ಕಡಬ ತಾಲೂಕಿನಲ್ಲಿ ವಿವಿಧ ಇಲಾಖೆಗಳನ್ನು ತೆರೆಯುವಂತೆ ಕ್ರಮ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಕಡಬ, ನ. 16. ತಾಲೂಕಿಗೆ ಸೇರಬೇಕಾದ ಎಲ್ಲಾ ಇಲಾಖೆಗಳನ್ನು ಶಾಸಕರ  ಜೊತೆ ಚರ್ಚಿಸಿ ಬೇಕಾಗುವ ಮೂಲ ಸೌಕರ್ಯಗಳನ್ನು ಅಳವಡಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

 

ಶನಿವಾರದಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವರ ದರ್ಶನ ಪಡೆದ ಇವರು ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವರ್ಷದೊಳಗಡೆ ಹೆಚ್ಚಿನ ಕಛೇರಿಗಳನ್ನು ತೆರೆಯಲಾಗುವುದು ಎಂದರು.

Scroll to Top