ಕಾಣೆಯಾಗಿದ್ದ ಕಡಬದ ಯುವಕ ಪ್ರತ್ಯಕ್ಷ ಕೆಲಸ ಹುಡುಕಲು ಬೆಂಗಳೂರಿಗೆ ತೆರಳಿದ್ದಾಗಿ ಯುವಕನ ಹೇಳಿಕೆ



(ನ್ಯೂಸ್‌ ಕಡಬ) newskadaba.com,  ಜು.22 ಕಡಬ: ಉಪ್ಪಿನಂಗಡಿಗೆ ಕೆಲಸಕ್ಕೆಂದು ಹೋಗಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದ್ದ ಕಡಬ ಕಳಾರದ ಅಡ್ಪಾಡಿ ನಿವಾಸಿ ಮಹಮ್ಮದ್ ಅಕ್ಬರ್ (21) ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.







ಕಡಬ ಪೊಲೀಸ್ ಠಾಣೆಗೆ ಹಾಜರಾದ ಅಕ್ಬರ್, ತಾನು ಕಾಣೆಯಾಗಿರಲಿಲ್ಲ. ಯಾರಿಗೂ ತಿಳಿಸದೆ ಕೆಲಸದ ಹುಡುಕಾಟಕ್ಕಾಗಿ ಬೆಂಗಳೂರಿಗೆ ತೆರಳಿದ್ದೆ ಎಂದು ಹೇಳಿಕೆ ನೀಡಿದ್ದಾರೆ.






ಬೆಂಗಳೂರುದಲ್ಲಿ ಕೆಲಸ ಸಿಗದ ಕಾರಣ ಜು.19ರಂದು ವಾಪಸ್ ಹೊರಟು, ಜು.20ರಂದು ಕಡಬಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. ಮನೆಗೆ ಬಂದ ಬಳಿಕವೇ ತಂದೆ ಕಾಣೆ ದೂರು ದಾಖಲಿಸಿರುವ ವಿಚಾರ ತಿಳಿದಿದ್ದು, ತಂದೆಯೊಂದಿಗೆ ಠಾಣೆಗೆ ಹಾಜರಾಗಿ, ಇನ್ನು ಮುಂದೆ ತಿಳಿಸದೆ ಎಲ್ಲಿಗೂ ಹೋಗುವುದಿಲ್ಲ ಎಂದು ಭರವಸೆ ನೀಡಿ ಪ್ರಕರಣ ಮುಕ್ತಾಯಗೊಳಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

error: Content is protected !!
Scroll to Top