ಆನೆ ದಾಳಿಗೆ ಬಲಿಯಾದ ಪತ್ನಿ; ಸಾವಿನಲ್ಲೂ ಸಾರ್ಥಕತೆ ಮೆರೆದು ಕಣ್ಣು ದಾನ ಮಾಡಿದ ಪತಿ!

(ನ್ಯೂಸ್ಕಡಬ) newskadaba.com,ಮೇ.19: ದುಬಾರೆ ಸಾಕಾನೆಗಳ ಕಾದಾಟಕ್ಕೆ ಬಲಿಯಾದ ತುಳಸಿ ಅವರ ಅಂಗಾಂಗ ದಾನ ಮಾಡಲು ಪತಿ ಜೋಯೆಲ್ ಮುಂದಾಗಿದ್ದಾರೆ. ದೇಹ ನಜ್ಜುಗುಜ್ಜಾಗಿರುವುದರಿಂದ ಕಣ್ಣುಗಳನ್ನು ಮಾತ್ರ ದಾನ ಮಾಡಲು ವೈದ್ಯರು ಸೂಚಿಸಿದ್ದಾರೆ.

ಬೇರೆಯವರ ಮೂಲಕ ನನ್ನ ಪತ್ನಿ ಬದುಕಿರಲಿ” ಎಂದು ಜೋಯೆಲ್ ಭಾವುಕರಾಗಿದ್ದಾರೆ. ಇದೇ ವೇಳೆ, ಸ್ಥಳದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಹಾಗೂ ಸಮಯಕ್ಕೆ ಆಂಬ್ಯುಲೆನ್ಸ್ ಸಿಗಲಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top