ಉಡುಪಿ : ಸಾಲ ಬಾಧೆಯಿಂದ ಮೀನುಗಾರ ಆತ್ಮಹತ್ಯೆಗೆ ಶರಣು.!

(ನ್ಯೂಸ್ ಕಡಬ) newskadaba.com ಉಡುಪಿ, .01:  ಸಾಲ ಬಾಧೆಯಿಂದ ನೊಂದ ಮೀನುಗಾರರೊರ್ವರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಮೃತ ಮೀನುಗಾರ 42 ವರುಷದ ಕೃಷ್ಣ ಕಾಂಚನ್ ಎಂಬುವವರು ಸುಮಾರು 20 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದರು .ಕಳೆದ 7 ರಿಂದ 8 ತಿಂಗಳಿಂದ ಸಾಲದ ಹಣ ಮರು ಪಾವತಿಸಲಾಗದ ಕಾರಣ ನೊಂದಿದ್ದರು. ಖಿನ್ನತೆಗೆ ಒಳಗಾಗಿದ್ದ ಇವರು ತಮ್ಮ ಹಳೆಯ ಮನೆಯಲ್ಲಿ ಪ್ಯಾನಿಗೆ ಹಗ್ಗ ಬಿಗಿದು ನೇಣಿಗೆ ಶರಣಾಗಿದ್ದಾರೆ. ಮೃತರ ಸಹೋದರ ನವೀನ್ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಪ್ರಜ್ವಲ್ ರೇವಣ್ಣ 'ಸಾಮೂಹಿಕ ಅತ್ಯಾಚಾರಿ' ಎಂದ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕನ ವಿರುದ್ಧ PIL ದಾಖಲು

error: Content is protected !!
Scroll to Top