ನಾಲ್ವರು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

(ನ್ಯೂಸ್ ಕಡಬ) newskadaba.com ಶ್ರೀಲಂಕಾ, ಮಾ. 14. ತಮಿಳುನಾಡಿನ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ನಡೆದಿದೆ.

ಬಂಧಿತರನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಣಂ ಕರಾವಳಿ ಗ್ರಾಮದ ಮೀನುಗಾರರಾದ ಎಲ್. ಅರೋಕಿಯ ರಾಜ್ (54), ಎ. ಅಶೋಕ್ (28), ಎ. ಕರುಪ್ಪು (22) ಮತ್ತು ಎಸ್.ಶಕ್ತಿ (21) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪರುಥಿತುರೈನಲ್ಲಿರುವ ಶ್ರೀಲಂಕಾ ನೌಕಾ ನೆಲೆಗೆ ಹೆಚ್ಚಿನ ವಿಚಾರಣೆಗಾಗಿ ಕೊಂಡೊಯ್ಯಲಾಗಿದೆ.

Also Read  ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ            

error: Content is protected !!