ಕರಾವಳಿ

ಸ್ಕೂಟರ್ ಸ್ಟಂಟ್ ಮಾಡಿ ವೈರಲ್ ಆದ ಸವಾರನಿಗೆ ₹7,000 ದಂಡ; ಲೈಸೆನ್ಸ್ ರದ್ದತಿಗೆ ಪೊಲೀಸರ ಶಿಫಾರಸು!

(ನ್ಯೂಸ್ ಕಡಬ) newskadaba.com ಜು. 16: ಸ್ಕೂಟರ್ ಸ್ಟಂಟ್: ಸವಾರನಿಗೆ ₹7,000 ದಂಡ, ಲೈಸೆನ್ಸ್ ರದ್ದತಿಗೆ ಶಿಫಾರಸು ಕಳೆದ ಮಾರ್ಚ್ ತಿಂಗಳಿನಲ್ಲಿ ವಿದ್ಯಾರ್ಥಿಯೊಬ್ಬ ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೈರಲ್ ವೀಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ನಗರ ಸಂಚಾರ ಪೊಲೀಸರು, ಆರೋಪಿ ಸವಾರನಿಗೆ ₹7,000 ದಂಡ ವಿಧಿಸಿದ್ದಾರೆ.ದಂಡದ ಜೊತೆಗೆ, ಆತನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಾರಿಗೆ ಪ್ರಾಧಿಕಾರಕ್ಕೆ (RTO) ಪೊಲೀಸರು ಶಿಫಾರಸು ಮಾಡಿದ್ದಾರೆ.

ಸ್ಕೂಟರ್ ಸ್ಟಂಟ್ ಮಾಡಿ ವೈರಲ್ ಆದ ಸವಾರನಿಗೆ ₹7,000 ದಂಡ; ಲೈಸೆನ್ಸ್ ರದ್ದತಿಗೆ ಪೊಲೀಸರ ಶಿಫಾರಸು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

KGCE ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು: KSEB ತಾತ್ಕಾಲಿಕ ನೌಕರನ ಬಂಧನ, ಅಧ್ಯಾಪಕ ತಲೆಮರೆಸು!

(ನ್ಯೂಸ್ ಕಡಬ) newskadaba.com ಜು. 16: ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಸರ್ಕಾರಿ ಸರ್ಟಿಫಿಕೇಟ್ ಎಕ್ಸಾಮಿನೇಶನ್ (KGCE) ಪರೀಕ್ಷೆಯಲ್ಲಿ ಮೊಬೈಲ್ ಫೋನ್ ಬಳಸಿ ಅಕ್ರಮವಾಗಿ ಉತ್ತರ ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೈವಳಿಕೆ ಕುರುಡಪದವು ಬಳಿಯ ಸಾದಂಗಯ ನಿವಾಸಿ, KSEB ವರ್ಕಾಡಿ ಸೆಕ್ಷನ್‌ನ ತಾತ್ಕಾಲಿಕ ನೌಕರ ಎಸ್. ಜನಾರ್ದನ ಎಂದು ಗುರುತಿಸಲಾಗಿದೆ. ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದ ಪೊಲೀಸ್ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಪರೀಕ್ಷಾ ಹಾಲ್‌ನಲ್ಲಿದ್ದ ಜನಾರ್ದನನಿಗೆ ಅಧ್ಯಾಪಕರೊಬ್ಬರು

KGCE ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು: KSEB ತಾತ್ಕಾಲಿಕ ನೌಕರನ ಬಂಧನ, ಅಧ್ಯಾಪಕ ತಲೆಮರೆಸು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಬ್ರೇಕ್: ಇನ್ಮುಂದೆ ದೆಹಲಿಯಲ್ಲೇ ಅಂತಿಮ ನಿರ್ಧಾರ!

(ನ್ಯೂಸ್ ಕಡಬ) newskadaba.com ಜು. 16: ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಅನುಭವಿ ವಿಜ್ಞಾನಿಗಳು ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿರುವುದನ್ನು ತಡೆಯಲು ಕೇಂದ್ರ ಬಾಹ್ಯಾಕಾಶ ಇಲಾಖೆ ಕಠಿಣ ಆಂತರಿಕ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಜುಲೈ 14ರ ಹೊಸ ನಿಯಮದ ಪ್ರಕಾರ, ಇಸ್ರೋದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಇನ್ನು ಮುಂದೆ ಸ್ಥಳೀಯ ಮಟ್ಟದಲ್ಲಿ ಅಂಗೀಕರಿಸುವಂತಿಲ್ಲ. ಇದುವರೆಗೆ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರಿಗಿದ್ದ ಈ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಇನ್ಮುಂದೆ ದೆಹಲಿಯಲ್ಲಿರುವ ಬಾಹ್ಯಾಕಾಶ

ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಬ್ರೇಕ್: ಇನ್ಮುಂದೆ ದೆಹಲಿಯಲ್ಲೇ ಅಂತಿಮ ನಿರ್ಧಾರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕೊನೆಗೂ ಕದ್ರಿ ವೃತ್ತದಿಂದ ಹುತಾತ್ಮರ ಸ್ಮಾರಕಕ್ಕೆ ಶಿಫ್ಟ್ ಆಯ್ತು ಟಿ-55 ಯುದ್ಧ ಟ್ಯಾಂಕ್!

(ನ್ಯೂಸ್ ಕಡಬ) newskadaba.com ಜು. 16: ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಳಿ ಇರಿಸಲಾಗಿದ್ದ ನಿವೃತ್ತ ಟಿ-55 ಯುದ್ಧ ಟ್ಯಾಂಕ್‌ ಅನ್ನು ಕೊನೆಗೂ ಕದ್ರಿಯ ಹುತಾತ್ಮರ ಸ್ಮಾರಕ ಬಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಭಾರತೀಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಈ ಟ್ಯಾಂಕ್ ಅನ್ನು ಪುಣೆಯ ಕಿರ್ಕೀ ಡಿಫೆನ್ಸ್ ಡಿಪೋದಲ್ಲಿ ಇರಿಸಲಾಗಿತ್ತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಯ ಮೇರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದನ್ನು ಮಂಗಳೂರಿನಲ್ಲಿ ಪ್ರದರ್ಶಿಸಲು ಅನುಮತಿ ನೀಡಿದ್ದರು. ಕಳೆದ ವರ್ಷ

ಮಂಗಳೂರು: ಕೊನೆಗೂ ಕದ್ರಿ ವೃತ್ತದಿಂದ ಹುತಾತ್ಮರ ಸ್ಮಾರಕಕ್ಕೆ ಶಿಫ್ಟ್ ಆಯ್ತು ಟಿ-55 ಯುದ್ಧ ಟ್ಯಾಂಕ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಿಯಕರನೊಂದಿಗೆ ಬಂದಿದ್ದ ವಿವಾಹಿತೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಕಲಹ ಸುಖಾಂತ್ಯ!

(ನ್ಯೂಸ್ ಕಡಬ) newskadaba.com ಜು. 16: ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯೊಬ್ಬಳ ಹೈಡ್ರಾಮಾ, ಪೊಲೀಸರ ಸಮಾಲೋಚನೆಯ ನಂತರ ಸುಖಾಂತ್ಯ ಕಂಡಿದೆ.ಮಹಿಳೆ ನಾಪತ್ತೆಯಾಗಿರುವ ಕುರಿತು ಮಾಹಿತಿ ತಿಳಿದ ಪತಿ ಮತ್ತು ಕುಟುಂಬಸ್ಥರು ಕಾರ್ಕಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿವಾಹಿತೆ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.ಠಾಣೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ಕೌನ್ಸಿಲಿಂಗ್ ನಡೆಸಿದ ಪೊಲೀಸರು, ಕುಟುಂಬದ ಜವಾಬ್ದಾರಿ ಮತ್ತು ಭವಿಷ್ಯದ ಕುರಿತು ಮಹಿಳೆಗೆ ಬುದ್ಧಿವಾದ

ಪ್ರಿಯಕರನೊಂದಿಗೆ ಬಂದಿದ್ದ ವಿವಾಹಿತೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಕಲಹ ಸುಖಾಂತ್ಯ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೈಸೂರಲ್ಲಿ ಘೋರ ಕೃತ್ಯ: ಪತಿಯನ್ನು ಕೊಂದು, ಮಗನಿಗೆ ಇರಿದು ಶವದ ಪಕ್ಕದಲ್ಲೇ ಮೊಬೈಲ್ ನೋಡ್ತಾ ಕೂತ ನೇತ್ರ ತಜ್ಞೆ

(ನ್ಯೂಸ್ ಕಡಬ) newskadaba.com ಜು. 16:ಮೈಸೂರು ಇಲ್ಲಿನ ಬಾರಾಕೊಟ್ರಿ ಬಡಾವಣೆಯ ಹೈ-ಸೆಕ್ಯೂರಿಟಿ ಅಪಾರ್ಟ್‌ಮೆಂಟ್ ಒಂದರಲ್ಲಿ ಖ್ಯಾತ ಅರವಳಿಕೆ ತಜ್ಞ ವೈದ್ಯರೊಬ್ಬರ ಭೀಕರ ಕೊಲೆಯಾಗಿದ್ದು, ಇಡೀ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ. ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ (45) ಕೊಲೆಯಾದ ದುರ್ದೈವಿ. ಕೃತ್ಯದ ಹಿನ್ನೆಲೆಯಲ್ಲಿ ಅವರ ಪತ್ನಿ, ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಕೇವಲ

ಮೈಸೂರಲ್ಲಿ ಘೋರ ಕೃತ್ಯ: ಪತಿಯನ್ನು ಕೊಂದು, ಮಗನಿಗೆ ಇರಿದು ಶವದ ಪಕ್ಕದಲ್ಲೇ ಮೊಬೈಲ್ ನೋಡ್ತಾ ಕೂತ ನೇತ್ರ ತಜ್ಞೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ SIR ಅವಧಿ ವಿಸ್ತರಣೆ ಆ. 8 ಗಣತಿ ನಮೂನೆ ವಿತರಣೆ

(ನ್ಯೂಸ್ ಕಡಬ) newskadaba.com ಜು. 16. ಕರ್ನಾಟಕ, ದೆಹಲಿ, ಪಂಜಾಬ್‌ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಜುಲೈ 29ರ ಬದಲಿಗೆ ಆಗಸ್ಟ್ 8ರ ವರೆಗೆ ಗಣತಿ ನಮೂನೆ ವಿತರಿಸಲು ಅವಕಾಶ ನೀಡಲಾಗಿದೆ. ಕರಡು ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ. ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರ ಬದಲಿಗೆ

ರಾಜ್ಯದಲ್ಲಿ SIR ಅವಧಿ ವಿಸ್ತರಣೆ ಆ. 8 ಗಣತಿ ನಮೂನೆ ವಿತರಣೆ Read More »

ಕರಾವಳಿ, ಕರ್ನಾಟಕ, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ!

(ನ್ಯೂಸ್‌ ಕಡಬ) newskadaba.com,  ಜು.16  ಬೆಂಗಳೂರು: ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸಬಹುದು ಎಂದು ಆಮಿಷ ಒಡ್ಡಿ ನಿರುದ್ಯೋಗಿಗಳು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಸೈಬರ್ ಜಾಲ ರಾಜ್ಯದಲ್ಲಿ ತೀವ್ರವಾಗಿ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗ್ರೂಪ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳ ಮೂಲಕ ಅಗರಬತ್ತಿ/ಮೇಣದಬತ್ತಿ ಪ್ಯಾಕಿಂಗ್, ಡೇಟಾ ಎಂಟ್ರಿ, ಪುಸ್ತಕ ಬರೆಯುವುದು ಮತ್ತು ಉತ್ಪನ್ನಗಳ ತಯಾರಿಕೆಯಂತಹ ಕೆಲಸಗಳ ಜಾಹೀರಾತು ನೀಡಿ ಆಕರ್ಷಿಸಲಾಗುತ್ತಿದೆ. ಉದ್ಯೋಗ ನೀಡುವ ನೆಪದಲ್ಲಿ ನೋಂದಣಿ ಶುಲ್ಕ, ಭದ್ರತಾ ಠೇವಣಿ ಹಾಗೂ

ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಧನ ರಫ್ತು ಸುಂಕ ಪರಿಷ್ಕರಣೆ ಡೀಸೆಲ್ ತೆರಿಗೆ ಭಾರಿ ಏರಿಕೆ, ಪೆಟ್ರೋಲ್ ಸುಂಕ ಕಡಿತ

(ನ್ಯೂಸ್‌ ಕಡಬ) newskadaba.com,  ಜು.16 :ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇಂಧನ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಜುಲೈ 16 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಪೆಟ್ರೋಲ್: ರಫ್ತು ಸುಂಕ ಪ್ರತಿ ಲೀಟರ್‌ಗೆ ₹4 ರಿಂದ ₹2.5 ಕ್ಕೆ ಇಳಿಕೆ. ಡೀಸೆಲ್: ರಫ್ತು ಸುಂಕ ಪ್ರತಿ ಲೀಟರ್‌ಗೆ ₹7.5 ರಿಂದ ₹15.5 ಕ್ಕೆ ಭಾರಿ ಏರಿಕೆ (ಸರಿಸುಮಾರು ದುಪ್ಪಟ್ಟು). ವಿಮಾನ ಇಂಧನ (ATF): ರಫ್ತು ಸುಂಕ ಪ್ರತಿ ಲೀಟರ್‌ಗೆ ₹7.5

ಇಂಧನ ರಫ್ತು ಸುಂಕ ಪರಿಷ್ಕರಣೆ ಡೀಸೆಲ್ ತೆರಿಗೆ ಭಾರಿ ಏರಿಕೆ, ಪೆಟ್ರೋಲ್ ಸುಂಕ ಕಡಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ!

(ನ್ಯೂಸ್‌ ಕಡಬ) newskadaba.com,  ಜು.16 : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಮುಂದಿನ ಆರು ತಿಂಗಳೊಳಗೆ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. 2 ತಿಂಗಳಲ್ಲಿ ಅಧಿಸೂಚನೆ, 4 ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ ಹಾಗೂ 6 ತಿಂಗಳೊಳಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸುಮಾರು 40,000 ಹುದ್ದೆಗಳ ನೇಮಕಾತಿ ಉಸ್ತುವಾರಿ ಹೊತ್ತಿದೆ.

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top