ಬಿಜೆಪಿ ನಾಯಕ ಸುರೇಂದ್ರ ಮಟಿಯಾಲಾ ಹತ್ಯೆಗೈದ 6 ಮಂದಿ ಆರೋಪಿಗಳ ಬಂಧನ..!

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಏ.23 ದಿಲ್ಲಿ ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಸುರೇಂದ್ರ ಮಟಿಯಾಲಾ ಅವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಬಾಲ ಆರೋಪಿಗಳ ಸಹಿತ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಹರಿಯಾಣದ ಬಹದ್ದೂರ್‌ಗಢ ನಿವಾಸಿಗಳಾದ ಸಚಿನ್‌ ಹಾಗೂ ದಿಲ್ಲಿಯ ಪಾಲಮ್‌ ಕಾಲನಿಯ ಅರುಣ್‌ ಛಂದ್‌, ದೀಪಕ್‌ ಬರ್ವಾ, ಹರಿಯಾಣದ ಯೋಗೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ.ಇವರ ಜತೆಗೆ 16 ಮತ್ತು 17 ವರ್ಷದ ಇಬ್ಬರು ಬಾಲಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Scroll to Top