ಪುತ್ತೂರು: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.13: ಇಂದು ಪುತ್ತೂರಿನಲ್ಲಿ  KSRTC ಬಸ್ಸ್ ಗಳು ರಸ್ತೆಗಿಳಿಯದೆ ಬೆಂಬಲ ಸೂಚಿಸಿದೆ. ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪುತ್ತೂರಿನ KSRTC ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದ ಬಸ್ಸ್ಗಳು ಕಂಡು ಬಂದಿರಲಿಲ್ಲ.

ಕಳೆದ ದಿನಡಿಪೋದಿಂದ ಬಸ್ ಗಳನ್ನು ತಂಗುದಾಣಕ್ಕೆ ತಂದು ಮುಷ್ಕರದಲ್ಲಿ ತೊಡಗಿಕೊಂಡಿದ್ದರು.ಇನ್ನು ದಿಢೀರ್ ಮುಷ್ಕರದಿಂದ ಮುಂಜಾನೆಯೇ KSRTC ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮೆನೇಜರ್ ಅಧಿಕಾರಿ ವರ್ಗದವರು KSRTC ತಂಗುದಾಣಕ್ಕೆ ಆಗಮಿಸಿದ್ದರು.ಅದರಂತೆ ಇಂದು ಕೂಡ ¸ಸಾರಿಗೆ ಮುಷ್ಕರಕ್ಕೆ ಪುತ್ತೂರಿನಲ್ಲಿ ಬೆಂಬಲ ವ್ಯಕ್ತವಾಗಿದೆ.

 

 

Scroll to Top