ಕರಡಿ ದಾಳಿ- ರೈತನಿಗೆ ಗಾಯ

(ನ್ಯೂಸ್ ಕಡಬ) newskadaba.com ಹೊಸಪೇಟೆ, ಜ.05. ರೈತನೋರ್ವನ ಮೇಲೆ ಕರಡಿಯೊಂದು ದಾಳಿ ಮಾಡಿದ ಪರಿಣಾಮ ರೈತ ಗಾಯಗೊಂಡ ಘಟನೆ ಕಾಕುಬಾಳ ಗ್ರಾಮದ ಹೊರವಲಯದ ಬಳಿ ವರದಿಯಾಗಿದೆ.


ಗಾಯಗೊಂಡವರನ್ನು ಮೂಷ್ಟರಪ್ಪ (58) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಹೊಲಕ್ಕೆ ಹೋಗಿದ್ದ ಸಂದರ್ಭ ಕರಡಿಯೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top