ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ

 (ನ್ಯೂಸ್ ಕಡಬ) newskadaba.com ಬಿ. ಸಿ ರೋಡ್, ಅ. 03. ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಆತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಬಿ. ಸಿ ರೋಡ್ ನಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ ಯವರ ನೇತೃತ್ವದಲ್ಲಿ ಮೊಂಬತ್ತಿ ಜಾಥಾ ಶುಕ್ರವಾರ ನಡೆಯಿತು.

 

ಈ ಸಂದರ್ಭದಲ್ಲಿ ಮಾತಾನಾಡಿದ ರಮಾನಾಥ್ ರೈ ರವರು” ಯೋಗಿ ಆದಿತ್ಯ ನಾಥ್ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ವಿಫಲ ಆಗಿದ್ದು ಕೂಡಲೇ ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಕೇಂದ್ರ ಸರ್ಕಾರ ಇಂತಹ ಕ್ರೂರ ಘಟನೆ ನಡೆಯದಂತೆ ಜವಾಬ್ದಾರಿ ವಹಿಸಬೇಕೆಂದು ಒತ್ತಾಯಿಸಿದರು.

 

Scroll to Top