ಚೂರಿಯಿಂದ ಇರಿದು ಯುವಕನ ಕೊಲೆ  

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಮಾ. 09. ಹೋಳಿ ಹಬ್ಬದ ಹಿನ್ನೆಲೆ ಹಲಗೆ ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚೂರಿಯಂದ ಇರಿದು ಕೊಲೆ ಮಾಡಿರುವ ಘಟನೆ ಮುಧೋಳ ನಗರದ ಟೀಚರ್ಸ್​​ ಕಾಲೋನಿಯಲ್ಲಿ ನಡೆದಿದೆ.

ಕೊಲೆಯಾದವರನ್ನು ಮುಧೋಳ ನಗರದ ಟೀಚರ್ಸ್ ಕಾಲೊನಿಯ ಗಿರೀಶ್ ಪಾಲೋಜಿ(22) ಎಂದು ಗುರುತಿಸಲಾಗಿದೆ. ಕಾರ್ತಿಕ ಕಾಂಬಳೆ, ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಕಾರ್ತಿಕ್ ಮಳಗಾವಿ, ಸುಚಿತ್ ಬಂಡಿವಡ್ಡರ್ ಕೊಲೆ ಆರೋಪಿಗಳು.

 

error: Content is protected !!
Scroll to Top