Cricket; ಅಂಡರ್- 19 ತಂಡಕ್ಕೆ ದ್ರಾವಿಡ್ ಪುತ್ರ ಸಮಿತ್ ಸೇರ್ಪಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ಅವರನ್ನು ಆಸ್ಟ್ರೇಲಿಯ ವಿರುದ್ಧದ ಬಹುರೂಪಿ ಸರಣಿಗೆ ಭಾರತ ಅಂಡರ್‌-19 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪೇಸ್‌‍ ಬೌಲಿಂಗ್‌ ಆಲ್‌ ರೌಂಡರ್‌ ಸಮಿತ್‌, ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ-20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್‌ ಪರ ಆಡುತ್ತಿದ್ದಾರೆ. 18ರ ಹರೆಯದ ಅವರು ಎಂಟು ಪಂದ್ಯಗಳಿಂದ 362 ರನ್‌ ಗಳಿಸಿದರು.

ಸೆಪ್ಟೆಂಬರ್‌ 21, 23 ಮತ್ತು 26 ರಂದು ಮೂರು ಪಂದ್ಯಗಳ ಏಕದಿನ ಸರಣಿಯು ಪುದುಚೇರಿಯಲ್ಲಿ ನಡೆಯಲಿದ್ದು, ಭಾರತವನ್ನು ಉತ್ತರ ಪ್ರದೇಶದ ಮೊಹಮದ್‌ ಅಮಾನ್‌ ಮುನ್ನಡೆಸಲಿದ್ದಾರೆ. ಸರಣಿಯಲ್ಲಿ ಭಾರತದ ಅಂಡರ್‌ 19 ತಂಡದಿಂದ ರುದ್ರ ಪಟೇಲ್‌‍, ಸಾಹಿಲ್‌ ಪರಾಖ್‌, ಕಾರ್ತಿಕೇಯ ಕೆಪಿ, ಮೊಹಮದ್‌ ಅಮಾನ್‌ (ನಾಯಕ), ಕಿರಣ್‌ ಚೋರ್ಮಲೆ, ಅಭಿಗ್ಯಾನ್‌ ಕುಂದು (ಕೀಪರ್‌ ), ಹರ್ವಂಶ್‌ ಸಿಂಗ್‌ ಪಾಂಗಾಲಿಯಾ, ಸಮಿತ್‌ ದ್ರಾವಿಡ್‌, ಯುಧಾಜಿತ್‌ ಗುಹಾ, ಸಮರ್ಥ್‌ ಎನ್‌, ನಿಖಿಲ್‌ ಕುಮಾರ್‌, ಚೇತನ್‌ ಶರ್ಮಾ, ಹಾರ್ದಿಕ್‌ ರಾಜ್‌‍, ರೋಹಿತ್‌ ರಾಜಾವತ್‌, ಮೊಹಮದ್‌ ಏನನ್‌ ಆಡಲಿದ್ದಾರೆ.

error: Content is protected !!

Join the Group

Join WhatsApp Group