ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತ್ಯು.!

(ನ್ಯೂಸ್ ಕಡಬ)newskadaba.com ಲಕಾಡು,ಮೇ.17 ಸೇತುವೆ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪ್ರವಾಸಕ್ಕೆ ಆಗಮಿಸಿದ್ದ ನಾಲ್ವರು ಯುವಕರಲ್ಲಿ ಮೈಸೂರಿನ ಆಲನಹಳ್ಳಿಯ ನಿವಾಸಿ ಸಣ್ಣಮಾದ (ಪುಟ್ಟ) ರವರ ಮಗ ಅಭಿಷೇಕ್ (21), ಅಲತ್ತೂರು ಹುಂಡಿಯ ಮಾದೇವರ ಮಗ ಮಹದೇವ ಪ್ರಸಾದ್ (20) ಮೃತಪಟ್ಟವರು.ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Scroll to Top