ಹೈದರಾಬಾದ್ ಎನ್ ಕೌಂಟರ್ ಹಿಂದೆ ಕನ್ನಡ ಪೊಲೀಸ್ ಅಧಿಕಾರಿ



ಹೈದರಾಬಾದ್, ಡಿ. 6: ಹೈದರಾಬಾದ್ ಪಶುವೈದ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಕಾರ್ಯಾಚರಣೆ ಹಿಂದೆ ಕನ್ನಡಿಗರಾದ ಸೈಬರಾಬಾದ್ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನರ.





ಅವರು ಕರ್ನಾಟಕದ ಹುಬ್ಬಳ್ಳಿ ಯವಾರಿದ್ದು, ಈ ಹಿಂದೆ ಆಂಧ್ರಪ್ರದೇಶದ ವಾರಂಗಲ್ ನಲ್ಲಿ ನಡೆದ ಆ್ಯಸಿಡ್ ದಾಳಿಯ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಸುದ್ದಿಯಾಗಿದ್ದರು.






1996ರ ಐಪಿಎಸ್ ಬ್ಯಾಚ್ ನವರಾದ ವಿಶ್ವನಾಥ್ ಆಂಧ್ರಪ್ರದೇಶ ಪೊಲೀಸ್ ಇಲಾಖೆಗೆ ನಿಯೋಜನೆಗೊಂಡಿದ್ದರು.

ಪಶುವೈದ್ಯೆಯ ಆತ್ಯಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ದೇಶದಾದ್ಯಂತ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

 

error: Content is protected !!
Scroll to Top