40 ಕಡೆ ಗೋಡಾನ್ ಗಳ ಮೇಲೆ ಸಿಬಿಐ ರೈಡ್..! ➤ ಅಕ್ಕಿ ಮತ್ತು ಗೋಧಿ ಮಾದರಿ ಸಂಗ್ರಹ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 29. ನೂತನ ಕೃಷಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದೆರಡು ತಿಂಗಳುಗಳಿಂದ ರೈತರು ದೆಹಲಿಯ ಗಡಿ ಭಾಗಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮುಂದುವರಿಸಿದ್ದು, ಈ ನಡುವೆಯೇ, ಕಳೆದ ರಾತ್ರಿ ಸಿಬಿಐ ಅಧಿಕಾರಿಗಳು ಪಂಜಾಬ್ ನಲ್ಲಿ ಸುಮಾರು 40 ದಾಸ್ತಾನು ಕೇಂದ್ರಗಳಿಗೆ ದಾಳಿ ನಡೆಸಿದ್ದಾರೆ.

ಈ ದಾಸ್ತಾನು ಕೇಂದ್ರಗಳಲ್ಲಿ ದಾಸ್ತಾನಿರಿಸಲಾಗಿದ್ದ ಅಕ್ಕಿ ಮತ್ತು ಗೋಧಿ ಮಾದರಿಗಳನ್ನು ಸಿಬಿಐ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಪಂಜಾಬ್ ಗ್ರೇನ್ಸ್ ಪ್ರೊಕ್ಯುರ್ ಮೆಂಟ್ ಕಾರ್ಪೊರೇಶನ್, ಪಂಜಾಬ್ ವೇರ್ ಹೌಸಿಂಗ್ ಮತ್ತು ಫುಡ್ ಕಾರ್ಪೊರೇಶನ್ ಇಂಡಿಯಾಕ್ಕೆ ಸೇರಿದ ದಾಸ್ತಾನು ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ.

error: Content is protected !!

Join the Group

Join WhatsApp Group