ಸೆಕ್ಯುರಿಟಿ ಗಾರ್ಡ್ ಮೇಲೆ ಸನ್ಯಾಸಿಯಿಂದ ಲೈಂಗಿಕ ಕಿರುಕುಳ

(ನ್ಯೂಸ್ ಕಡಬ)newskadaba.com ಪಶ್ಚಿಮ ಬಂಗಾಳ, ಮೇ.08. ಮಾಯಾಪುರದಲ್ಲಿ ಇಸ್ಕಾನ್‌ನ ಪುರುಷ ಭದ್ರತಾ ಸಿಬ್ಬಂದಿ ಮೇಲೆ ಸನ್ಯಾಸಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.


ಈಗಾಗಲೇ ಇಸ್ಕಾನ್ ದೇವಾಲಯದ ಮಹಾರಾಜ್ ಜಗಧಾತ್ರಿ ದಾಸ್ ವಿರುದ್ಧ ನವದ್ವೀಪ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾನಿ ಪಾಲ್ ತಿಳಿಸಿದ್ದಾರೆ.

Scroll to Top