ನರೇಂದ್ರ ಮೋದಿ ಹೇಳಿಕೆಗೆ ಬಿ ಎಸ್ಪಿ ಖಂಡನೆ

(ನ್ಯೂಸ್ ಕಡಬ) newskadaba.com ಗುರುಮಠಕಲ್, ಫೆ.12. :ಹಳೆ ಪಿಂಚಣಿ ವ್ಯವಸ್ತೆಯಿಂದ ಮುಂದಿನ ಪೀಳಿಗೆಯ ಭವಿಷ್ಯ ನಾಶವಾಗುತ್ತದೆ’ ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಿ ನೌಕರರ ವಿರೋಧಿ ಧೋರಣೆಯನ್ನು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಖಂಡಿಸಿದ್ದಾರೆ.

ದೇಶದ ಮುಂದಿನ ಪೀಳಿಗೆ ನಿಜಕ್ಕೂ ಅಪಾಯ ಎದುರಿಸುತ್ತಿರುವುದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ದೊಡ್ಡ ಬೆರಳೆಣಿಕೆಯ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಹೆಸರಿನಲ್ಲಿ ಮನ್ನಾ ಮಾಡಿರುವುದರಿಂದ ಎಂದು ಅವರು ಟೀಕಿಸಿದ್ದಾರೆ.

Also Read  ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು       ➤ ಆರೋಪಿ ಅರೆಸ್ಟ್..!

error: Content is protected !!
Scroll to Top