ಕ್ರೈಮ್ ನ್ಯೂಸ್

ಅಗ್ನಿ ಅವಘಡ..!! ➤ ಖ್ಯಾತ ಉದ್ಯಮಿ ಉಸಿರುಗಟ್ಟಿ ಮೃತ್ಯು

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.08. ಶಿವಮೊಗ್ಗದಲ್ಲಿ ಅಗ್ನಿ ಅವಘಡದಿಂದ ಮನೆಯೊಳಗೆ ಉಸಿರುಗಟ್ಟಿ ಯುವ ಉದ್ಯಮಿ ಹಾಗೂ ಖ್ಯಾತ ಉದ್ಯಮಿ ದಾನಿ ಮೃತರಾಗಿದ್ದು ಶಿವಮೊಗ್ಗ ಜನರಿಗೆ ಶಾಕ್ ನೀಡಿದೆ‌ ಎನ್ನಲಾಗಿದೆ. ಮೃತಪಟ್ಟವರನ್ನು ಖ್ಯಾತ ಉದ್ಯಮಿ ಭೂಪಾಳಂ ಎಸ್. ಶರತ್(39) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಕುವೆಂಪು ರಸ್ತೆಯಲ್ಲಿ ಜಿ.ಪಂ ಕಚೇರಿ ಎದುರು ಭೂಪಾಳಂ ಕುಟುಂಬದವರ ಮನೆ‌ ಇದೆ. ಇಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.  

ಅಗ್ನಿ ಅವಘಡ..!! ➤ ಖ್ಯಾತ ಉದ್ಯಮಿ ಉಸಿರುಗಟ್ಟಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಹನವೊಂದು ಢಿಕ್ಕಿ ಹೊಡೆದು ಚಿರತೆ ಮೃತ್ಯು..!!

 (ನ್ಯೂಸ್ ಕಡಬ) newskadaba.com ಮೈಸೂರು, ಜ.08.  ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆಯೊಂದು ಮೃತಪಟ್ಟ ಘಟನೆ ಮೈಸೂರು ನಗರದ ರಿಂಗ್ ರಸ್ತೆಯ ಉತ್ತನಹಳ್ಳಿ ಕ್ರಾಸ್ ಬಳಿ ವರದಿಯಾಗಿದೆ. ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆ ರಸ್ತೆ ದಾಟುವ ವೇಳೆ ವಾಹನವೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಚಾಮುಂಡಿ ಬೆಟ್ಟದ ಭಾಗದಲ್ಲಿರುವ

ವಾಹನವೊಂದು ಢಿಕ್ಕಿ ಹೊಡೆದು ಚಿರತೆ ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ದಿಲ್ಲಿ ಪೊಲೀಸರ ಮೇಲೆ ಆಫ್ರಿಕನ್ನರ ಗುಂಪಿನ ದಾಳಿ..!!

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜ.08. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ನೆಲೆಸಿರುವ ಆರೋಪದಲ್ಲಿ ಬಂಧಿಸಲಾಗಿದ್ದ ನೈಜೀರಿಯಾ ಪ್ರಜೆಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ವೇಳೆ ಗುಂಪುಗೂಡಿದ ನೂರಾರು ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧಿತರನ್ನು ಬಿಡುಗಡೆ ಮಾಡಿದ ಘಟನೆ ದಕ್ಷಿಣ ದಿಲ್ಲಿಯ ನೆಬ್ ಸರೈ ಪ್ರದೇಶದಲ್ಲಿ ವರದಿಯಾಗಿದೆ. ದಿಲ್ಲಿನ ಮಾದಕವಸ್ತು ನಿಗ್ರಹ ಘಟಕದ ಪೊಲೀಸರು, ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿ ಉಳಿದುಕೊಂಡಿರುವ ನೈಜೀರಿಯಾದ ಮೂವರು ಪ್ರಜೆಗಳನ್ನು ನೆಬ್ ಸರೈನ ರಾಜು

ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ದಿಲ್ಲಿ ಪೊಲೀಸರ ಮೇಲೆ ಆಫ್ರಿಕನ್ನರ ಗುಂಪಿನ ದಾಳಿ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎನ್‌ಎಎಫ್‌ಎಲ್‌ ಶಾಲೆಗೆ ಬಾಂಬ್‌ ಬೆದರಿಕೆ ಮೇಲ್‌ ಪ್ರಕರಣ..!! ➤ ‘ಐ ಆ್ಯಮ್‌ ಡೂಯಿಂಗ್‌ ಫಾರ್‌ ಫನ್‌’ ಎಂದು ಹೇಳಿಕೆ ಕೊಟ್ಟ ವಿದ್ಯಾರ್ಥಿ..!!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.08. ನ್ಯಾಷನಲ್‌ ಅಕಾಡೆಮಿ ಫಾರ್‌ ಲರ್ನಿಂಗ್‌ ಶಾಲೆಗೆ ಬಾಂಬ್‌ ಸ್ಫೋಟದ ಬೆದರಿಕೆಯೊಡ್ಡಿ ಕಳುಹಿಸಿದ್ದ ಇ-ಮೇಲ್‌ ಮೂಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, 14 ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯು, ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದರೆ ಶಾಲೆಯವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಕುಚೇಷ್ಟೆಯಿಂದ ಇ-ಮೇಲ್‌ ಮಾಡಿದ್ದ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ. ‘ಐ ಆ್ಯಮ್‌ ಡೂಯಿಂಗ್‌

ಎನ್‌ಎಎಫ್‌ಎಲ್‌ ಶಾಲೆಗೆ ಬಾಂಬ್‌ ಬೆದರಿಕೆ ಮೇಲ್‌ ಪ್ರಕರಣ..!! ➤ ‘ಐ ಆ್ಯಮ್‌ ಡೂಯಿಂಗ್‌ ಫಾರ್‌ ಫನ್‌’ ಎಂದು ಹೇಳಿಕೆ ಕೊಟ್ಟ ವಿದ್ಯಾರ್ಥಿ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ನದಿಗೆ..!! ➤  ಮೀನುಗಳ ದಾರುಣ ಅಂತ್ಯ..!!

(ನ್ಯೂಸ್ ಕಡಬ) newskadaba.com  ಗೌರಿ ಬಿದನೂರು, ಜ.08. ಪಿನಾಕಿನಿ ನದಿಯಲ್ಲಿ  ಅಕ್ರಮವಾಗಿ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಸುರಿದಿರುವ ಹಿನ್ನೆಲೆಯಲ್ಲಿ ನದಿಯಲ್ಲಿನ ಮೀನುಗಳ ಮೃತಪಟ್ಟಿವೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ರಸ್ತೆಯ ಉತ್ತರ ಪಿನಾಕಿನಿ ನದಿ ಸೇತುವೆ ಬಳಿ ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕಾರ್ಖಾನೆಯ ತ್ಯಾಜ್ಯವನ್ನು ಈ ಹಿಂದೆ ರಾತ್ರೋರಾತ್ರಿ ರೈತರ ಹೊಲಗಳಲ್ಲಿ ಅಕ್ರಮವಾಗಿ ಬಿಟ್ಟು ಹೋಗುತ್ತಿದ್ದರು. ಆದರೆ ಇದೀಗ ನಗರದ ಹೃದಯ ಭಾಗದಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ಉತ್ತರ ಪಿನಾಕಿನಿ ಸೇತುವೆ ಬಳಿಯ ರಾಸಾಯನಿಕ ತ್ಯಾಜ್ಯವನ್ನು ಸುರಿದಿದ್ದಾರೆ. ಇದರ

ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ನದಿಗೆ..!! ➤  ಮೀನುಗಳ ದಾರುಣ ಅಂತ್ಯ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಂಗಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಕಲಾವಿದ..!!

 (ನ್ಯೂಸ್ ಕಡಬ) newskadaba.com ಮಂಡ್ಯ, ಜ.08. ರಂಗಸ್ಥಳದಲ್ಲೇ ಕುಸಿದುಬಿದ್ದು ಕಲಾವಿದಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಡ್ಯದಲ್ಲಿ ವರದಿಯಾಗಿದೆ. ಮೃತರನ್ನು ನಂಜಯ್ಯ(46) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದ ನಾಟಕದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ವೇದಿಕೆಯ ಮೇಲೆಯೇ ಉಸಿರುಚೆಲ್ಲಿದ್ದಾರೆ. ಘಟನೆ ಬಳಿಕ ಸಹಕಲಾವಿದರು ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿದರು. ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು

ರಂಗಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಕಲಾವಿದ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ.08.  ಬೈಕೊಂದು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಉಳ್ಳಾಲದ ಬಳಿ ವರದಿಯಾಗಿದೆ. ಗಾಯಗೊಂಡವರನ್ನು ಬೈಕ್ ಸವಾರ ಸವಾರ ಚೆಂಬುಗುಡ್ಡೆ ಕೆರೆಬೈಲು ನಿವಾಸಿ ಭೂಷಣೆ ರೈ (20) ಎಂದು ಗುರುತಿಸಲಾಗಿದೆ. ಕಲ್ಲಾಪು ಬುರ್ದುಗೋಳಿ ಕೋಲದಲ್ಲಿ ಭಾಗವಹಿಸಿದ್ದ ಇವರು ಬೈಕಿನಲ್ಲಿ ಕುತ್ತಾರಿನತ್ತ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತಲೆಗೆ ಗಾಯವಾಗಿರುವುದರಿಂದ ಇವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ 

ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಮಡಿಕೇರಿ: ಹಿಂದೂ ಧರ್ಮ ಅವಹೇಳನ ಆರೋಪ ➤  ಆರೋಪಿ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಕೊಡಗು, ಜ.08. ಹಿಂದೂ ಧರ್ಮದ ಅವಹೇಳನ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದ ಘಟನೆ ಕೊಡಗಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿ ನಿಶಾಂತ್ ಹಿಂದೂ ಧರ್ಮ ಅವಹೇಳನ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಕ್ರೈಸ್ತ ಧರ್ಮದ ಪುಸ್ತಕ ಮಾರಾಟ ಮಾಡುವ ವೇಳೆ ಅವಹೇಳನ ಆರೋಪವಿದ್ದು, ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಿಶಾಂತ್ ಪುಸ್ತಕ ಮಾರುತ್ತಿದ್ದ. ಈ ವೇಳೆ ಹಿಂದೂ ದೇವತೆಗಳಿಂದ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ ಎಂದು ಜನರಿಗೆ ಹೇಳಿ ಕ್ರೈಸ್ತಧರ್ಮದ ಬೆಳಕು ಪುಸ್ತಕ ಮಾರಾಟಕ್ಕೆ ಯತ್ನಿಸಿದ್ದಾನೆ. ಈ

ಮಡಿಕೇರಿ: ಹಿಂದೂ ಧರ್ಮ ಅವಹೇಳನ ಆರೋಪ ➤  ಆರೋಪಿ ಅರೆಸ್ಟ್..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಿರಿಯ ಪತ್ರಕರ್ತ ಕೆ.ಸತ್ಯಸಾರಾಯಣ ನಿಧನ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08.  ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರು ಭಾನುವಾರದಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡಪ್ರಭ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಇವರು, ವ್ಯಕ್ತಿ ವಿಚಾರ, ಸಮಕಾಲೀನ .ರಾಜಕೀಯ ವಿಶ್ಲೇಷಣೆ, ಷೇರುಪೇಟೆ ಸಮಾಚಾರ ಅಂಕಣ ಮೂಲಕ ಗಮನ ಸೆಳೆದಿದ್ದರು. ಖಾದ್ರಿ ಶಾನಣ್ಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ತಿಳಿದುಬಂದಿದೆ.ಬೆಂಗಳೂರು ಎಲ್ ಐಸಿ ಕಾಲನಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣದಿಂದ ಅವರು ನಿಧನರಾದರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಕೆ.ಸತ್ಯಸಾರಾಯಣ ನಿಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಿಷೇಧದ ಬೆನ್ನಲ್ಲೇ ಕಾಶ್ಮೀರಿ ಪಂಡಿತರಿಗೆ ಟಿಆರ್‌ಎಫ್‌ ಉಗ್ರರ ಬೆದರಿಕೆ…!!!       

(ನ್ಯೂಸ್ ಕಡಬ) newskadaba.com  ನವದೆಹಲಿ, ಜ.08. ಗೃಹ ಸಚಿವಾಲಯದಿಂದ ದೇಶವ್ಯಾಪಿ ನಿಷೇಧಕ್ಕೊಳಗಾದ ಬೆನ್ನಲ್ಲೇ ಟಿ.ಆರ್‌.ಎಫ್‌ ಉಗ್ರ ಸಂಘಟನೆಯು, ಕಾಶ್ಮೀರಿ ಪಂಡಿತರ ವಿರುದ್ಧ ಹಿಟ್‌ಲಿಸ್ಟ್‌ ಬಿಡುಗಡೆ ಮಾಡುವ ಮೂಲಕ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿದೆ. ಟಿ.ಆರ್‌.ಎಫ್‌ ಜಮ್ಮು ಕಾಶ್ಮೀರದ ಜನರನ್ನು ಭಾರತ ಸರ್ಕಾರದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಪ್ರಚೋದನೆ ನೀಡುತ್ತದೆ ಹಾಗೂ ಉಗ್ರರ ಒಳನುಸುಳುವಿಕೆಗೆ ಮತ್ತು ಪಾಕಿಸ್ತಾನದಿಂದ ಜಮ್ಮು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಮಾದಕ ವಸ್ತುಗಳ ಸಾಗಣೆಗೆ ಪ್ರೇರಣೆ ನೀಡುತ್ತದೆ. ಈ ಹಿಂದೆ ಕೂಡ ಅದು ಕಾಶ್ಮೀರಿ ಪಂಡಿತರಿಗೆ

ನಿಷೇಧದ ಬೆನ್ನಲ್ಲೇ ಕಾಶ್ಮೀರಿ ಪಂಡಿತರಿಗೆ ಟಿಆರ್‌ಎಫ್‌ ಉಗ್ರರ ಬೆದರಿಕೆ…!!!        Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top