರಿ ಐವರು ನಾಪತ್ತೆ – ಬಿರುಸಿನ ಶೋಧ ಕಾರ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಆಲೆಟ್ಟಿ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ; ವ್ಯಾಪಕ ಕೃಷಿ ನಾಶ, ರೈತರಲ್ಲಿ ಆತಂಕ!

(ನ್ಯೂಸ್‌ ಕಡಬ) newskadaba.com,  ಜು.09:   ಸುಳ್ಯತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿ 275ನ್ನು ದಾಟಿ ಬಂದು ವ್ಯಾಪಕ ಕೃಷಿ ನಾಶ ಮಾಡಿರುವ ಘಟನೆ ನಡೆದಿದೆ.ರಾತ್ರಿ ಸುಮಾರು 10:45ರ ವೇಳೆಗೆ ಏಳು ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಅದರಲ್ಲಿ ಐದು ಆನೆಗಳು ಸ್ಥಳೀಯರಾದ ಎಸ್.ಎನ್. ಮಾಸ್ಟರ್ ಅವರ ತೋಟಕ್ಕೆ ನುಗ್ಗಿ ಬೆಳೆಯನ್ನು ಸಂಪೂರ್ಣ ನಾಶಪಡಿಸಿವೆ. ಮುಂಜಾನೆ 4 ಗಂಟೆಯ ಸುಮಾರಿಗೆ ಬಂದ ದಾರಿಯಲ್ಲೇ ವಾಪಸ್ ತೆರಳಿದ ಆನೆಗಳು, ಸರ್ಕಾರಿ ಸಾಗುವಾನಿ ನೆಡುತೋಪನ್ನು ಪ್ರವೇಶಿಸಿವೆ. ಬೆಳಿಗ್ಗೆ 7

ಸುಳ್ಯ: ಆಲೆಟ್ಟಿ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ; ವ್ಯಾಪಕ ಕೃಷಿ ನಾಶ, ರೈತರಲ್ಲಿ ಆತಂಕ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಸ್ಕಾಂ ಗ್ರಾಹಕರಿಗೆ ಜುಲೈನಲ್ಲಿ ಸರಾಸರಿ ಬಿಲ್: ಗೃಹ ಜ್ಯೋತಿ ಮನೆ ಪರಿಶೀಲನೆಗೆ ಮೀಟರ್ ರೀಡರ್‌ಗಳ ನಿಯೋಜನೆ

(ನ್ಯೂಸ್‌ ಕಡಬ) newskadaba.com,  ಜು.08 ಬೆಸ್ಕಾಂ ವ್ಯಾಪ್ತಿಯ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕಾಗಿ ಮೀಟರ್ ರೀಡರ್‌ಗಳನ್ನು ನಿಯೋಜಿಸಲಾಗಿದೆ. ಹೀಗಾಗಿ, ಜುಲೈ ತಿಂಗಳಿನಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಮತ್ತು ಗ್ರಾಹಕರಿಗೆ ಸರಾಸರಿ ಬಿಲ್ (Average Bill) ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಿಸಿದೆ. ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಲಾಗುತ್ತದೆ.ಜುಲೈ ತಿಂಗಳ ಸರಾಸರಿ ಬಿಲ್‌ಗಳನ್ನು ಗ್ರಾಹಕರಿಗೆ ಎಸ್‌ಎಂಎಸ್ (SMS) ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು.ಸರಾಸರಿ ಬಿಲ್ಲಿಂಗ್

ಬೆಸ್ಕಾಂ ಗ್ರಾಹಕರಿಗೆ ಜುಲೈನಲ್ಲಿ ಸರಾಸರಿ ಬಿಲ್: ಗೃಹ ಜ್ಯೋತಿ ಮನೆ ಪರಿಶೀಲನೆಗೆ ಮೀಟರ್ ರೀಡರ್‌ಗಳ ನಿಯೋಜನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ‘ಕನಿ ಮರನಂಡು’ ಏಡಿ ಪ್ರಭೇದ

(ನ್ಯೂಸ್‌ ಕಡಬ) newskadaba.com,  ಜು.08 ವಿಟ್ಲ: ಕರ್ನಾಟಕದ ಪಶ್ಚಿಮ ಘಟ್ಟಗಳ ಜೀವವೈವಿಧ್ಯಕ್ಕೆ ಮತ್ತೊಂದು ಅಪರೂಪದ ಸೇರ್ಪಡೆಯಾಗಿದೆ. ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಪ್ರಭೇದವಾದ ‘ಕನಿ ಮರನಂಡು’ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದೆ. ಇದುವರೆಗೆ ಕೇರಳದ ಆಗಸ್ತ್ಯಮಲೆ ಜೈವಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರಭೇದ, ಇದೀಗ ಕರ್ನಾಟಕದಲ್ಲೂ ಇರುವುದು ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ಅವರ ಅಧ್ಯಯನದಿಂದ ದೃಢಪಟ್ಟಿದೆ. ‘ಗೆಕಾರ್ಸಿನುಸಿಡೆ’ ಕುಟುಂಬಕ್ಕೆ ಸೇರಿದ ಈ ಏಡಿ, ಸಂಪೂರ್ಣವಾಗಿ ಮರಗಳಲ್ಲೇ

ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ‘ಕನಿ ಮರನಂಡು’ ಏಡಿ ಪ್ರಭೇದ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಆರೋಪಿ ವಿಟ್ಲ ಪೊಲೀಸರ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಜು.08  ವಿಟ್ಲ: ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಜುಲೈ 6ರಂದು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಳ್ತಂಗಡಿ ನಿವಾಸಿ ರಾಜೇಶ್ (41) ಬಂಧಿತ ಆರೋಪಿ. ಈತನು ವಿಟ್ಲ ಪೊಲೀಸ್ ಠಾಣೆಯ 2018ರ ಕಳ್ಳತನ ಪ್ರಕರಣದ (IPC ಸೆಕ್ಷನ್ 379) ಆರೋಪಿಯಾಗಿದ್ದನು. ವಿಟ್ಲ ಠಾಣೆಯ ಎಎಸ್ಐ ಜಯರಾಮ, ಸಿಪಿಸಿಗಳಾದ ವೆಂಕಪ್ಪ ಹಾಗೂ ಶಿವಾನಂದ ಅವರನ್ನೊಳಗೊಂಡ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು

ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಆರೋಪಿ ವಿಟ್ಲ ಪೊಲೀಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top