ಪ್ರೀತಿಸಲು ನಿರಾಕರಿಸಿದ ವಿವಾಹಿತ ಮಹಿಳೆ ➤ ಕೊಡಲಿಯಿಂದ ಕೊಚ್ಚಿ ಕೊಂದು ಮೃತದೇಹದೊಂದಿಗೆ ಮಲಗಿದ ಪ್ರೇಮಿ..!

(ನ್ಯೂಸ್ ಕಡಬ) Newskadaba.com ಜೈಪುರ, ಅ. 27. ತನ್ನನ್ನು ಪ್ರೀತಿಸುವಂತೆ ಮಹಿಳೆಯನ್ನು ಪೀಡಿಸುತ್ತಿದ್ದ ಯುವಕನೋರ್ವ ಆಕೆ ಪ್ರೀತಿಸಲು ನಿರಾಕರಿಸಿದಳೆಂದು ಆಕೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಮೃತದೇಹವನ್ನು ತಬ್ಬಿಕೊಂಡು ಮಲಗಿದ ಬೀಭತ್ಸ ಘಟನೆ ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ನಡೆದಿದೆ.

ಹತ್ಯೆಗೀಡಾದ ಮಹಿಳೆಯನ್ನು ಶಾಂತಿ ದೇವಿ ಎಂದು ಗುರುತಿಸಲಾಗಿದೆ. ಈಕೆಗೆ ಇಬ್ಬರು ಗಂಡು ಮಕ್ಕಳಿದ್ದು, ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಪತಿ ಇಲ್ಲದ ವೇಳೆ ಮನೆಗೆ ಬಂದ ಆರೋಪಿ ಗಣೇಶ್, ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದು, ಅದಕ್ಕೆ ಪ್ರತಿಕ್ರಯಿಸಿದ ಮಹಿಳೆ ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರೂ ಪಟ್ಟು ಬಿಡದ ಆತ ಮತ್ತೆ ಮತ್ತೆ ಪೀಡಿಸಿದಾಗ, ನಾನು ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ. ಈ ವೇಳೆ ಆರೋಪಿಯು ಮಹಿಳೆಯನ್ನು ಮನ ಬಂದಂತೆ ಕೊಡಲಿಯಿಂದ ಕೊಚ್ಚಿ ಹಾಕಿದ್ದು, ಬಳಿಕ ಆಕೆಯ ಮೃತದೇಹವನ್ನು ತಬ್ಬಿಕೊಂಡು ಮಲಗಿದ್ದಾನೆ ಎನ್ನಲಾಗಿದೆ.  ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುವವರೆಗೂ ಆತ ಮೃತದೇಹವನ್ನು ತಬ್ಬಿಕೊಂಡು ಮಲಗಿದ್ದ ಎನ್ನಲಾಗಿದೆ. ಈ ಕುರಿತು ಶಾಂತಿ ದೇವಿಯ ಸಹೋದರರು ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಿದ್ದಾರೆ.

 

error: Content is protected !!

Join the Group

Join WhatsApp Group